Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ತ್ವಾಹಾ   ಶ್ಲೋಕ:
فَاَخْرَجَ لَهُمْ عِجْلًا جَسَدًا لَّهٗ خُوَارٌ فَقَالُوْا هٰذَاۤ اِلٰهُكُمْ وَاِلٰهُ مُوْسٰی ۚۙ۬— فَنَسِیَ ۟ؕ
ಅನಂತರ ಅವನು ಅವರಿಗೋಸ್ಕರ ಒಂದು ಕರುವಿನ ಪ್ರತಿಮೆಯನ್ನು ಹೊರ ತಂದನು. ಅದರಿಂದ ದನದಂತಹ ಶಬ್ದವೂ ಹೊರಡುತ್ತಿತ್ತು. ಅನಂತರ ಸಾಮಿರಿಯ ಅನುಯಾಯಿಗಳು ಇದುವೇ ನಿಮ್ಮ ದೇವರು, ಮೂಸಾನ ದೇವರು. ಆದರೆ ಮೂಸಾ ಮರೆತುಬಿಟ್ಟಿದ್ದಾರೆ ಎಂದನು.
ಅರಬ್ಬಿ ವ್ಯಾಖ್ಯಾನಗಳು:
اَفَلَا یَرَوْنَ اَلَّا یَرْجِعُ اِلَیْهِمْ قَوْلًا ۙ۬— وَّلَا یَمْلِكُ لَهُمْ ضَرًّا وَّلَا نَفْعًا ۟۠
ಅದು ಅವರ ಮಾತಿಗೆ ಯಾವ ಉತ್ತರವನ್ನು ನೀಡಲಾರದೆಂದೂ, ಅದು ಅವರಿಗೆ ಯಾವುದೇ ಹಾನಿಯನ್ನಾಗಲೀ, ಲಾಭವನ್ನಾಗಲೀ ಕೊಡುವ ಅಧಿಕಾರ ಹೊಂದಿಲ್ಲವೆAದು ಈ ಪಥಭ್ರಷ್ಟರು ಕಾಣುವುದಿಲ್ಲವೇ?
ಅರಬ್ಬಿ ವ್ಯಾಖ್ಯಾನಗಳು:
وَلَقَدْ قَالَ لَهُمْ هٰرُوْنُ مِنْ قَبْلُ یٰقَوْمِ اِنَّمَا فُتِنْتُمْ بِهٖ ۚ— وَاِنَّ رَبَّكُمُ الرَّحْمٰنُ فَاتَّبِعُوْنِیْ وَاَطِیْعُوْۤا اَمْرِیْ ۟
ಹಾರೂನ್‌ರವರು (ಮೂಸ ಬರುವುದಕ್ಕಿಂತ) ಮೊದಲೇ ಅವರಿಗೆ ಹೇಳಿದ್ದರು: ಓ ನನ್ನ ಜನಾಂಗವೇ, ನೀವು ಈ ಕರುವಿನ ಮೂಲಕ ಪರೀಕ್ಷೆಗೊಳಗಾಗಿರುವಿರಿ. ನಿಶ್ಚಯವಾಗಿಯು ನಿಮ್ಮ ನೈಜ ಪ್ರಭು ಪರಮ ದಯಾಮಯನಾದ ಅಲ್ಲಾಹನಾಗಿದ್ದಾನೆ. ಆದ್ದರಿಂದ ನೀವೆಲ್ಲರೂ ನನ್ನನ್ನು ಅನುಸರಿಸಿರಿ ಮತ್ತು ನನ್ನ ಆದೇಶವನ್ನು ಪಾಲಿಸಿರಿ.
ಅರಬ್ಬಿ ವ್ಯಾಖ್ಯಾನಗಳು:
قَالُوْا لَنْ نَّبْرَحَ عَلَیْهِ عٰكِفِیْنَ حَتّٰی یَرْجِعَ اِلَیْنَا مُوْسٰی ۟
ಅವರು ಉತ್ತರ ನೀಡಿದರು: ಮೂಸಾ ನಮ್ಮೆಡೆಗೆ ಮರಳಿ ಬರುವವರೆಗೆ ನಾವು ಇದರ ಆರಾಧನೆಯನ್ನೇ ಮಾಡುತ್ತಿರುವೆವು.
ಅರಬ್ಬಿ ವ್ಯಾಖ್ಯಾನಗಳು:
قَالَ یٰهٰرُوْنُ مَا مَنَعَكَ اِذْ رَاَیْتَهُمْ ضَلُّوْۤا ۟ۙ
92&93
ಅರಬ್ಬಿ ವ್ಯಾಖ್ಯಾನಗಳು:
اَلَّا تَتَّبِعَنِ ؕ— اَفَعَصَیْتَ اَمْرِیْ ۟
ಮೂಸಾ ಕೇಳಿದರು: ಓ ಹಾರೂನ್, ಇವರು ಮಾರ್ಗಭ್ರಷ್ಟರಾಗುತ್ತಿರುವುದನ್ನು ಕಂಡಾಗ ನನ್ನ ಅನುಸರಣೆ ಮಾಡದಂತೆ ನಿನ್ನನ್ನು ತಡೆದಿದ್ದಾದರೂ ಏನು? ನೀನು ಸಹ ನನ್ನ ಆದೇಶವನ್ನು ಧಿಕ್ಕರಿಸಿ ಬಿಟ್ಟೆಯಾ?
ಅರಬ್ಬಿ ವ್ಯಾಖ್ಯಾನಗಳು:
قَالَ یَبْنَؤُمَّ لَا تَاْخُذْ بِلِحْیَتِیْ وَلَا بِرَاْسِیْ ۚ— اِنِّیْ خَشِیْتُ اَنْ تَقُوْلَ فَرَّقْتَ بَیْنَ بَنِیْۤ اِسْرَآءِیْلَ وَلَمْ تَرْقُبْ قَوْلِیْ ۟
ಹಾರೂನ್ ಹೇಳಿದರು: ಓ ನನ್ನ ತಾಯಿಯ ಪುತ್ರನೇ, ನೀನು ನನ್ನ ಗಡ್ಡವನ್ನು, ತಲೆಗೂದಲನ್ನು ಹಿಡಿದು ಎಳೆಯಬೇಡ, ನೀನು ಇಸ್ರಾಯೀಲ್ ಸಂತತಿಗಳ ನಡುವೆ ಒಡಕುಂಟು ಮಾಡಿದೆ ಮತ್ತು ನನ್ನ ಮಾತಿಗೆ ಬೆಲೆ ಕೊಡಲಿಲ್ಲವೆಂದು ನೀನು ಹೇಳಬಹುದೆಂದು ನಾನು ಭಯಪಟ್ಟೆ.
ಅರಬ್ಬಿ ವ್ಯಾಖ್ಯಾನಗಳು:
قَالَ فَمَا خَطْبُكَ یٰسَامِرِیُّ ۟
ಮೂಸಾ ಕೇಳಿದರು: ಓ ಸಾಮಿರಿ, ನಿನ್ನ ಸಮಾಚಾರವೇನು?
ಅರಬ್ಬಿ ವ್ಯಾಖ್ಯಾನಗಳು:
قَالَ بَصُرْتُ بِمَا لَمْ یَبْصُرُوْا بِهٖ فَقَبَضْتُ قَبْضَةً مِّنْ اَثَرِ الرَّسُوْلِ فَنَبَذْتُهَا وَكَذٰلِكَ سَوَّلَتْ لِیْ نَفْسِیْ ۟
ಅವನು ಉತ್ತರಿಸಿದನು: ಅವರಿಗೆ ಕಾಣದಂತಹ ವಸ್ತುವೊಂದು ನನಗೆ ಕಂಡಿತು. ಆಗ ನಾನು ದೇವದೂತರ ಹೆಜ್ಜೆ ಗುರಿತಿನಿಂದ ಒಂದು ಹಿಡಿ ಮಣ್ಣನ್ನು ಮುಷ್ಠಿಯಲ್ಲಿ ತೆಗೆದುಕೊಂಡು ಅದರಲ್ಲಿ ಹಾಕಿ ಬಿಟ್ಟೆನು.ಹೀಗೆ ನನ್ನ ಮನಸ್ಸು ನನಗೆ ಇದನ್ನು ಸುಂದರವಾಗಿ ತೋರಿಸಿತು.
ಅರಬ್ಬಿ ವ್ಯಾಖ್ಯಾನಗಳು:
قَالَ فَاذْهَبْ فَاِنَّ لَكَ فِی الْحَیٰوةِ اَنْ تَقُوْلَ لَا مِسَاسَ ۪— وَاِنَّ لَكَ مَوْعِدًا لَّنْ تُخْلَفَهٗ ۚ— وَانْظُرْ اِلٰۤی اِلٰهِكَ الَّذِیْ ظَلْتَ عَلَیْهِ عَاكِفًا ؕ— لَنُحَرِّقَنَّهٗ ثُمَّ لَنَنْسِفَنَّهٗ فِی الْیَمِّ نَسْفًا ۟
ಅವರು ಹೇಳಿದರು: ಹಾಗಾದರೆ ಇಲ್ಲಿಂದ ಹೊರಟು ಹೋಗು. ಐಹಿಕ ಜೀವನದ ನಿನ್ನ ಶಿಕ್ಷೆಯು ಜೀವನವಿಡೀ ನನ್ನನ್ನು ಮುಟ್ಟಬೇಡಿ ಎಂದು ಹೇಳುತ್ತಿರುವುದಾಗಿದೆ ಮತ್ತು ನಿನಗೆ ಇನ್ನೊಂದು ವಾಗ್ದತ್ತ ಸಮಯವೂ ಇದೆ.ಅದು ನಿನ್ನಿಂದ ಎಂದೂ ತಪ್ಪಿಹೋಗದು. ಮತ್ತು ನೀನು ಪೂಜೆಯಲ್ಲಿ ನಿರತನಾಗುತ್ತಿದ್ದ ಆ ನಿನ್ನ ಆರಾಧ್ಯ ದೇವತೆಯನ್ನೂ ನೋಡು. ನಾವದನ್ನು ಸುಟ್ಟು ಬಿಡುವೆವು ಆ ಬಳಿಕ ಅದರ ಬೂದಿಯನ್ನು ಸಮುದ್ರದಲ್ಲಿ ಹಾರಿಸಿ ಬಿಡುವೆವು.
ಅರಬ್ಬಿ ವ್ಯಾಖ್ಯಾನಗಳು:
اِنَّمَاۤ اِلٰهُكُمُ اللّٰهُ الَّذِیْ لَاۤ اِلٰهَ اِلَّا هُوَ ؕ— وَسِعَ كُلَّ شَیْءٍ عِلْمًا ۟
ವಾಸ್ತವದಲ್ಲಿ ನಿಮ್ಮ ನೈಜ ಆರಾಧ್ಯ ಕೇವಲ ಅಲ್ಲಾಹನಾಗಿದ್ದಾನೆ. ಅವನ ಹೊರತು ಇನ್ನಾವ ಆರಾಧ್ಯನಿಲ್ಲ. ಅವನ ಜ್ಞಾನವು ಸಕಲ ವಸ್ತುಗಳನ್ನು ವ್ಯಾಪಿಸಿಕೊಂಡಿದೆ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ತ್ವಾಹಾ
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ