Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್- ಅನ್ ಆಮ್   ಶ್ಲೋಕ:
وَهُوَ الَّذِیْ یَتَوَفّٰىكُمْ بِالَّیْلِ وَیَعْلَمُ مَا جَرَحْتُمْ بِالنَّهَارِ ثُمَّ یَبْعَثُكُمْ فِیْهِ لِیُقْضٰۤی اَجَلٌ مُّسَمًّی ۚ— ثُمَّ اِلَیْهِ مَرْجِعُكُمْ ثُمَّ یُنَبِّئُكُمْ بِمَا كُنْتُمْ تَعْمَلُوْنَ ۟۠
ಮತ್ತು ಅವನೇ ರಾತ್ರಿಯಲ್ಲಿ ನಿಮ್ಮ ಆತ್ಮಗಳನ್ನು ವಶಪಡಿಸಿಕೊಳ್ಳುತ್ತಾನೆ. ಮತ್ತು ಹಗಲಿನಲ್ಲಿ ನೀವು ಮಾಡಿದ್ದನ್ನೆಲ್ಲ ಅವನು ಅರಿಯುತ್ತಾನೆ. ನಂತರ ಅವನು ನೀವು (ಆಯಸ್ಸಿನ) ನಿಶ್ಚಿತಾವಧಿ ಪೂರ್ತಿಗೊಳಿಸಲೆಂದು ನಿಮ್ಮನ್ನು ಮರುದಿನ ಹಗಲಿನಲ್ಲಿ ಎಚ್ಚರಗೊಳಿಸುತ್ತಾನೆ. ನಂತರ ಅವನೆಡೆಗೇ ನಿಮ್ಮ ಮರಳುವಿಕೆಯಿದೆ. ಅನಂತರ ಅವನು ನೀವು ಮಾಡುತ್ತಿದ್ದುದೆಲ್ಲವನ್ನು ನಿಮಗೆ ತಿಳಿಸಿ ಕೊಡುವನು.
ಅರಬ್ಬಿ ವ್ಯಾಖ್ಯಾನಗಳು:
وَهُوَ الْقَاهِرُ فَوْقَ عِبَادِهٖ وَیُرْسِلُ عَلَیْكُمْ حَفَظَةً ؕ— حَتّٰۤی اِذَا جَآءَ اَحَدَكُمُ الْمَوْتُ تَوَفَّتْهُ رُسُلُنَا وَهُمْ لَا یُفَرِّطُوْنَ ۟
ಅವನು ತನ್ನ ದಾಸರ ಮೇಲೆ ಪರಮಾಧಿಕಾರವುಳ್ಳವನಾಗಿದ್ದಾನೆ. ನಿಮ್ಮ ಮೇಲೆ ಅವನು ದೂತರನ್ನು ಕಾವಲುಗಾರರನ್ನಾಗಿ ಕಳುಹಿಸುತ್ತಾನೆ. ನಿಮ್ಮೊಲ್ಲಬ್ಬನಿಗೆ ಮರಣಾಸನ್ನವಾದಾಗ ನಮ್ಮಿಂದ ನಿಯೋಗಿಸಲಾದ ದೂತರು ಅವನ ಅತ್ಮವನ್ನು ವಶಪಡಿಸಿಕೊಳ್ಳುವರು ಮತ್ತು ಅವರು ಸ್ವಲ್ಪವೂ ಕರ್ತವ್ಯಲೋಪ ಮಾಡಲಾರರು.
ಅರಬ್ಬಿ ವ್ಯಾಖ್ಯಾನಗಳು:
ثُمَّ رُدُّوْۤا اِلَی اللّٰهِ مَوْلٰىهُمُ الْحَقِّ ؕ— اَلَا لَهُ الْحُكْمُ ۫— وَهُوَ اَسْرَعُ الْحٰسِبِیْنَ ۟
ನಂತರ ಅವರೆಲ್ಲರು ತಮ್ಮ ನೈಜ ಒಡೆಯನಾದ ಅಲ್ಲಾಹನೆಡೆಗೆ ಮರಳಿಸಲಾಗುವರು. ಕೇಳಿರಿ: ಆಜ್ಞಾಧಿಕಾರವು ಅಲ್ಲಾಹನದ್ದಾಗಿದೆ ಮತ್ತು ಅವನು ಅತೀ ಶೀಘ್ರವಾಗಿ ಲೆಕ್ಕ ವಿಚಾರಣೆ ನಡೆಸುವವನಾಗಿದ್ದಾನೆ.
ಅರಬ್ಬಿ ವ್ಯಾಖ್ಯಾನಗಳು:
قُلْ مَنْ یُّنَجِّیْكُمْ مِّنْ ظُلُمٰتِ الْبَرِّ وَالْبَحْرِ تَدْعُوْنَهٗ تَضَرُّعًا وَّخُفْیَةً ۚ— لَىِٕنْ اَنْجٰىنَا مِنْ هٰذِهٖ لَنَكُوْنَنَّ مِنَ الشّٰكِرِیْنَ ۟
ಹೇಳಿರಿ: ನಿಮ್ಮನ್ನು ನೆಲ, ಜಲಗಳ ಅಂಧÀಕಾರಗಳಿAದ ರಕ್ಷಿಸುವವನು ಯಾರು? 'ನೀನು ನಮ್ಮನ್ನು (ಈ ಕಷ್ಟಕಾಲದಲ್ಲಿ) ರಕ್ಷಿಸಿದರೆ ಖಂಡಿತ ನಾವು ಕೃತಜ್ಞತೆ ಸಲ್ಲಿಸುವವರೊಂದಿಗೆ ಸೇರುವೆವು' ಎಂದು ದೈನ್ಯತೆಯಿಂದ, ರಹಸ್ಯವಾಗಿ ಅವನನ್ನು ನೀವು ಕರೆದು ಬೇಡುತ್ತೀರಿ.
ಅರಬ್ಬಿ ವ್ಯಾಖ್ಯಾನಗಳು:
قُلِ اللّٰهُ یُنَجِّیْكُمْ مِّنْهَا وَمِنْ كُلِّ كَرْبٍ ثُمَّ اَنْتُمْ تُشْرِكُوْنَ ۟
ಹೇಳಿರಿ: ಅಲ್ಲಾಹನೇ ನಿಮ್ಮನ್ನು ಅವುಗಳಿಂದ ಮತ್ತು ಇತರೆಲ್ಲಾ ವಿಪತ್ತುಗಳಿಂದ ರಕ್ಷಿಸುತ್ತಾನೆ. ಆದರೂ ನೀವು ಸಹಭಾಗಿಗಳನ್ನು ಕಲ್ಪಿಸುತ್ತೀರಿ.
ಅರಬ್ಬಿ ವ್ಯಾಖ್ಯಾನಗಳು:
قُلْ هُوَ الْقَادِرُ عَلٰۤی اَنْ یَّبْعَثَ عَلَیْكُمْ عَذَابًا مِّنْ فَوْقِكُمْ اَوْ مِنْ تَحْتِ اَرْجُلِكُمْ اَوْ یَلْبِسَكُمْ شِیَعًا وَّیُذِیْقَ بَعْضَكُمْ بَاْسَ بَعْضٍ ؕ— اُنْظُرْ كَیْفَ نُصَرِّفُ الْاٰیٰتِ لَعَلَّهُمْ یَفْقَهُوْنَ ۟
ಹೇಳಿರಿ: ನಿಮ್ಮ ಮೇಲ್ಭಾಗದಿಂದ ಅಥವಾ ನಿಮ್ಮ ಪಾದಗಳ ತಳಭಾಗದಿಂದ ನಿಮ್ಮ ಮೇಲೆ ಶಿಕ್ಷೆಯನ್ನು ಎರಗಿಸಲು ಅಥವಾ ನಿಮ್ಮನ್ನು ಹಲವು ಗುಂಪುಗಳನ್ನಾಗಿ ಮಾಡಿ ಮತ್ತು ನಿಮ್ಮಲ್ಲಿ ಕೆಲವರ ದೌರ್ಜನ್ಯವನ್ನು ಇನ್ನೂ ಕೆಲವರು ಅನುಭವಿಸುವಂತೆ ಮಾಡಲೂ ಅವನು ಸಾಮರ್ಥ್ಯವುಳ್ಳವನಾಗಿದ್ದಾನೆ. ನಾವು ದೃಷ್ಟಾಂತಗಳನ್ನು ವಿವಿಧ ರೂಪಗಳಲ್ಲಿ ಹೇಗೆ ವಿವರಿಸಿ ಕೊಡುತ್ತಿದ್ದೇವೆಂಬುದನ್ನು ನೋಡಿರಿ. ಪ್ರಾಯಶಃ ಅವರು ಗ್ರಹಿಸಿಕೊಳ್ಳಬಹುದು.
ಅರಬ್ಬಿ ವ್ಯಾಖ್ಯಾನಗಳು:
وَكَذَّبَ بِهٖ قَوْمُكَ وَهُوَ الْحَقُّ ؕ— قُلْ لَّسْتُ عَلَیْكُمْ بِوَكِیْلٍ ۟ؕ
ಮತ್ತು ಪೈಗಂಬರರೇ ಇದು (ಕುರ್‌ಆನ್) ಸತ್ಯವಾಗಿದ್ದರೂ ನಿಮ್ಮ ಸಮುದಾಯವು ಅದನ್ನು ಸುಳ್ಳಾಗಿಸುತ್ತಿದೆ. ಹೇಳಿರಿ: ನಾನು ನಿಮ್ಮ ಜವಾಬ್ದಾರಿ ಹೊತ್ತವನಲ್ಲ.
ಅರಬ್ಬಿ ವ್ಯಾಖ್ಯಾನಗಳು:
لِكُلِّ نَبَاٍ مُّسْتَقَرٌّ ؗ— وَّسَوْفَ تَعْلَمُوْنَ ۟
ಪ್ರತಿಯೊಂದು ಬರುವ ಘಟನೆಗೆ ಒಂದು ನಿಶ್ಚಿತ ಸಮಯವಿದೆ. ಸದ್ಯದಲ್ಲೇ ನೀವು ಮನಗಾಣುವಿರಿ.
ಅರಬ್ಬಿ ವ್ಯಾಖ್ಯಾನಗಳು:
وَاِذَا رَاَیْتَ الَّذِیْنَ یَخُوْضُوْنَ فِیْۤ اٰیٰتِنَا فَاَعْرِضْ عَنْهُمْ حَتّٰی یَخُوْضُوْا فِیْ حَدِیْثٍ غَیْرِهٖ ؕ— وَاِمَّا یُنْسِیَنَّكَ الشَّیْطٰنُ فَلَا تَقْعُدْ بَعْدَ الذِّكْرٰی مَعَ الْقَوْمِ الظّٰلِمِیْنَ ۟
ಮತ್ತು ನಮ್ಮ ದೃಷ್ಟಾಂತಗಳನ್ನು ಅಪಹಾಸ್ಯ ಮಾಡುವವರನ್ನು ನೀವು ಕಂಡರೆ ಅವರು ಬೇರಾವುದಾದರೂ ವಿಚಾರದಲ್ಲಿ ತೊಡಗುವ ತನಕ ಅವರಿಂದ ದೂರವಿರಿ. ಒಂದುವೇಳೆ ಶೈತಾನನು ತಮ್ಮನ್ನು ಮರೆಯುವಂತೆ ಮಾಡಿದರೆ ಜ್ಞಾಪಕವಾದ ಬಳಿಕ ಅಕ್ರಮಿ ಜನರೊಂದಿಗೆ ಕುಳಿತುಕೊಳ್ಳಬೇಡಿರಿ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್- ಅನ್ ಆಮ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ