Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: মুহাম্মদ   আয়াত:

ಮುಹಮ್ಮದ್

اَلَّذِیْنَ كَفَرُوْا وَصَدُّوْا عَنْ سَبِیْلِ اللّٰهِ اَضَلَّ اَعْمَالَهُمْ ۟
ಸತ್ಯನಿಷೇಧಿಸಿ, ಅಲ್ಲಾಹನ ಮಾರ್ಗದಿಂದ ತಡೆದಿರುವರಾರೋ ಅವರ ಕರ್ಮಗಳನ್ನು ಅಲ್ಲಾಹನು ವ್ಯರ್ಥಗೊಳಿಸಿದನು.
আৰবী তাফছীৰসমূহ:
وَالَّذِیْنَ اٰمَنُوْا وَعَمِلُوا الصّٰلِحٰتِ وَاٰمَنُوْا بِمَا نُزِّلَ عَلٰی مُحَمَّدٍ وَّهُوَ الْحَقُّ مِنْ رَّبِّهِمْ ۙ— كَفَّرَ عَنْهُمْ سَیِّاٰتِهِمْ وَاَصْلَحَ بَالَهُمْ ۟
ಯಾರು ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡು, ಮುಹಮ್ಮದ್‌ರವರ ಮೇಲೆ ಅವತೀರ್ಣಗೊಳಿಸಲಾದುದರಲ್ಲಿ ವಿಶ್ವಾಸವಿರಿಸಿದರೋ ವಸ್ತುತಃ ಅದು ಅವರ ಪ್ರಭುವಿನಿಂದ ಇರುವ ಸತ್ಯಧರ್ಮವಾಗಿದೆ. ಅಲ್ಲಾಹನು ಅವರ ಪಾಪಗಳನ್ನು ಅವರಿಂದ ದೂರಮಾಡಿದನು ಮತ್ತು ಅವರ ಸ್ಥಿತಿಯನ್ನು ಉತ್ತಮಗೊಳಿಸಿದನು.
আৰবী তাফছীৰসমূহ:
ذٰلِكَ بِاَنَّ الَّذِیْنَ كَفَرُوا اتَّبَعُوا الْبَاطِلَ وَاَنَّ الَّذِیْنَ اٰمَنُوا اتَّبَعُوا الْحَقَّ مِنْ رَّبِّهِمْ ؕ— كَذٰلِكَ یَضْرِبُ اللّٰهُ لِلنَّاسِ اَمْثَالَهُمْ ۟
ಇದೇಕೆಂದರೆ ಸತ್ಯನಿಷೇಧಿಸಿದವರು ಮಿಥ್ಯವನ್ನು ಅನುಸರಿಸಿದರು ಹಾಗು ಸತ್ಯವಿಶ್ವಾಸಿಗಳು ತಮ್ಮ ಪ್ರಭುವಿನ ಕಡೆಯಿಂದಿರುವ ಸತ್ಯವನ್ನು ಅನುಸರಿಸಿದರು, ಇದೇ ರೀತಿ ಅಲ್ಲಾಹನು ಜನರಿಗೆ ಅವರ ಉಪಮೆಗಳನ್ನು ನೀಡುತ್ತಾನೆ.
আৰবী তাফছীৰসমূহ:
فَاِذَا لَقِیْتُمُ الَّذِیْنَ كَفَرُوْا فَضَرْبَ الرِّقَابِ ؕ— حَتّٰۤی اِذَاۤ اَثْخَنْتُمُوْهُمْ فَشُدُّوا الْوَثَاقَ ۙ— فَاِمَّا مَنًّا بَعْدُ وَاِمَّا فِدَآءً حَتّٰی تَضَعَ الْحَرْبُ اَوْزَارَهَا— ذٰلِكَ ۛؕ— وَلَوْ یَشَآءُ اللّٰهُ لَانْتَصَرَ مِنْهُمْ ۙ— وَلٰكِنْ لِّیَبْلُوَاۡ بَعْضَكُمْ بِبَعْضٍ ؕ— وَالَّذِیْنَ قُتِلُوْا فِیْ سَبِیْلِ اللّٰهِ فَلَنْ یُّضِلَّ اَعْمَالَهُمْ ۟
ಆದುದರಿಂದ ನೀವು ರಣರಂಗದಲ್ಲಿ ಸತ್ಯನಿಷೇಧಿಗಳನ್ನು ಎದುರಾದರೆ (ಕದನ ಸಂದರ್ಭದಲ್ಲಿ) ಅವರ ಕತ್ತುಗಳನ್ನು ಕಡಿಯಿರಿ. ನೀವು ಅವರನ್ನು ಚೆನ್ನಾಗಿ ಸದೆಬಡಿದಾಗ ಕೈದಿಗಳನ್ನು ಬಿಗಿಯಾಗಿ ಕಟ್ಟಿರಿ. ಅನಂತರ ಒಂದೋ ಸೌಜನ್ಯದಿಂದ ಅವರನ್ನು ಬಿಡುಗಡೆಗೊಳಿಸಿರಿ. ಇಲ್ಲವೇ ವಿಮೋಚನಾ ಧನ ಪಡೆಯಿರಿ. ಯುದ್ಧವು ಆಯುಧವನ್ನು ಕೆಳಗಿಳಿಸುವವರೆಗೆ, ಇದುವೇ ಆದೇಶವಾಗಿದೆ. ಅಲ್ಲಾಹನು ಇಚ್ಛಿಸಿರುತ್ತಿದ್ದರೆ ಸ್ವತಃ ಅವನೇ ಅವರಿಂದ ಪ್ರತಿಕಾರ ಪಡೆಯುತ್ತಿದ್ದನು. ಆದರೆ ಇದು ನಿಮ್ಮಲ್ಲಿನ ಕೆಲವರನ್ನು ಇನ್ನು ಕೆಲವರ ಮೂಲಕ ಪರೀಕ್ಷಿಸಲೆಂದಾಗಿದೆ. ಅಲ್ಲಾಹನು ತನ್ನ ಮಾರ್ಗದಲ್ಲಿ ಕೊಲ್ಲಲ್ಪಟ್ಟವರ ಕರ್ಮಗಳನ್ನು ಖಂಡಿತ ವ್ಯರ್ಥಗೊಳಿಸಲಾರನು.
আৰবী তাফছীৰসমূহ:
سَیَهْدِیْهِمْ وَیُصْلِحُ بَالَهُمْ ۟ۚ
ಅವನು ಸಧ್ಯದಲ್ಲೇ ಅವರಿಗೆ ಮಾರ್ಗದರ್ಶನ ಮಾಡುವನು. ಹಾಗು ಅವರ ಸ್ಥಿತಿಯನ್ನು ಸುಧಾರಿಸುವನು.
আৰবী তাফছীৰসমূহ:
وَیُدْخِلُهُمُ الْجَنَّةَ عَرَّفَهَا لَهُمْ ۟
ಮತ್ತು ಅವರಿಗೆ ಪರಿಚಯಿಸಲಾದ ಸ್ವರ್ಗದಲ್ಲಿ ಅವರನ್ನು ಪ್ರವೇಶಗೊಳಿಸುವನು.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْۤا اِنْ تَنْصُرُوا اللّٰهَ یَنْصُرْكُمْ وَیُثَبِّتْ اَقْدَامَكُمْ ۟
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ಸಹಾಯ ಮಾಡಿದರೆ ಅವನೂ ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಸ್ಥಿರಗೊಳಿಸುವನು.
আৰবী তাফছীৰসমূহ:
وَالَّذِیْنَ كَفَرُوْا فَتَعْسًا لَّهُمْ وَاَضَلَّ اَعْمَالَهُمْ ۟
ಇನ್ನು ಸತ್ಯನಿಷೇಧಿಸಿದವರಿಗೆ ನಾಶವಿರಲಿ, ಅಲ್ಲಾಹನು ಅವರ ಕರ್ಮಗಳನ್ನು ವ್ಯರ್ಥಗೊಳಿಸುವನು.
আৰবী তাফছীৰসমূহ:
ذٰلِكَ بِاَنَّهُمْ كَرِهُوْا مَاۤ اَنْزَلَ اللّٰهُ فَاَحْبَطَ اَعْمَالَهُمْ ۟
ಇದೇಕೆಂದರೆ ಅಲ್ಲಾಹನು ಅವತೀರ್ಣಗೊಳಿಸಿರುವ ಕುರ್‌ಆನನ್ನು ಇಷ್ಟಪಡದಿರುವುದರ ಕಾರಣದಿಂದಾಗಿದೆ. ಹೀಗೆ ಅಲ್ಲಾಹನು ಅವರ ಕರ್ಮಗಳನ್ನು ನಿಷ್ಫಲಗೊಳಿಸಿದನು.
আৰবী তাফছীৰসমূহ:
اَفَلَمْ یَسِیْرُوْا فِی الْاَرْضِ فَیَنْظُرُوْا كَیْفَ كَانَ عَاقِبَةُ الَّذِیْنَ مِنْ قَبْلِهِمْ ؕ— دَمَّرَ اللّٰهُ عَلَیْهِمْ ؗ— وَلِلْكٰفِرِیْنَ اَمْثَالُهَا ۟
ಅವರು ತಮಗಿಂತ ಮುಂಚಿನವರ ಪರಿಣಾಮವು ಏನಾಯಿತೆಂಬುದನ್ನು ನೋಡಲು ಭೂಮಿಯಲ್ಲಿ ಸಂಚರಿಸಲಿಲ್ಲವೇ? ಅಲ್ಲಾಹನು ಅವರನ್ನು ಸರ್ವನಾಶ ಮಾಡಿದನು ಮತ್ತು ಸತ್ಯನಿಷೇಧಿಗಳಿಗೆ ಇದೇ ರೀತಿಯ ಶಿಕ್ಷೆಗಳಿರುವುವು
আৰবী তাফছীৰসমূহ:
ذٰلِكَ بِاَنَّ اللّٰهَ مَوْلَی الَّذِیْنَ اٰمَنُوْا وَاَنَّ الْكٰفِرِیْنَ لَا مَوْلٰی لَهُمْ ۟۠
ಇದೇಕೆಂದರೆ ಖಂಡಿತವಾಗಿಯೂ ಅಲ್ಲಾಹನು ಸತ್ಯವಿಶ್ವಾಸಿಗಳ ರಕ್ಷಕಮಿತ್ರನಾಗಿ ರುವನು ಮತ್ತು ನಿಶ್ಚಯವಾಗಿಯು ಸತ್ಯನಿಷೇಧಿಗಳಿಗೆ ಯಾವೊಬ್ಬ ರಕ್ಷಕಮಿತ್ರನಿಲ್ಲ.
আৰবী তাফছীৰসমূহ:
اِنَّ اللّٰهَ یُدْخِلُ الَّذِیْنَ اٰمَنُوْا وَعَمِلُوا الصّٰلِحٰتِ جَنّٰتٍ تَجْرِیْ مِنْ تَحْتِهَا الْاَنْهٰرُ ؕ— وَالَّذِیْنَ كَفَرُوْا یَتَمَتَّعُوْنَ وَیَاْكُلُوْنَ كَمَا تَاْكُلُ الْاَنْعَامُ وَالنَّارُ مَثْوًی لَّهُمْ ۟
ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡಿರುವವರನ್ನು ಖಂಡಿತ ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವನು ಮತ್ತು ಸತ್ಯನಿಷೇಧಿಸಿರುವವರು ಇಹಲೋಕದಲ್ಲಿ ಸುಖಭೋಗಗಳನ್ನು ಅನುಭವಿಸುತ್ತಾ ಜಾನುವಾರುಗಳು ತಿನ್ನುವಂತೆ ತಿನ್ನುತ್ತಿದ್ದಾರೆ. ನರಕಾಗ್ನಿಯೇ ಅವರ ನೆಲೆಯಾಗಿದೆ.
আৰবী তাফছীৰসমূহ:
وَكَاَیِّنْ مِّنْ قَرْیَةٍ هِیَ اَشَدُّ قُوَّةً مِّنْ قَرْیَتِكَ الَّتِیْۤ اَخْرَجَتْكَ ۚ— اَهْلَكْنٰهُمْ فَلَا نَاصِرَ لَهُمْ ۟
ನಿಮ್ಮನ್ನು ಹೊರಹಾಕಿದ ನಿಮ್ಮ ನಾಡಿಗಿಂತಲೂ ಬಲಿಷ್ಠವಾಗಿದ್ದ ಅದೆಷ್ಟೋ ನಾಡುಗಳು ಹಿಂದೆ ಗತಿಸಿವೆ ನಾವು ಅವರನ್ನು ನಾಶಗೊಳಿಸಿಬಿಟ್ಟೆವು ಮತ್ತು ಅವರ ಸಹಾಯಕನಾರೂ ಇರಲಿಲ್ಲ.
আৰবী তাফছীৰসমূহ:
اَفَمَنْ كَانَ عَلٰی بَیِّنَةٍ مِّنْ رَّبِّهٖ كَمَنْ زُیِّنَ لَهٗ سُوْٓءُ عَمَلِهٖ وَاتَّبَعُوْۤا اَهْوَآءَهُمْ ۟
ತನ್ನ ಪ್ರಭುವಿನ ಕಡೆಯಿಂದ ಸುಸ್ಪಷ್ಟ ಆಧಾರದಲ್ಲಿರುವ ಒಬ್ಬ ವ್ಯಕ್ತಿಯು ತನ್ನ ದುಷ್ಕರ್ಮವು ಸುಂದರಗೊಳಿಸಲಾದ, ಮತ್ತು ತನ್ನ ಸ್ವೇಚ್ಛೆಗಳನ್ನು ಅನುಸರಿಸುತ್ತಿರುವ ಮತ್ತೊಬ್ಬ ವ್ಯಕ್ತಿಯಂತಾಗುವನೇ ?
আৰবী তাফছীৰসমূহ:
مَثَلُ الْجَنَّةِ الَّتِیْ وُعِدَ الْمُتَّقُوْنَ ؕ— فِیْهَاۤ اَنْهٰرٌ مِّنْ مَّآءٍ غَیْرِ اٰسِنٍ ۚ— وَاَنْهٰرٌ مِّنْ لَّبَنٍ لَّمْ یَتَغَیَّرْ طَعْمُهٗ ۚ— وَاَنْهٰرٌ مِّنْ خَمْرٍ لَّذَّةٍ لِّلشّٰرِبِیْنَ ۚ۬— وَاَنْهٰرٌ مِّنْ عَسَلٍ مُّصَفًّی ؕ— وَلَهُمْ فِیْهَا مِنْ كُلِّ الثَّمَرٰتِ وَمَغْفِرَةٌ مِّنْ رَّبِّهِمْ ؕ— كَمَنْ هُوَ خَالِدٌ فِی النَّارِ وَسُقُوْا مَآءً حَمِیْمًا فَقَطَّعَ اَمْعَآءَهُمْ ۟
ಭಯಭಕ್ತಿಯುಳ್ಳವರಿಗೆ ವಾಗ್ದಾನ ನೀಡಲಾಗುತ್ತಿರುವ ಸ್ವರ್ಗೋದ್ಯಾನದ ಗುಣವಿಶೇಷ ಹೀಗಿದೆ – ಅದರಲ್ಲಿ ಬದಲಾವಣೆ ಹೊಂದದAತಹ ನೀರಿನ ನದಿಗಳಿವೆ. ರುಚಿ ಬದಲಾಗದಂತಹ ಹಾಲಿನ ನದಿಗಳಿವೆ. ಕುಡಿಯುವವರಿಗೆ ಅತ್ಯಂತ ಸ್ವಾದಿಷ್ಟವಾದ ಮದ್ಯದ ನದಿಗಳಿವೆ ಮತ್ತು ಪರಿಶುದ್ಧಗೊಳಿಸಲಾದ ಜೇನಿನ ನದಿಗಳು ಇವೆ. ಅದರಲ್ಲಿ ಅವರಿಗೆ ಎಲ್ಲ ವಿಧದ ಹಣ್ಣು ಹಂಪಲುಗಳಿವೆ ಮತ್ತು ಅವರಿಗೆ ಅವರ ಪ್ರಭುವಿನ ಕ್ಷಮೆಯೂ ಇದೆ. ಇಂತಹಾ ಸ್ವರ್ಗವಾಸಿಗಳು ನರಕಾಗ್ನಿಯಲ್ಲಿ ಶಾಶ್ವತವಾಗಿರುವ ವ್ಯಕ್ತಿಗಳಂತಾಗುವರೇ ? ಅವರಿಗೆ ಕರುಳುಗಳನ್ನು ಕತ್ತರಿಸುವಂತಹ ಕುದಿಯುವ ನೀರನ್ನು ಕುಡಿಸಲಾಗುವುದು.
আৰবী তাফছীৰসমূহ:
وَمِنْهُمْ مَّنْ یَّسْتَمِعُ اِلَیْكَ ۚ— حَتّٰۤی اِذَا خَرَجُوْا مِنْ عِنْدِكَ قَالُوْا لِلَّذِیْنَ اُوْتُوا الْعِلْمَ مَاذَا قَالَ اٰنِفًا ۫— اُولٰٓىِٕكَ الَّذِیْنَ طَبَعَ اللّٰهُ عَلٰی قُلُوْبِهِمْ وَاتَّبَعُوْۤا اَهْوَآءَهُمْ ۟
(ಓ ಪೈಗಂಬರರೇ) ಅವರಲ್ಲಿ ಕೆಲವು ಕಪಟಿಗಳು ತಮ್ಮ ಮಾತನ್ನು ಕಿವಿಕೊಟ್ಟು ಕೇಳುತ್ತಾರೆ. ಕೊನೆಗೆ ಅವರು ನಿಮ್ಮ ಬಳಿಯಿಂದ ಹೊರಟುಹೋದರೆ ಜ್ಞಾನ ನೀಡಲ್ಪಟ್ಟವರೊಂದಿಗೆ (ಗೇಲಿ ಮಾಡುತ್ತಾ) ಈಗ ಅವರು ಹೇಳಿದ್ದೇನು ? ಎಂದು ಕೇಳುತ್ತಾರೆ, ಅವರ ಹೃದಯಗಳ ಮೇಲೆ ಅಲ್ಲಾಹನು ಮುದ್ರೆಯೊತ್ತಿರುವನು, ಮತ್ತು ಅವರು ತಮ್ಮ ಸ್ವೇಚ್ಛೆಗಳನ್ನು ಅನುಸರಿಸುತ್ತಿದ್ದಾರೆ.
আৰবী তাফছীৰসমূহ:
وَالَّذِیْنَ اهْتَدَوْا زَادَهُمْ هُدًی وَّاٰتٰىهُمْ تَقْوٰىهُمْ ۟
ಸನ್ಮಾರ್ಗ ಹೊಂದಿದವರಿಗೆ ಅಲ್ಲಾಹನು ಇನ್ನಷ್ಟು ಸನ್ಮಾರ್ಗವನ್ನು ಹೆಚ್ಚಿಸಿಕೊಡುತ್ತಾನೆ. ಮತ್ತು ಅವರಿಗೆ ಭಯಭಕ್ತಿಯನ್ನು ದಯಪಾಲಿಸುತ್ತಾನೆ.
আৰবী তাফছীৰসমূহ:
فَهَلْ یَنْظُرُوْنَ اِلَّا السَّاعَةَ اَنْ تَاْتِیَهُمْ بَغْتَةً ۚ— فَقَدْ جَآءَ اَشْرَاطُهَا ۚ— فَاَنّٰی لَهُمْ اِذَا جَآءَتْهُمْ ذِكْرٰىهُمْ ۟
ಅಂತ್ಯಗಳಿಗೆಯು ತಮ್ಮೆಡೆಗೆ ಹಠಾತ್ತನೆ ಬರುವುದನ್ನು ಅವರು ನಿರೀಕ್ಷಿಸುತ್ತಿದ್ದಾರೆಯೇ? ನಿಶ್ಚಯವಾಗಿಯೂ ಅದರ ಕುರುಹುಗಳು ಬಂದುಬಿಟ್ಟಿವೆ. ಇನ್ನು ಅವರೆಡೆಗೆ ಅದು ಬಂದರೆ ಅವರಿಗೆ ಉಪದೇಶ ಪಡೆಯುವ ಅವಕಾಶವೆಲ್ಲಿದೆ?
আৰবী তাফছীৰসমূহ:
فَاعْلَمْ اَنَّهٗ لَاۤ اِلٰهَ اِلَّا اللّٰهُ وَاسْتَغْفِرْ لِذَنْۢبِكَ وَلِلْمُؤْمِنِیْنَ وَالْمُؤْمِنٰتِ ؕ— وَاللّٰهُ یَعْلَمُ مُتَقَلَّبَكُمْ وَمَثْوٰىكُمْ ۟۠
ಓ ಪೈಗಂಬರರೇ ಖಂಡಿತವಾಗಿಯು ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲವೆಂಬುದನ್ನು ಅರಿತುಕೊಳ್ಳಿರಿ ಮತ್ತು ನಿಮ್ಮ ಪರವಾಗಿ ಮತ್ತು ಸತ್ಯವಿಶ್ವಾಸಿ-ವಿಶ್ವಾಸಿನಿಗಳ ಪರವಾಗಿಯು ಕ್ಷಮೆಯನ್ನು ಬೇಡಿರಿ. ನಿಮ್ಮ ಚಟುವಟಿಕೆಗಳನ್ನು ಮತ್ತು ನಿಮ್ಮ ತಂಗುದಾಣವನ್ನು ಅಲ್ಲಾಹನು ಬಲ್ಲನು.
আৰবী তাফছীৰসমূহ:
وَیَقُوْلُ الَّذِیْنَ اٰمَنُوْا لَوْلَا نُزِّلَتْ سُوْرَةٌ ۚ— فَاِذَاۤ اُنْزِلَتْ سُوْرَةٌ مُّحْكَمَةٌ وَّذُكِرَ فِیْهَا الْقِتَالُ ۙ— رَاَیْتَ الَّذِیْنَ فِیْ قُلُوْبِهِمْ مَّرَضٌ یَّنْظُرُوْنَ اِلَیْكَ نَظَرَ الْمَغْشِیِّ عَلَیْهِ مِنَ الْمَوْتِ ؕ— فَاَوْلٰى لَهُمْ ۟ۚ
ಸತ್ಯವಿಶ್ವಾವಿರಿಸಿದವರು ಹೇಳುತ್ತಾರೆ; (ಯುದ್ಧದ ಕುರಿತು) ಒಂದು ಅಧ್ಯಾಯ ಅವತೀರ್ಣಗೊಳಿಸಲಾಗಿಲ್ಲವೇಕೆ? ಬಳಿಕ ನಿಖರವಾದ ನಿಯಮಗಳೊಂದಿಗೆ ಕೂಡಿದ ಒಂದು ಅಧ್ಯಾಯವನ್ನು ಅವತೀರ್ಣ ಗೊಳಿಸಲಾದರೆ ಹಾಗು ಅದರಲ್ಲಿ ಯುದ್ಧದ ಪ್ರಸ್ತಾಪವನ್ನು ಮಾಡಲಾದರೆ ಹೃದಯಗಳಲ್ಲಿ ಕಾಪಟ್ಯದ ರೋಗವಿದ್ದವರು ಮೃತ್ಯು ಆವರಿಸಿದವನೊಬ್ಬನು ನೋಡುವ ಹಾಗೆ ನಿಮ್ಮೆಡೆಗೆ ನೋಡುತ್ತಿರುವುದಾಗಿ ನೀವು ಕಾಣುವಿರಿ, ಆದ್ದರಿಂದ ಅವರಿಗೆ ಅದೆ ತಕ್ಕದ್ದಾಗಿದೆ.
আৰবী তাফছীৰসমূহ:
طَاعَةٌ وَّقَوْلٌ مَّعْرُوْفٌ ۫— فَاِذَا عَزَمَ الْاَمْرُ ۫— فَلَوْ صَدَقُوا اللّٰهَ لَكَانَ خَیْرًا لَّهُمْ ۟ۚ
ಆಜ್ಞಾನುಸರಣೆ ಮತ್ತು ಒಳ್ಳೆಯ ಮಾತು ಅವರಿಗೆ ಉತ್ತಮವಾಗಿತ್ತು. ಇನ್ನು ಯುದ್ಧದ ಸಂಗತಿಯು ನಿರ್ಧರಿಸಲಾದಾಗ ಅವರು ಅಲ್ಲಾಹನೊಡನೆ ಪ್ರಾಮಾಣಿಕರಾಗಿರುತ್ತಿದ್ದರೆ ಅದು ಅವರಿಗೆ ಅತ್ತುö್ಯತ್ತಮವಾಗಿರುತ್ತಿತ್ತು.
আৰবী তাফছীৰসমূহ:
فَهَلْ عَسَیْتُمْ اِنْ تَوَلَّیْتُمْ اَنْ تُفْسِدُوْا فِی الْاَرْضِ وَتُقَطِّعُوْۤا اَرْحَامَكُمْ ۟
ನಿಮಗೆ ಆಡಳಿತಾಧಿಕಾರ ಪ್ರಾಪ್ತವಾದರೆ ನೀವು ಭೂಮಿಯಲ್ಲಿ ಕ್ಷೆÆÃಭೆ ಹರಡುವಿರಿ ಮತ್ತು ಕುಟುಂಬ ಸಂಬAಧಗಳನ್ನು ಮುರಿದುಬಿಡುವಿರಿ ಎಂಬುದೇ ನಿಮ್ಮಿಂದ ನಿರೀಕ್ಷೆಯಿದೆ.
আৰবী তাফছীৰসমূহ:
اُولٰٓىِٕكَ الَّذِیْنَ لَعَنَهُمُ اللّٰهُ فَاَصَمَّهُمْ وَاَعْمٰۤی اَبْصَارَهُمْ ۟
ಅಂಥವರನ್ನು ಅಲ್ಲಾಹನು ಶಪಿಸಿರುವನು ಮತ್ತು ಅವರನ್ನು ಕಿವುಡರನ್ನಾಗಿಯು, ಕುರುಡರನ್ನಾಗಿಯು ಮಾಡಿದ್ದಾನೆ.
আৰবী তাফছীৰসমূহ:
اَفَلَا یَتَدَبَّرُوْنَ الْقُرْاٰنَ اَمْ عَلٰی قُلُوْبٍ اَقْفَالُهَا ۟
ಇವರು ಈ ಕುರ್‌ಆನಿನಲ್ಲಿ ಚಿಂತನೆ ನಡೆಸುವುದಿಲ್ಲವೇ ? ಅಥವ ಅವರ ಹೃದಯಗಳ ಮೇಲೆ ಬೀಗ ಜಡೆದಿದೆಯೇ?
আৰবী তাফছীৰসমূহ:
اِنَّ الَّذِیْنَ ارْتَدُّوْا عَلٰۤی اَدْبَارِهِمْ مِّنْ بَعْدِ مَا تَبَیَّنَ لَهُمُ الْهُدَی ۙ— الشَّیْطٰنُ سَوَّلَ لَهُمْ ؕ— وَاَمْلٰی لَهُمْ ۟
ತಮಗೆ ಸನ್ಮಾರ್ಗವು ಸ್ಪಷ್ಟವಾದ ಬಳಿಕ ತಮ್ಮ ಬೆನ್ನುಗಳನ್ನು ತಿರುಗಿಸುವವರಿಗೆ ಶೈತಾನನು(ಅವರ ಕರ್ಮಗಳನ್ನು) ಮನಮೋಹಕಗೊಳಿಸಿರುವನು ಹಾಗೂ ಅವರನ್ನು ಸಡಿಲುಬಿಟ್ಟಿರುವನು.
আৰবী তাফছীৰসমূহ:
ذٰلِكَ بِاَنَّهُمْ قَالُوْا لِلَّذِیْنَ كَرِهُوْا مَا نَزَّلَ اللّٰهُ سَنُطِیْعُكُمْ فِیْ بَعْضِ الْاَمْرِ ۚ— وَاللّٰهُ یَعْلَمُ اِسْرَارَهُمْ ۟
ಇದೇಕೆಂದರೆ ಅವರು ಅಲ್ಲಾಹನು ಅವತೀರ್ಣಗೊಳಿಸಿರುವ ದಿವ್ಯವಾಣಿಯನ್ನು ಇಷ್ಟಪಡದಿರುವ ಜನರಿಗೆ ನಾವು ಸಧ್ಯವೇ ಕೆಲವೊಂದು ವಿಚಾರಗಳಲ್ಲಿ ನಿಮ್ಮನ್ನು ಅನುಸರಿಸುತ್ತೇವೆ ಎಂದು ಹೇಳಿದರು. ಮತ್ತು ಅಲ್ಲಾಹನು ಅವರ ರಹಸ್ಯ ಮಾತುಗಳನ್ನು ಚೆನ್ನಾಗಿ ಅರಿಯುತ್ತಾನೆ.
আৰবী তাফছীৰসমূহ:
فَكَیْفَ اِذَا تَوَفَّتْهُمُ الْمَلٰٓىِٕكَةُ یَضْرِبُوْنَ وُجُوْهَهُمْ وَاَدْبَارَهُمْ ۟
ದೇವದೂತರು ಅವರ ಆತ್ಮಗಳನ್ನು ವಶಪಡಿಸುತ್ತಾ ಅವರ ಮುಖಗಳ ಮತ್ತು ಬೆನ್ನುಗಳ ಮೇಲೆ ಹೊಡೆಯುವಾಗ ಅವರ ಸ್ಥಿತಿ ಹೇಗಿರಬಹುದು?
আৰবী তাফছীৰসমূহ:
ذٰلِكَ بِاَنَّهُمُ اتَّبَعُوْا مَاۤ اَسْخَطَ اللّٰهَ وَكَرِهُوْا رِضْوَانَهٗ فَاَحْبَطَ اَعْمَالَهُمْ ۟۠
ಇದೇಕೆಂದರೆ ಅವರು ಅಲ್ಲಾಹನಿಗೆ ಕುಪಿತಗೊಳಿಸುವ ಮಾರ್ಗವನ್ನು ಅನುಸರಿಸಿದ ನಿಮಿತ್ತ ಮತ್ತು ಅವನ ಸಂತೃಪ್ತಿಯನ್ನು ಅವರು ಇಷ್ಟಪಡದಿದ್ದುದರ ನಿಮಿತ್ತವಾಗಿದೆ. ಆಗ ಅಲ್ಲಾಹನು ಅವರ ಕರ್ಮಗಳನ್ನು ನಿಷ್ಫಲಗೊಳಿಸಿಬಿಟ್ಟನು.
আৰবী তাফছীৰসমূহ:
اَمْ حَسِبَ الَّذِیْنَ فِیْ قُلُوْبِهِمْ مَّرَضٌ اَنْ لَّنْ یُّخْرِجَ اللّٰهُ اَضْغَانَهُمْ ۟
ಅಥವಾ ಹೃದಯಗಳಲ್ಲಿ ಕಾಪಟ್ಯದ ರೋಗವಿದ್ದವರು ತಮ್ಮ ದ್ವೇಷ-ಗಳನ್ನು ಅಲ್ಲಾಹನು ಹೊರತರಲಾರನೆಂದು ಭಾವಿಸಿಕೊಂಡಿರುವರೇ ?
আৰবী তাফছীৰসমূহ:
وَلَوْ نَشَآءُ لَاَرَیْنٰكَهُمْ فَلَعَرَفْتَهُمْ بِسِیْمٰهُمْ ؕ— وَلَتَعْرِفَنَّهُمْ فِیْ لَحْنِ الْقَوْلِ ؕ— وَاللّٰهُ یَعْلَمُ اَعْمَالَكُمْ ۟
ಮತ್ತು ನಾವಿಚ್ಛಿಸಿರುತ್ತಿದ್ದರೆ ಅವರೆಲ್ಲರನ್ನೂ ನಿನಗೆ ತೋರಿಸಿಕೊಡುತ್ತಿದ್ದೆವು. ಆಗ ನೀವು ಅವರನ್ನು ಅವರ ಮುಖ ಲಕ್ಷಣಗಳಿಂದಲೇ ಗುರುತಿಸಿಕೊಳ್ಳುತ್ತಿದ್ದಿರಿ ಹಾಗು ಖಂಡಿತ ನೀವು ಅವರನ್ನು ಅವರ ಮಾತಿನ ಶೈಲಿಯಿಂದಲೇ ಗುರುತಿಸಿಕೊಳ್ಳುವಿರಿ, ಅಲ್ಲಾಹನು ನಿಮ್ಮ ಸಕಲ ಕರ್ಮಗಳನ್ನು ಚೆನ್ನಾಗಿ ಬಲ್ಲನು.
আৰবী তাফছীৰসমূহ:
وَلَنَبْلُوَنَّكُمْ حَتّٰی نَعْلَمَ الْمُجٰهِدِیْنَ مِنْكُمْ وَالصّٰبِرِیْنَ ۙ— وَنَبْلُوَاۡ اَخْبَارَكُمْ ۟
ನಿಮ್ಮಲ್ಲಿ ಹೋರಾಡುವವರು ಸಹನಾಶೀಲರು ಯಾರೆಂದು ತಿಳಿಯುವ ತನಕ ನಾವು ನಿಮ್ಮನ್ನು ಖಂಡಿತ ಪರೀಕ್ಷೆಗೊಳಪಡಿಸಲಿದ್ದೇವೆ ಮತ್ತು ನಾವು ನಿಮ್ಮ ಸ್ಥಿತಿಗತಿಗಳನ್ನೂ ಪರೀಕ್ಷಿಸುವೆವು.
আৰবী তাফছীৰসমূহ:
اِنَّ الَّذِیْنَ كَفَرُوْا وَصَدُّوْا عَنْ سَبِیْلِ اللّٰهِ وَشَآقُّوا الرَّسُوْلَ مِنْ بَعْدِ مَا تَبَیَّنَ لَهُمُ الْهُدٰی ۙ— لَنْ یَّضُرُّوا اللّٰهَ شَیْـًٔا ؕ— وَسَیُحْبِطُ اَعْمَالَهُمْ ۟
ನಿಶ್ಚಯವಾಗಿಯೂ ತಮಗೆ ಸನ್ಮಾರ್ಗವು ಸ್ಪಷ್ಟವಾದ ಬಳಿಕ ಸತ್ಯವನ್ನು ನಿಷೇಧಿಸಿ, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದು ಅನಂತರ ಸಂದೇಶವಾಹಕರನ್ನು ವಿರೋಧಿಸಿದವರಾರೋ ಅವರು ಅಲ್ಲಾಹನಿಗೆ ಸ್ವಲ್ಪವೂ ಹಾನಿಯನ್ನುಂಟು ಮಾಡಲಾರರು. ಸದ್ಯದಲ್ಲೇ ಅವನು ಅವರ ಕರ್ಮಗಳನ್ನು ನಿಷ್ಫಲಗೊಳಿಸುವನು.
আৰবী তাফছীৰসমূহ:
یٰۤاَیُّهَا الَّذِیْنَ اٰمَنُوْۤا اَطِیْعُوا اللّٰهَ وَاَطِیْعُوا الرَّسُوْلَ وَلَا تُبْطِلُوْۤا اَعْمَالَكُمْ ۟
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಅನುಸರಿಸಿರಿ ಹಾಗು ಸಂದೇಶವಾಹಕರನ್ನು ಅನುಸರಿಸಿರಿ, ಮತ್ತು ನಿಮ್ಮ ಕರ್ಮಗಳನ್ನು ವ್ಯರ್ಥಗೊಳಿಸಬೇಡಿರಿ.
আৰবী তাফছীৰসমূহ:
اِنَّ الَّذِیْنَ كَفَرُوْا وَصَدُّوْا عَنْ سَبِیْلِ اللّٰهِ ثُمَّ مَاتُوْا وَهُمْ كُفَّارٌ فَلَنْ یَّغْفِرَ اللّٰهُ لَهُمْ ۟
ಸತ್ಯನಿಷೇಧಿಸಿ ಅಲ್ಲಾಹನ ಮಾರ್ಗದಿಂದ ತಡೆದು ಅನಂತರ ಸತ್ಯನಿಷೇಧಿಗಳಾಗಿದ್ದ ಪರಿಸ್ಥತಿಯಲ್ಲೇ ಮರಣಹೊಂದಿದವರಿಗೆ ಅಲ್ಲಾಹನು ಎಂದಿಗೂ ಕ್ಷಮಿಸುವುದಿಲ್ಲ.
আৰবী তাফছীৰসমূহ:
فَلَا تَهِنُوْا وَتَدْعُوْۤا اِلَی السَّلْمِ ۖۗ— وَاَنْتُمُ الْاَعْلَوْنَ ۖۗ— وَاللّٰهُ مَعَكُمْ وَلَنْ یَّتِرَكُمْ اَعْمَالَكُمْ ۟
ಆದ್ದರಿಂದ (ಓ ಸತ್ಯವಿಶ್ವಾಸಿಗಳೇ) ನೀವು ಬಲಹೀನರಾಗಬೇಡಿರಿ, ಮತ್ತು ಸಂಧಾನದ ಬೇಡಿಕೆಯನ್ನಿಡಬೇಡಿರಿ, ವಸ್ತುತಃ ನೀವೇ ವಿಜಯಿಗಳಾಗಿರುವಿರಿ. ಅಲ್ಲಾಹನು ನಿಮ್ಮ ಜೊತೆಯಲ್ಲಿದ್ದಾನೆ, ಅವನು ನಿಮ್ಮ ಕರ್ಮಗಳನ್ನು ಖಂಡಿತ ಕಡಿತಗೊಳಿಸುವುದಿಲ್ಲ.
আৰবী তাফছীৰসমূহ:
اِنَّمَا الْحَیٰوةُ الدُّنْیَا لَعِبٌ وَّلَهْوٌ ؕ— وَاِنْ تُؤْمِنُوْا وَتَتَّقُوْا یُؤْتِكُمْ اُجُوْرَكُمْ وَلَا یَسْـَٔلْكُمْ اَمْوَالَكُمْ ۟
ವಾಸ್ತವದಲ್ಲಿ ಇಹಲೋಕದ ಜೀವನವು ಆಟ-ವಿನೋದ ಮಾತ್ರವಾಗಿದೆ. ನೀವು ವಿಶ್ವಾಸವಿರಿಸಿದರೆ ಹಾಗು ಭಯಭಕ್ತಿಯನ್ನು ಹೊಂದಿದರೆ ಅಲ್ಲಾಹನು ನಿಮಗೆ ನಿಮ್ಮ ಪ್ರತಿಫಲವನ್ನು ಕರುಣಿಸುವನು. ಅವನು ನಿಮ್ಮಿಂದ ನಿಮ್ಮ ಸಂಪತ್ತನ್ನು ಕೇಳುವುದಿಲ್ಲ.
আৰবী তাফছীৰসমূহ:
اِنْ یَّسْـَٔلْكُمُوْهَا فَیُحْفِكُمْ تَبْخَلُوْا وَیُخْرِجْ اَضْغَانَكُمْ ۟
ಅವನು ನಿಮ್ಮಿಂದ ಸಂಪತ್ತನ್ನು ಕೇಳಿ ಒತ್ತಾಯ ಮಾಡುತ್ತಿದ್ದರೆ ಆಗ ನೀವು ಜಿಪುಣತೆ ತೋರುತ್ತಿದ್ದಿರಿ ಮತ್ತು ಅವನು ನಿಮ್ಮ ದ್ವೇಷವನ್ನು ಹೊರತರುತ್ತಿದ್ದನು.
আৰবী তাফছীৰসমূহ:
هٰۤاَنْتُمْ هٰۤؤُلَآءِ تُدْعَوْنَ لِتُنْفِقُوْا فِیْ سَبِیْلِ اللّٰهِ ۚ— فَمِنْكُمْ مَّنْ یَّبْخَلُ ۚ— وَمَنْ یَّبْخَلْ فَاِنَّمَا یَبْخَلُ عَنْ نَّفْسِهٖ ؕ— وَاللّٰهُ الْغَنِیُّ وَاَنْتُمُ الْفُقَرَآءُ ۚ— وَاِنْ تَتَوَلَّوْا یَسْتَبْدِلْ قَوْمًا غَیْرَكُمْ ۙ— ثُمَّ لَا یَكُوْنُوْۤا اَمْثَالَكُمْ ۟۠
ತಿಳಿದುಕೊಳ್ಳಿರಿ! ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವ ಸಲುವಾಗಿ ನಿಮ್ಮನ್ನು ಕರೆಯಲಾರದೆ ನಿಮ್ಮಲ್ಲಿ ಕೆಲವರು ಜಿಪುಣತೆ ತೋರತೊಡಗುತ್ತಾರೆ ಮತ್ತು ಯಾರು ಜಿಪುಣತೆ ತೋರುತ್ತಾನೋ ವಾಸ್ತವದಲ್ಲಿ ಅವನು ತನ್ನೊಂದಿಗೆ ಜಿಪುಣತೆ ತೋರುತ್ತಿದ್ದಾನೆ. ಅಲ್ಲಾಹನು ನಿರಪೇಕ್ಷÀನು ಮತ್ತು ನೀವೇ ಅವನ ಅವಲಂಬಿತರು. ಇನ್ನು ನೀವು ವಿಮುಖರಾಗಿಬಿಟ್ಟರೆ ಅವನು ನಿಮ್ಮ ಹೊರತು ಬೇರೊಂದು ಜನಾಂಗವನ್ನು ತರುವನು , ಅವರು ನಿಮ್ಮಂತೆ ಆಗಲಾರರು.
আৰবী তাফছীৰসমূহ:
 
অৰ্থানুবাদ ছুৰা: মুহাম্মদ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ