Check out the new design

Firo maanaaji Alqur'aana Teddunde nden - Eggo Kannada ngol - Bashiir Maisoori * - Loowdi firooji ɗi


Firo maanaaji Simoore.: Simoore laɓɓinaama   Aaya.:

ಫುಸ್ಸಿಲತ್

حٰمٓ ۟ۚ
ಹಾ-ಮೀಮ್
Tafsiraaɗe Aarabu ɗen:
تَنْزِیْلٌ مِّنَ الرَّحْمٰنِ الرَّحِیْمِ ۟ۚ
ಇದು ಪರಮದಯಾಮಯನು, ಕರುಣಾನಿಧಿಯು ಆದವನಕಡೆಯಿಂದ ಅವತೀರ್ಣಗೊಂಡಿದೆ.
Tafsiraaɗe Aarabu ɗen:
كِتٰبٌ فُصِّلَتْ اٰیٰتُهٗ قُرْاٰنًا عَرَبِیًّا لِّقَوْمٍ یَّعْلَمُوْنَ ۟ۙ
ಇದು ಸೂಕ್ತಿಗಳನ್ನು ಸ್ಪಷ್ಟವಾಗಿ ವಿವರಿಸಲಾದ ಒಂದು ಗ್ರಂಥ, ಅರಿವುಳ್ಳ ಜನರಿಗೆ ಅರಬೀ ಭಾಷೆಯಲ್ಲಿ ಪಾರಾಯಣ ಮಾಡುವ ಗ್ರಂಥ.
Tafsiraaɗe Aarabu ɗen:
بَشِیْرًا وَّنَذِیْرًا ۚ— فَاَعْرَضَ اَكْثَرُهُمْ فَهُمْ لَا یَسْمَعُوْنَ ۟
ಸುವಾರ್ತೆ ಹಾಗು ಮುನ್ನೆಚ್ಚರಿಕೆ ನೀಡುವಗ್ರಂಥ. ಆದರೂಅವರ ಪೈಕಿ ಹೆಚ್ಚಿನವರು ವಿಮುಖರಾದರು. ಅವರು ಆಲಿಸುವುದಿಲ್ಲ.
Tafsiraaɗe Aarabu ɗen:
وَقَالُوْا قُلُوْبُنَا فِیْۤ اَكِنَّةٍ مِّمَّا تَدْعُوْنَاۤ اِلَیْهِ وَفِیْۤ اٰذَانِنَا وَقْرٌ وَّمِنْ بَیْنِنَا وَبَیْنِكَ حِجَابٌ فَاعْمَلْ اِنَّنَا عٰمِلُوْنَ ۟
ಅವರು ಹೇಳುತ್ತಾರೆ: ನೀವು ಯಾವುದರೆಡೆಗೆ ನಮ್ಮನ್ನು ಅಹ್ವಾನಿಸುತ್ತಿರುವಿರೋ ಅದರ ಬಗ್ಗೆ ನಮ್ಮ ಹೃದಯಗಳು ಪರದೆಯಲ್ಲಿವೆ ಮತ್ತು ನಮ್ಮ ಕಿವಿಗಳು ಕಿವುಡಾಗಿದೆ ಹಾಗೂ ನಮ್ಮ ಮತ್ತು ನಿಮ್ಮ ನಡುವೆ ಒಂದು ತೆರೆ ಬಿದ್ದಿದೆ. ಆದ್ದರಿಂದ ನೀವು ನಿಮ್ಮಕಾರ್ಯವೆಸಗಿ, ಮತ್ತು ನಾವು ನಮ್ಮ ಕಾರ್ಯವೆಸಗುತ್ತೇವೆ.
Tafsiraaɗe Aarabu ɗen:
قُلْ اِنَّمَاۤ اَنَا بَشَرٌ مِّثْلُكُمْ یُوْحٰۤی اِلَیَّ اَنَّمَاۤ اِلٰهُكُمْ اِلٰهٌ وَّاحِدٌ فَاسْتَقِیْمُوْۤا اِلَیْهِ وَاسْتَغْفِرُوْهُ ؕ— وَوَیْلٌ لِّلْمُشْرِكِیْنَ ۟ۙ
ಓ ಪ್ರವಾದಿಯವರೇ ಹೇಳಿರಿ: ನಾನು ನಿಮ್ಮಂತಹ ಒಬ್ಬ ಮನುಷ್ಯನಾಗಿದ್ದೇನೆ. ನಿಮ್ಮ ಆರಾಧ್ಯನು ಏಕೈಕ ಆರಾಧ್ಯನೆಂದು ನನ್ನೆಡೆಗೆ ದಿವ್ಯವಾಣಿ ಮಾಡಲಾಗುತ್ತದೆ. ಆದ್ದರಿಂದ ನೀವು ಅವನೆಡೆಗೆ ಸ್ಥಿರಚಿತ್ತರಾಗಿ ಅವನಲ್ಲಿ ಕ್ಷಮೆ ಬೇಡಿರಿ ಮತ್ತು ಬಹುದೇವಾರಾಧಕರಿಗೆ ಮಹಾನಾಶವಿದೆ.
Tafsiraaɗe Aarabu ɗen:
الَّذِیْنَ لَا یُؤْتُوْنَ الزَّكٰوةَ وَهُمْ بِالْاٰخِرَةِ هُمْ كٰفِرُوْنَ ۟
ಅವರು ಝಕಾತ್" ನೀಡದವರು ಮತ್ತು ಪರಲೋಕವನ್ನು ನಿಷೇಧಿಸುವವರಾಗಿದ್ದಾರೆ.
Tafsiraaɗe Aarabu ɗen:
اِنَّ الَّذِیْنَ اٰمَنُوْا وَعَمِلُوا الصّٰلِحٰتِ لَهُمْ اَجْرٌ غَیْرُ مَمْنُوْنٍ ۟۠
ಖಂಡಿತವಾಗಿಯು ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಳ್ಳುವವರಿಗೆ ಅನಂತ ಪ್ರತಿಫಲವಿದೆ.
Tafsiraaɗe Aarabu ɗen:
قُلْ اَىِٕنَّكُمْ لَتَكْفُرُوْنَ بِالَّذِیْ خَلَقَ الْاَرْضَ فِیْ یَوْمَیْنِ وَتَجْعَلُوْنَ لَهٗۤ اَنْدَادًا ؕ— ذٰلِكَ رَبُّ الْعٰلَمِیْنَ ۟ۚ
ಹೇಳಿರಿ: ನೀವು ಭೂಮಿಯನ್ನು ಎರಡು ದಿನಗಳಲ್ಲಿ ಸೃಷ್ಟಿಸಿದ ಅಲ್ಲಾಹನನ್ನು ನಿರಾಕರಿಸುತ್ತಿದ್ದೀರಾ? ಹಾಗೂ ಇತರರನ್ನು ಅವನಿಗೆ ಸರಿಸಮಾನರನ್ನಾಗಿ ಕಲ್ಪಿಸುತ್ತಿದ್ದೀರಾ? ಅವನೇ ಸರ್ವಲೋಕಗಳ ಪಾಲಕ ಪ್ರಭು.
Tafsiraaɗe Aarabu ɗen:
وَجَعَلَ فِیْهَا رَوَاسِیَ مِنْ فَوْقِهَا وَبٰرَكَ فِیْهَا وَقَدَّرَ فِیْهَاۤ اَقْوَاتَهَا فِیْۤ اَرْبَعَةِ اَیَّامٍ ؕ— سَوَآءً لِّلسَّآىِٕلِیْنَ ۟
ಅವನು ಭೂಮಿಯ ಮೇಲೆ ಪರ್ವತಗಳನ್ನು ನಾಟಿಬಿಟ್ಟನು. ಮತ್ತು ಅದರಲ್ಲಿ ಸಮೃದ್ಧಿಯನ್ನು ಇರಿಸಿದನು. ಹಾಗೂ ನಾಲ್ಕು ದಿನಗಳಲ್ಲಿ ಅಪೇಕ್ಷಕರಿಗೆ ಅವರ ಅಗತ್ಯಕ್ಕೆ ತಕ್ಕಂತೆ ಅದರಲ್ಲಿ ಆಹಾರದ ವ್ಯವಸ್ಥೆಯನ್ನು ಮಾಡಿದನು.
Tafsiraaɗe Aarabu ɗen:
ثُمَّ اسْتَوٰۤی اِلَی السَّمَآءِ وَهِیَ دُخَانٌ فَقَالَ لَهَا وَلِلْاَرْضِ ائْتِیَا طَوْعًا اَوْ كَرْهًا ؕ— قَالَتَاۤ اَتَیْنَا طَآىِٕعِیْنَ ۟
ಬಳಿಕ ಅವನು ಆಕಾಶದೆಡೆಗೆ ಗಮನಹರಿಸಿದನು ಅದು ಧೂಮವಾಗಿತ್ತು. ಆಗ ಅವನು(ಅಲ್ಲಾಹ್) ಅದಕ್ಕೂ, ಭೂಮಿಗೂ ಹೇಳಿದನು: ನೀವಿಬ್ಬರೂ ವಿಧೇಯರಾಗಿ ಇಲ್ಲವೇ ಅನಿವಾರ್ಯವಾಗಿ ಬಂದು ಬಿಡಿರಿ. ಅವೆರಡೂ ನಾವು ವಿಧೇಯರಾಗಿ ಬಂದೆವು ಎಂದು ಹೇಳಿದವು.
Tafsiraaɗe Aarabu ɗen:
فَقَضٰىهُنَّ سَبْعَ سَمٰوَاتٍ فِیْ یَوْمَیْنِ وَاَوْحٰی فِیْ كُلِّ سَمَآءٍ اَمْرَهَا وَزَیَّنَّا السَّمَآءَ الدُّنْیَا بِمَصَابِیْحَ ۖۗ— وَحِفْظًا ؕ— ذٰلِكَ تَقْدِیْرُ الْعَزِیْزِ الْعَلِیْمِ ۟
ಆಗ ಅವನು ಎರಡು ದಿನಗಳಲ್ಲಿ ಏಳು ಆಕಾಶಗಳನ್ನುಂಟು ಮಾಡಿದನು. ಹಾಗೂ ಪ್ರತಿಯೊಂದು ಆಕಾಶದಲ್ಲೂ ಅದಕ್ಕೆ ಯೋಗ್ಯವಾದ ನಿಯಮವನ್ನು ದಿವ್ಯ ವಾಣಿಯ ಮೂಲಕ ನೀಡಿದನು ಮತ್ತು ನಾವು ಜಗದ ಆಕಾಶವನ್ನು ದೀಪಗಳಿಂದ ಅಲಂಕರಿಸಿದ್ದೇವೆ ಹಾಗೂ ಸಂರಕ್ಷಣೆಯನ್ನು ಮಾಡಿದ್ದೇವೆ. ಇದು ಬಲಾಢ್ಯನೂ, ಸರ್ವಜ್ಞನೂ ಆದ ಅಲ್ಲಾಹನ ಯೋಜನೆಯಾಗಿದೆ.
Tafsiraaɗe Aarabu ɗen:
فَاِنْ اَعْرَضُوْا فَقُلْ اَنْذَرْتُكُمْ صٰعِقَةً مِّثْلَ صٰعِقَةِ عَادٍ وَّثَمُوْدَ ۟ؕ
ಇನ್ನು ಅವರು ವಿಮುಖರಾದರೆ ನೀವು ಹೇಳಿರಿ: ನಾನು ನಿಮಗೆ ಆದ್ ಮತ್ತು ಸಮೂದರಿಗೆ ಬಾಧಿಸಿದ ಆರ್ಭಟದಂತಿರುವ ಒಂದು ಘೋರ ಆರ್ಭಟದ ಎಚ್ಚರಿಕೆ ನೀಡುತ್ತೇನೆ.
Tafsiraaɗe Aarabu ɗen:
اِذْ جَآءَتْهُمُ الرُّسُلُ مِنْ بَیْنِ اَیْدِیْهِمْ وَمِنْ خَلْفِهِمْ اَلَّا تَعْبُدُوْۤا اِلَّا اللّٰهَ ؕ— قَالُوْا لَوْ شَآءَ رَبُّنَا لَاَنْزَلَ مَلٰٓىِٕكَةً فَاِنَّا بِمَاۤ اُرْسِلْتُمْ بِهٖ كٰفِرُوْنَ ۟
ಅವರ ಬಳಿಗೆ ಸಂದೇಶವಾಹಕರು ಅವರ ಮುಂದಿನಿAದಲೂ, ಅವರ ಹಿಂದಿನಿAದಲೂ ಬಂದು: ನೀವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸಬೇಡಿರಿ ಎಂದಾಗ ಅವರು ನಮ್ಮ ಪ್ರಭುವು ಇಚ್ಛಿಸುತ್ತಿದ್ದರೆ ಮಲಕ್‌ಗಳನ್ನು ಕಳುಹಿಸುತ್ತಿದ್ದನು. ಆದುದರಿಂದ ನಿಮ್ಮನ್ನು ಯಾವ ಸಂದೇಶದ ಮೂಲಕ ಕಳುಹಿಸಲಾಗಿದೆಯೋ ಅದನ್ನು ನಾವು ನಿರಾಕರಿಸುತ್ತೇವೆ ಎಂದರು.
Tafsiraaɗe Aarabu ɗen:
فَاَمَّا عَادٌ فَاسْتَكْبَرُوْا فِی الْاَرْضِ بِغَیْرِ الْحَقِّ وَقَالُوْا مَنْ اَشَدُّ مِنَّا قُوَّةً ؕ— اَوَلَمْ یَرَوْا اَنَّ اللّٰهَ الَّذِیْ خَلَقَهُمْ هُوَ اَشَدُّ مِنْهُمْ قُوَّةً ؕ— وَكَانُوْا بِاٰیٰتِنَا یَجْحَدُوْنَ ۟
ಆದ್ ಜನಾಂಗದವರು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರ ತೋರುತ್ತಿದ್ದರು ಮತ್ತು ನಮಗಿಂತಲೂ ಶಕ್ತಿ ಸಾಮರ್ಥ್ಯದಲ್ಲಿ ಮಿಗಿಲಾದವರು ಯಾರಿದ್ದಾರೆ? ಎನ್ನುತ್ತಿದ್ದರು. ಅವರನ್ನು ಸೃಷ್ಟಿಸಿದವನಾದ ಅಲ್ಲಾಹನು ಅವರಿಗಿಂತ ಆದಷ್ಟೋ ಹೆಚ್ಚು ಬಲಿಷ್ಠನೆಂಬುದು ಅವರಿಗೆ ಕಾಣಲಿಲ್ಲವೇ? ಮಾತ್ರವಲ್ಲದೆ ಅವರು ನಮ್ಮದೃಷ್ಟಾಂತಗಳನ್ನು ನಿರಾಕರಿಸುತ್ತಿದ್ದರು.
Tafsiraaɗe Aarabu ɗen:
فَاَرْسَلْنَا عَلَیْهِمْ رِیْحًا صَرْصَرًا فِیْۤ اَیَّامٍ نَّحِسَاتٍ لِّنُذِیْقَهُمْ عَذَابَ الْخِزْیِ فِی الْحَیٰوةِ الدُّنْیَا ؕ— وَلَعَذَابُ الْاٰخِرَةِ اَخْزٰی وَهُمْ لَا یُنْصَرُوْنَ ۟
ಆದ್ದರಿಂದ ನಾವು ಅವರಿಗೆ ಲೌಕಿಕ ಜೀವನದಲ್ಲೇ ಅಪಮಾನಕರ ಯಾತನೆಯನ್ನು ಸವಿಸಲೆಂದು ಭೀಕರ ಗಾಳಿಯನ್ನು ಅಶುಭಕರ ದಿನಗಳಲ್ಲಿ ಕಳುಹಿಸಿದೆವು ಮತ್ತು ಪರಲೋಕದ ಯಾತನೆಯು ಅದಕ್ಕಿಂತಲೂ ಅಪಮಾನಕರವಾಗಿದೆ. ಮತ್ತು ಅವರಿಗೆ ಸಹಾಯವು ನೀಡಲಾಗದು.
Tafsiraaɗe Aarabu ɗen:
وَاَمَّا ثَمُوْدُ فَهَدَیْنٰهُمْ فَاسْتَحَبُّوا الْعَمٰی عَلَی الْهُدٰی فَاَخَذَتْهُمْ صٰعِقَةُ الْعَذَابِ الْهُوْنِ بِمَا كَانُوْا یَكْسِبُوْنَ ۟ۚ
ಇನ್ನು ಸಮೂದ್ ಜನಾಂಗಕ್ಕೆ ನಾವು ಸನ್ಮಾರ್ಗವನ್ನು ತೋರಿಸಿದೆವು. ಆದರೆ ಅವರು ಸನ್ಮಾರ್ಗಕ್ಕಿಂತ ಅಂಧತೆಯನ್ನೇ ಮೆಚ್ಚಿಕೊಂಡರು. ಆಗ ಅವರನ್ನು ಅವರ ದುಷ್ಕರ್ಮಗಳ ನಿಮಿತ್ತ ಅಪಮಾನಕರ ಯಾತನೆಯ ರೂಪದಲ್ಲಿ ಘೋರ ಆರ್ಭಟವು ಹಿಡಿದು ಬಟ್ಟಿತು.
Tafsiraaɗe Aarabu ɗen:
وَنَجَّیْنَا الَّذِیْنَ اٰمَنُوْا وَكَانُوْا یَتَّقُوْنَ ۟۠
ಮತ್ತು ಸತ್ಯವಿಶ್ವಾಸವನ್ನಿರಿಸಿ, ಭಯಭಕ್ತಿ ತೋರಿದವರನ್ನು ನಾವು ರಕ್ಷಿಸಿದೆವು
Tafsiraaɗe Aarabu ɗen:
وَیَوْمَ یُحْشَرُ اَعْدَآءُ اللّٰهِ اِلَی النَّارِ فَهُمْ یُوْزَعُوْنَ ۟
ಅಲ್ಲಾಹನ ಶತ್ರುಗಳನ್ನು ನರಕದೆಡೆಗೆ ಒಟ್ಟು ಗೂಡಿಸಲಾಗುವ ದಿನ ಅವರು ತಂಡೋಪ ತಂಡಗಳಾಗಿ ಒಟ್ಟು ಗೂಡಿಸಲಾಗುವರು.
Tafsiraaɗe Aarabu ɗen:
حَتّٰۤی اِذَا مَا جَآءُوْهَا شَهِدَ عَلَیْهِمْ سَمْعُهُمْ وَاَبْصَارُهُمْ وَجُلُوْدُهُمْ بِمَا كَانُوْا یَعْمَلُوْنَ ۟
ಕೊನೆಗೆ ಅವರು ನರಕದ ಸಮೀಪಕ್ಕೆ ಬಂದಾಗ ಅವರ ಕಿವಿಗಳೂ, ಕಣ್ಣುಗಳೂ, ಚರ್ಮಗಳೂ ಅವರು ಮಾಡುತ್ತಿದ್ದುದರ ಕುರಿತು ಸಾಕ್ಷಿ ಹೇಳುವುವು.
Tafsiraaɗe Aarabu ɗen:
وَقَالُوْا لِجُلُوْدِهِمْ لِمَ شَهِدْتُّمْ عَلَیْنَا ؕ— قَالُوْۤا اَنْطَقَنَا اللّٰهُ الَّذِیْۤ اَنْطَقَ كُلَّ شَیْءٍ وَّهُوَ خَلَقَكُمْ اَوَّلَ مَرَّةٍ وَّاِلَیْهِ تُرْجَعُوْنَ ۟
ಅವರು ತಮ್ಮ ಚರ್ಮಗಳೊಡನೆ ಹೀಗೆ ಕೇಳುವರು ನೀವೇಕೆ ನಮ್ಮ ವಿರುದ್ಧ ಸಾಕ್ಷಿ ನೀಡಿದಿರಿ? ಆಗ ಅವು ಪ್ರತಿಯೊಂದು ವಸ್ತುವಿಗೂ ಮಾತನಾಡುವ ಶಕ್ತಿಯನ್ನು ನೀಡಿದ ಅಲ್ಲಾಹನೇ ನಮಗೂ ಮಾತನಾಡುವ ಶಕ್ತಿಯನ್ನು ನೀಡಿದ್ದಾನೆ ಎಂದು ಹೇಳುವರು. ಅವನೇ ನಿಮ್ಮನ್ನು ಮೊದಲ ಬಾರಿಗೆ ಸೃಷ್ಟಿಸಿದ್ದಾನೆ ಮತ್ತು ಅವನೆಡೆಗೇ ನೀವು ಮರಳಿಸಲಾಗುವಿರಿ.
Tafsiraaɗe Aarabu ɗen:
وَمَا كُنْتُمْ تَسْتَتِرُوْنَ اَنْ یَّشْهَدَ عَلَیْكُمْ سَمْعُكُمْ وَلَاۤ اَبْصَارُكُمْ وَلَا جُلُوْدُكُمْ وَلٰكِنْ ظَنَنْتُمْ اَنَّ اللّٰهَ لَا یَعْلَمُ كَثِیْرًا مِّمَّا تَعْمَلُوْنَ ۟
ನೀವು ಅಪರಾಧಗಳನ್ನೆಸಗುತ್ತಿದ್ದಾಗ ನಿಮ್ಮ ಕಿವಿಗಳು, ಕಣ್ಣುಗಳು, ಚರ್ಮಗಳು ನಿಮ್ಮ ವಿರುದ್ಧ ಸಾಕ್ಷಿ ಹೇಳಬಲ್ಲವು ಎಂಬ ಯೋಚನೆಯಿಂದ ನೀವು ಅಡಗಿಕೊಳ್ಳುತ್ತಿರಲಿಲ್ಲ. ನೀವಂತು ನಿಮ್ಮ ಹಲವು ಕರ್ಮಗಳ ಕುರಿತು ಅಲ್ಲಾಹನಿಗೇ ತಿಳಿದಿಲ್ಲವೆಂದು ಭಾವಿಸಿಕೊಂಡಿದ್ದಿರಿ.
Tafsiraaɗe Aarabu ɗen:
وَذٰلِكُمْ ظَنُّكُمُ الَّذِیْ ظَنَنْتُمْ بِرَبِّكُمْ اَرْدٰىكُمْ فَاَصْبَحْتُمْ مِّنَ الْخٰسِرِیْنَ ۟
ನೀವು ನಿಮ್ಮ ಪ್ರಭುವಿನ ಬಗ್ಗೆ ಇರಿಸಿಕೊಂಡಿದ್ದ ಭಾವನೆಯೇ ನಿಮ್ಮನ್ನು ನಾಶಕ್ಕೊಳಪಡಿಸಿದೆ. ಮತ್ತು ನೀವು ನಷ್ಟಹೊಂದಿದವರಲ್ಲಾಗಿಬಿಟ್ಟಿರಿ.
Tafsiraaɗe Aarabu ɗen:
فَاِنْ یَّصْبِرُوْا فَالنَّارُ مَثْوًی لَّهُمْ ؕ— وَاِنْ یَّسْتَعْتِبُوْا فَمَا هُمْ مِّنَ الْمُعْتَبِیْنَ ۟
ಇನ್ನು ಅವರು ಸಹನೆವಹಿಸಿದರೂ ನರಕವೇ ಅವರ ವಾಸಸ್ಥಳವಾಗಿದೆ. ಮತ್ತು ಅವರು ಪಶ್ಚಾತ್ತಾಪ ಪಟ್ಟರೂ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲಾಗದು.
Tafsiraaɗe Aarabu ɗen:
وَقَیَّضْنَا لَهُمْ قُرَنَآءَ فَزَیَّنُوْا لَهُمْ مَّا بَیْنَ اَیْدِیْهِمْ وَمَا خَلْفَهُمْ وَحَقَّ عَلَیْهِمُ الْقَوْلُ فِیْۤ اُمَمٍ قَدْ خَلَتْ مِنْ قَبْلِهِمْ مِّنَ الْجِنِّ وَالْاِنْسِ ۚ— اِنَّهُمْ كَانُوْا خٰسِرِیْنَ ۟۠
ನಾವು ಅವರಿಗೆ ಕೆಲವು ಸಂಗಡಿಗರನ್ನು ನಿಯೋಜಿಸಿದ್ದೆವು. ಅವರು ಅವರ ಮುಂದೆ ಮತ್ತು ಹಿಂದೆ ಇರುವ ಕರ್ಮಗಳನ್ನು ಅವರ ದೃಷ್ಟಿಯಲ್ಲಿ ಮನಮೋಹಕವಾಗಿ ತೋರಿಸಿದರು. ಮತ್ತು ಅವರಿಗಿಂತ ಮೊದಲು ಗತಿಸಿದ ಯಕ್ಷ ಹಾಗೂ ಮನುಷ್ಯರಲ್ಲಿನ ಸಮುದಾಯಗಳ ಮೇಲೆ ಸಾಬೀತಾದ ಶಿಕ್ಷೆಯ ತೀರ್ಮಾನವೇ ಅವರ ಮೇಲೂ ಸಾಬೀತುಗೊಂಡಿತು ನಿಶ್ಚಯವಾಗಿಯು ಅವರು ನಷ್ಟಹೊಂದಿದವರಾಗಿದ್ದರು.
Tafsiraaɗe Aarabu ɗen:
وَقَالَ الَّذِیْنَ كَفَرُوْا لَا تَسْمَعُوْا لِهٰذَا الْقُرْاٰنِ وَالْغَوْا فِیْهِ لَعَلَّكُمْ تَغْلِبُوْنَ ۟
ಸತ್ಯನಿಷೇಧಿಗಳು ಹೇಳಿದರು: ನೀವು ಈ ಕುರ್‌ಆನನ್ನು ಕೇಳಬೇಡಿರಿ. ಅದರಲ್ಲಿ (ಪಠಣದ ವೇಳೆಯಲ್ಲಿ) ಗುಲ್ಲೆಬ್ಬಿಸಿರಿ. ನೀವು ಮೇಲುಗೈ ಸಾಧಿಸಬಹುದು.
Tafsiraaɗe Aarabu ɗen:
فَلَنُذِیْقَنَّ الَّذِیْنَ كَفَرُوْا عَذَابًا شَدِیْدًا وَّلَنَجْزِیَنَّهُمْ اَسْوَاَ الَّذِیْ كَانُوْا یَعْمَلُوْنَ ۟
ನಿಶ್ಚಯವಾಗಿಯು ಆ ಸತ್ಯನಿಷೇಧಿಗಳಿಗೆ ನಾವು ಯಾತನೆಯ ಸವಿಯನ್ನು ಉಣಿಸುವೆವು. ಮತ್ತು ಅವರು ಮಾಡುತ್ತಿದ್ದಂತಹ ದುಪ್ಕರ್ಮಗಳ ಪ್ರತಿಫಲವನ್ನು ಅವರಿಗೆ ಖಂಡಿತ ನೀಡುವೆವು.
Tafsiraaɗe Aarabu ɗen:
ذٰلِكَ جَزَآءُ اَعْدَآءِ اللّٰهِ النَّارُ ۚ— لَهُمْ فِیْهَا دَارُ الْخُلْدِ ؕ— جَزَآءً بِمَا كَانُوْا بِاٰیٰتِنَا یَجْحَدُوْنَ ۟
ಅದು ಅಲ್ಲಾಹನ ಶತ್ರುಗಳಿಗೆ ಪ್ರತಿಫಲವಾಗಿ ಸಿಗಲಿರುವ ಶಿಕ್ಷೆಯೇ ಈ ನರಕಾಗ್ನಿಯಾಗಿದೆ. ಅದರಲ್ಲೇ ಅವರಿಗೆ ಶಾಶ್ವತ ನೆಲೆ ಇದೆ. (ಇದು) ನಮ್ಮ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದುದರ ಪ್ರತಿಫಲವಾಗಿದೆ.
Tafsiraaɗe Aarabu ɗen:
وَقَالَ الَّذِیْنَ كَفَرُوْا رَبَّنَاۤ اَرِنَا الَّذَیْنِ اَضَلّٰنَا مِنَ الْجِنِّ وَالْاِنْسِ نَجْعَلْهُمَا تَحْتَ اَقْدَامِنَا لِیَكُوْنَا مِنَ الْاَسْفَلِیْنَ ۟
ಸತ್ಯಷೇಧಿಗಳು ಹೇಳುವರು: ನಮ್ಮ ಪ್ರಭು, ಯಕ್ಷ ಮತ್ತು ಮನುಷ್ಯರ ಪೈಕಿ ನಮ್ಮನ್ನು ದಾರಿಗೆಡಿಸಿದ ಆ ಎರಡೂ ತಂಡಗಳನ್ನು ನಮಗೊಮ್ಮೆ ತೋರಿಸಿ ಕೊಡು. ಅವರು ತೀವ್ರ ಅಪಮಾನಿತರಾಗಲು ನಾವು ಅವರನ್ನು ನಮ್ಮ ಪಾದದಡಿಯಲ್ಲಿ ಹಾಕಿ ತುಳಿಯುವೆವು.
Tafsiraaɗe Aarabu ɗen:
اِنَّ الَّذِیْنَ قَالُوْا رَبُّنَا اللّٰهُ ثُمَّ اسْتَقَامُوْا تَتَنَزَّلُ عَلَیْهِمُ الْمَلٰٓىِٕكَةُ اَلَّا تَخَافُوْا وَلَا تَحْزَنُوْا وَاَبْشِرُوْا بِالْجَنَّةِ الَّتِیْ كُنْتُمْ تُوْعَدُوْنَ ۟
ಖಂಡಿತವಾಗಿಯು ನಮ್ಮ ಫ್ರಭುವು ಅಲ್ಲಾಹನೆಂದು ಹೇಳಿ: ಬಳಿಕ ಅದರಲ್ಲೇ ಸ್ಥಿರವಾಗಿ ನಿಂತವರ ಬಳಿ ಮಲಕ್‌ಗಳು ಬಂದು: ನೀವು ಭಯಪಡಬೇಡಿರಿ ಮತ್ತು ವ್ಯಥೆಪಡಬೇಡಿರಿ ನಿಮಗೆ ವಾಗ್ದಾನ ನೀಡಲಾಗುತ್ತಿದ್ದಂತಹ ಸ್ವರ್ಗದ ಸುವಾರ್ತೆಯಿಂದ ಸಂತೋಷಪಡಿರಿ ಎಂದು ಹೇಳುವರು.
Tafsiraaɗe Aarabu ɗen:
نَحْنُ اَوْلِیٰٓؤُكُمْ فِی الْحَیٰوةِ الدُّنْیَا وَفِی الْاٰخِرَةِ ۚ— وَلَكُمْ فِیْهَا مَا تَشْتَهِیْۤ اَنْفُسُكُمْ وَلَكُمْ فِیْهَا مَا تَدَّعُوْنَ ۟ؕ
ನಾವು ನಿಮ್ಮ ಐಹಿಕ ಜೀವನದಲ್ಲೂ ಪರಲೋಕದಲ್ಲೂ ನಿಮ್ಮ ಮಿತ್ರರಾಗಿದ್ದೇವೆ. ಮತ್ತು ನಿಮ್ಮ ಮನಸ್ಸು ಬಯಸಿದ್ದೆಲ್ಲವೂ ಅದರಲ್ಲಿರುವುದು ಹಾಗೂ ನೀವು ಕೇಳುವುದೆಲ್ಲವೂ ಅದರಲ್ಲಿ ಇರುವುದು.
Tafsiraaɗe Aarabu ɗen:
نُزُلًا مِّنْ غَفُوْرٍ رَّحِیْمٍ ۟۠
ಕ್ಷಮಾಶೀಲನು, ಕರುಣಾನಿಧಿಯು ಆದ ಅಲ್ಲಾಹನ ಕಡೆಯಿಂದ ನಿಮಗಿರುವ ಸತ್ಕಾರವಿದು.
Tafsiraaɗe Aarabu ɗen:
وَمَنْ اَحْسَنُ قَوْلًا مِّمَّنْ دَعَاۤ اِلَی اللّٰهِ وَعَمِلَ صَالِحًا وَّقَالَ اِنَّنِیْ مِنَ الْمُسْلِمِیْنَ ۟
ಅಲ್ಲಾಹನ ಕಡೆಗೆ ಅಹ್ವಾನಿಸುವ, ಸತ್ಕರ್ಮವನ್ನು ಕೈಗೊಳ್ಳುವ ಖಂಡಿತವಾಗಿಯು ನಾನು ವಿಧೇಯರಲ್ಲಾಗಿರುವೆನೆಂದು ಹೇಳುವ ವ್ಯಕ್ತಿಯ ಮಾತಿಗಿಂತ ಉತ್ತಮ ಮಾತು ಇನ್ನಾರದ್ದಾಗಿದೆ?
Tafsiraaɗe Aarabu ɗen:
وَلَا تَسْتَوِی الْحَسَنَةُ وَلَا السَّیِّئَةُ ؕ— اِدْفَعْ بِالَّتِیْ هِیَ اَحْسَنُ فَاِذَا الَّذِیْ بَیْنَكَ وَبَیْنَهٗ عَدَاوَةٌ كَاَنَّهٗ وَلِیٌّ حَمِیْمٌ ۟
ಒಳಿತು ಮತ್ತು ಕೆಡುಕು ಸಮಾನವಾಗಲಾರದು. ನೀವು ಕೆಡುಕನ್ನು ಅತ್ಯುತ್ತಮ ಒಳಿತಿನ ಮೂಲಕ ತಡೆಯಿರಿ. ಹಾಗಾದರೆ ನಿಮ್ಮೊಂದಿಗೆ ಹಗೆತನ ಸಾಧಿಸುವವನು ಆಪ್ತಮಿತ್ರನಾಗುವನು.
Tafsiraaɗe Aarabu ɗen:
وَمَا یُلَقّٰىهَاۤ اِلَّا الَّذِیْنَ صَبَرُوْا ۚ— وَمَا یُلَقّٰىهَاۤ اِلَّا ذُوْ حَظٍّ عَظِیْمٍ ۟
ಈ ಗುಣ ಸಹನೆವಹಿಸುವವರ ಹೊರತು ಇನ್ನಾರಿಗೂ ಲಭಿಸುವುದಿಲ್ಲ. ಹಾಗೂ ಇದು ಮಹಾ ಅದೃಷ್ಟವಂತರ ಹೊರತು ಇನ್ನಾರಿಗೂ ದೊರಕುವುದಿಲ್ಲ.
Tafsiraaɗe Aarabu ɗen:
وَاِمَّا یَنْزَغَنَّكَ مِنَ الشَّیْطٰنِ نَزْغٌ فَاسْتَعِذْ بِاللّٰهِ ؕ— اِنَّهٗ هُوَ السَّمِیْعُ الْعَلِیْمُ ۟
ಮತ್ತು ಶೈತಾನನ ಕಡೆಯಿಂದೆನಾದರೂ ನಿಮಗೆ ದುಷ್ಟೆçÃರಣೆಯು ಉಂಟಾದರೆ ನೀವು ಅಲ್ಲಾಹನ ಅಭಯ ಯಾಚಿಸಿರಿ. ಖಂಡಿತವಾಗಿಯು ಅವನು ಸರ್ವವನ್ನಾಲಿಸು ವವನೂ, ಸರ್ವಜ್ಞನೂ ಆಗಿದ್ದಾನೆ.
Tafsiraaɗe Aarabu ɗen:
وَمِنْ اٰیٰتِهِ الَّیْلُ وَالنَّهَارُ وَالشَّمْسُ وَالْقَمَرُ ؕ— لَا تَسْجُدُوْا لِلشَّمْسِ وَلَا لِلْقَمَرِ وَاسْجُدُوْا لِلّٰهِ الَّذِیْ خَلَقَهُنَّ اِنْ كُنْتُمْ اِیَّاهُ تَعْبُدُوْنَ ۟
ರಾತ್ರಿ ಹಗಲು, ಸೂರ್ಯ ಚಂದ್ರರು ಅಲ್ಲಾಹನ ನಿದರ್ಶನಗಳಲ್ಲಾಗಿವೆ. ನೀವು ಸೂರ್ಯನಿಗಾಗಲಿ, ಚಂದ್ರನಿಗಾಗಲಿ ಸಾಷ್ಟಾಂಗವೆರಗಬೇಡಿರಿ. ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಸಾಷ್ಟಾಂಗವೆರಗಿರಿ.ನೀವು ಅವನನ್ನೇ ಆರಾಧಿಸುವವರಾಗಿದ್ದರೆ.
Tafsiraaɗe Aarabu ɗen:
فَاِنِ اسْتَكْبَرُوْا فَالَّذِیْنَ عِنْدَ رَبِّكَ یُسَبِّحُوْنَ لَهٗ بِالَّیْلِ وَالنَّهَارِ وَهُمْ لَا یَسْـَٔمُوْنَ ۟
ಇನ್ನು ಅವರು ಅಹಂಕಾರತೋರಿದರೆ ನಿಮ್ಮ ಪ್ರಭುವಿನ ಸನ್ನಿಧಿಯಲ್ಲಿರುವ (ಮಲಕ್‌ಗಳು) ರಾತ್ರಿ-ಹಗಲೆನ್ನದೆ ಅವನನ್ನು ಸುತ್ತಿಸುತ್ತಿರುತ್ತಾರೆ ಮತ್ತು ಅವರು ದಣಿಯುವುದಿಲ್ಲ.
Tafsiraaɗe Aarabu ɗen:
وَمِنْ اٰیٰتِهٖۤ اَنَّكَ تَرَی الْاَرْضَ خَاشِعَةً فَاِذَاۤ اَنْزَلْنَا عَلَیْهَا الْمَآءَ اهْتَزَّتْ وَرَبَتْ ؕ— اِنَّ الَّذِیْۤ اَحْیَاهَا لَمُحْیِ الْمَوْتٰی ؕ— اِنَّهٗ عَلٰی كُلِّ شَیْءٍ قَدِیْرٌ ۟
ಅಲ್ಲಾಹನ ದೃಷ್ಟಾಂತಗಳ ಪೈಕಿ ನೀವು ಭೂಮಿಯನ್ನು ಒಣಗಿರುವುದಾಗಿ ಕಾಣುತ್ತೀರಿ. ಅನಂತರ ನಾವು ಅದರ ಮೇಲೆ ಮಳೆ ಸುರಿಸಿದಾಗ ಅದುಗರಿಗೆದರಿ ಮೊಳೆಯತೊಡಗುತ್ತದೆ. ಅದನ್ನು ಜೀವಂತಗೊಳಿಸಿದವನೇ ಖಂಡಿತ ಮೃತರನ್ನೂ ಪುನಃ ಜೀವಂತಗೊಳಿಸುವನು. ನಿಸ್ಸಂಶವಾಗಿಯು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
Tafsiraaɗe Aarabu ɗen:
اِنَّ الَّذِیْنَ یُلْحِدُوْنَ فِیْۤ اٰیٰتِنَا لَا یَخْفَوْنَ عَلَیْنَا ؕ— اَفَمَنْ یُّلْقٰی فِی النَّارِ خَیْرٌ اَمْ مَّنْ یَّاْتِیْۤ اٰمِنًا یَّوْمَ الْقِیٰمَةِ ؕ— اِعْمَلُوْا مَا شِئْتُمْ ۙ— اِنَّهٗ بِمَا تَعْمَلُوْنَ بَصِیْرٌ ۟
ನಿಸ್ಸಂದೇಹವಾಗಿಯೂ ನಮ್ಮ ಸೂಕ್ತಿಗಳಲ್ಲಿ ವಕ್ರತೆಯನ್ನು ಉಂಟು ಮಾಡುವವರು ನಮ್ಮಿಂದ ಮರೆಯಾಗಿಲ್ಲ. ಇನ್ನು ನರಕದಲ್ಲಿ ಹಾಕಲಾಗುವವನು ಉತ್ತಮನೋ ಅಥವಾ ಪುನರುತ್ಥಾನದ ದಿನದಂದು ನಿರ್ಭಯನಾಗಿ ಬರುವವನೋ? ನೀವಿಚ್ಛಿಸುವುದನ್ನು ಮಾಡುತ್ತಿರಿ. ಅವನು ನೀವು ಮಾಡುತ್ತಿರುವುದೆಲ್ಲ ವನ್ನು ನೋಡುತ್ತಿದ್ದಾನೆ.
Tafsiraaɗe Aarabu ɗen:
اِنَّ الَّذِیْنَ كَفَرُوْا بِالذِّكْرِ لَمَّا جَآءَهُمْ ۚ— وَاِنَّهٗ لَكِتٰبٌ عَزِیْزٌ ۟ۙ
ಬೋಧನೆಯು ತಮ್ಮ ಬಳಿ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದರೆ ಇದು ಪ್ರತಾಪಶಾಲಿ ಗ್ರಂಥವಾಗಿದೆ.
Tafsiraaɗe Aarabu ɗen:
لَّا یَاْتِیْهِ الْبَاطِلُ مِنْ بَیْنِ یَدَیْهِ وَلَا مِنْ خَلْفِهٖ ؕ— تَنْزِیْلٌ مِّنْ حَكِیْمٍ حَمِیْدٍ ۟
ಅದರ ಮುಂದಿನಿAದಾಗಲಿ, ಹಿಂದಿನಿAದಾಗಲಿ ಮಿಥ್ಯವು ಸುಳಿಯದು. ಇದು ಸುಜ್ಞಾನಿಯೂ, ಸ್ತುತ್ಯರ್ಹನೂ ಆದ ಅಲ್ಲಾಹನಿಂದ ಅವತೀರ್ಣಗೊಂಡಿದ್ದಾಗಿದೆ.
Tafsiraaɗe Aarabu ɗen:
مَا یُقَالُ لَكَ اِلَّا مَا قَدْ قِیْلَ لِلرُّسُلِ مِنْ قَبْلِكَ ؕ— اِنَّ رَبَّكَ لَذُوْ مَغْفِرَةٍ وَّذُوْ عِقَابٍ اَلِیْمٍ ۟
ನಿಮಗಿಂತ ಮುಂಚೆ ಗತಿಸಿದ ಸಂದೇಶವಾಹಕರೊAದಿಗೆ ಹೇಳಲಾಗಿದ್ದ ವಿಷಯವನ್ನೇ ನಿಮ್ಮೊಂದಿಗೂ ಹೇಳಲಾಗುತ್ತಿದೆ. ಖಂಡಿತವಾಗಿಯು ನಿಮ್ಮ ಪ್ರಭುವು ಕ್ಷಮೆಯುಳ್ಳವನೂ, ಮತ್ತು ವೇದನಾಜನಕ ಶಿಕ್ಷೆ ಕೊಡುವವನೂ ಆಗಿದ್ದಾನೆ.
Tafsiraaɗe Aarabu ɗen:
وَلَوْ جَعَلْنٰهُ قُرْاٰنًا اَعْجَمِیًّا لَّقَالُوْا لَوْلَا فُصِّلَتْ اٰیٰتُهٗ ؕ— ءَاَؔعْجَمِیٌّ وَّعَرَبِیٌّ ؕ— قُلْ هُوَ لِلَّذِیْنَ اٰمَنُوْا هُدًی وَّشِفَآءٌ ؕ— وَالَّذِیْنَ لَا یُؤْمِنُوْنَ فِیْۤ اٰذَانِهِمْ وَقْرٌ وَّهُوَ عَلَیْهِمْ عَمًی ؕ— اُولٰٓىِٕكَ یُنَادَوْنَ مِنْ مَّكَانٍ بَعِیْدٍ ۟۠
ಮತ್ತು ನಾವಿದನ್ನು ಅರಬೇತರ ಭಾಷೆಯ ಖುರ್‌ಆನನ್ನಾಗಿ ಮಾಡಿ ಅವತೀರ್ಣಗೊಳಿಸಿರುತ್ತಿದ್ದರೆ ಅವರು ಹೀಗೆ ಹೇಳುತ್ತಿದ್ದರು: ಇದರ ಸೂಕ್ತಿಗಳನ್ನು ಸ್ಪಷ್ಟವಾಗಿ ಏಕೆ ವಿವರಿಸಿಲ್ಲ? ಇದು ಅರಬೇತರ ಗ್ರಂಥ ಹಾಗೂ ಅರಬ್ ಸಂದೇಶವಾಹಕ!? ಹೇಳಿರಿ: ಇದು ಸತ್ಯವಿಶ್ವಾಸವಿರಿಸಿದವರಿಗೆ ಸನ್ಮಾರ್ಗವು ಉಪಶಮನವು ಆಗಿದೆ ಮತ್ತು ವಿಶ್ವಾಸವಿಡದವರ ಕಿವಿಗಳಲ್ಲಿ (ಕಿವುಡುತನ ಹಾಗೂ) ಅವರ ಮೇಲೆ ಅಂಧತೆಯಿದೆ ಇಂತಹವರು. ಬಹುದೂರ ಪ್ರದೇಶದಿಂದ ಕರೆಯಲಾಗುವಂತಹ ಜನರಾಗಿದ್ದಾರೆ.
Tafsiraaɗe Aarabu ɗen:
وَلَقَدْ اٰتَیْنَا مُوْسَی الْكِتٰبَ فَاخْتُلِفَ فِیْهِ ؕ— وَلَوْلَا كَلِمَةٌ سَبَقَتْ مِنْ رَّبِّكَ لَقُضِیَ بَیْنَهُمْ وَاِنَّهُمْ لَفِیْ شَكٍّ مِّنْهُ مُرِیْبٍ ۟
ನಿಸ್ಸಂದೇಹವಾಗಿಯೂ ನಾವು ಮೂಸಾರವರಿಗೆ ಗ್ರಂಥವನ್ನು ನೀಡಿದೆವು. ಅನಂತರ ಅದರಲ್ಲೂ ಭಿನ್ನಾಭಿಪ್ರಾಯ ತೋರಲಾಯಿತು ನಮ್ಮ ಪ್ರಭುವಿನಿಂದ ಮೊದಲೇ ನಿಶ್ಚಿತಗೊಂಡ ಮಾತು ಇಲ್ಲದಿರುತ್ತಿದ್ದರೆ (ಯಾವಾಗಲೋ )ಅವರ ನಡುವೆ ತೀರ್ಪು ಮಾಡಿಬಿಡಲಾಗುತ್ತಿತ್ತು ವಾಸ್ತವದಲ್ಲಿ ಇವರು ಅದರ (ಕುರ್‌ಆನಿನ) ಕುರಿತು ತೀವ್ರ ಸಂದೇಹದಲ್ಲಿದ್ದಾರೆ.
Tafsiraaɗe Aarabu ɗen:
مَنْ عَمِلَ صَالِحًا فَلِنَفْسِهٖ ۚ— وَمَنْ اَسَآءَ فَعَلَیْهَا ؕ— وَمَا رَبُّكَ بِظَلَّامٍ لِّلْعَبِیْدِ ۟
ಯಾರು ಸತ್ಕರ್ಮವನ್ನು ಮಾಡುತ್ತಾನೋ ಅವನು ತನ್ನ ಹಿತಕ್ಕಾಗಿಯೇ ಮಾಡುತ್ತಾನೆ. ಹಾಗೂ ಯಾರು ಕೆಡುಕನ್ನು ಮಾಡುತ್ತಾನೋ ಅದರ ದುಷ್ಟರಿಣಾಮವು ಅವನ ಮೇಲೆಯೇ ಇರುತ್ತದೆ ನಮ್ಮ ಪ್ರಭುವು ತನ್ನದಾಸರ ಪಾಲಿಗೆ ಅಕ್ರಮಿಯಲ್ಲ.
Tafsiraaɗe Aarabu ɗen:
اِلَیْهِ یُرَدُّ عِلْمُ السَّاعَةِ ؕ— وَمَا تَخْرُجُ مِنْ ثَمَرٰتٍ مِّنْ اَكْمَامِهَا وَمَا تَحْمِلُ مِنْ اُنۡثٰى وَلَا تَضَعُ اِلَّا بِعِلْمِهٖ ؕ— وَیَوْمَ یُنَادِیْهِمْ اَیْنَ شُرَكَآءِیْ ۙ— قَالُوْۤا اٰذَنّٰكَ ۙ— مَا مِنَّا مِنْ شَهِیْدٍ ۟ۚ
ಪುನರುತ್ಥಾನದ ಜ್ಞಾನವನ್ನು ಅವನೆಡೆಗೇ ಮರಳಿಸಲಾಗುತ್ತದೆ. ಮತ್ತು ಅವನಿಗೆ ಅರಿವಿಲ್ಲದೇ ಯಾವುದೇ ಫಲ ತನ್ನ ಕೋಶದಿಂದ ಹೊರಬರುವುದಿಲ್ಲ ಮತ್ತು ಯಾವ ಹೆಣ್ಣು ಗರ್ಭಧರಿಸುವುದೂ ಇಲ್ಲ. ಹೆರುವುದೂ ಇಲ್ಲ. ಅವನು ನನ್ನ ಸಹಭಾಗಿಗಳೆಲ್ಲಾ ಎಲ್ಲಿ? ಎಂದು ಅವರನ್ನು ಕೇಳುವ ದಿನ ಆಗ ಅವರು: ನಮ್ಮಲ್ಲಿ ಸಾಕ್ಷಿದಾರನಾಗಿ ಯಾರೂ ಇಲ್ಲವೆಂದು ನಾವಾಗಲೇ ಹೇಳಿ ಬಟ್ಟಿದ್ದೇವೆಂದು ಉತ್ತರಿಸುವರು.
Tafsiraaɗe Aarabu ɗen:
وَضَلَّ عَنْهُمْ مَّا كَانُوْا یَدْعُوْنَ مِنْ قَبْلُ وَظَنُّوْا مَا لَهُمْ مِّنْ مَّحِیْصٍ ۟
ಇದಕ್ಕೆ ಮೊದಲು ಅವರು ಕರೆದು ಬೇಡುತ್ತಿದ್ದ ದೇವರುಗಳೆಲ್ಲ ಅವರಿಂದ ಕಣ್ಮರೆಯಾಗಿ ಬಿಡುವರು ಮತ್ತು ತಮಗೆ ಯಾವ ಅಭಯ ಸ್ಥಾನವಿಲ್ಲವೆಂದು ಅವರಿಗೆ ಮನದಟ್ಟಾಗುವುದು.
Tafsiraaɗe Aarabu ɗen:
لَا یَسْـَٔمُ الْاِنْسَانُ مِنْ دُعَآءِ الْخَیْرِ ؗ— وَاِنْ مَّسَّهُ الشَّرُّ فَیَـُٔوْسٌ قَنُوْطٌ ۟
ಮನುಷ್ಯನು ಒಳಿತನ್ನು ಬೇಡುವುದರಿಂದ ದಣಿಯುವುದಿಲ್ಲ ಅವನಿಗೆ ತೊಂದರೆಯೇನಾದರೂ ಉಂಟಾದರೆ ಅವನು ನಿರಾಶನೂ ಹತಾಶನೂ ಆಗಿ ಬಿಡುತ್ತಾನೆ.
Tafsiraaɗe Aarabu ɗen:
وَلَىِٕنْ اَذَقْنٰهُ رَحْمَةً مِّنَّا مِنْ بَعْدِ ضَرَّآءَ مَسَّتْهُ لَیَقُوْلَنَّ هٰذَا لِیْ ۙ— وَمَاۤ اَظُنُّ السَّاعَةَ قَآىِٕمَةً ۙ— وَّلَىِٕنْ رُّجِعْتُ اِلٰی رَبِّیْۤ اِنَّ لِیْ عِنْدَهٗ لَلْحُسْنٰی ۚ— فَلَنُنَبِّئَنَّ الَّذِیْنَ كَفَرُوْا بِمَا عَمِلُوْا ؗ— وَلَنُذِیْقَنَّهُمْ مِّنْ عَذَابٍ غَلِیْظٍ ۟
ಆದರೆ ಅವನಿಗೆ ಬಾಧಿಸಿದ ಕಷ್ಟದ ನಂತರ ನಾವು ಅವನಿಗೆ ನಮ್ಮ ಕೃಪೆಯ ಸವಿಯನ್ನುಣಿಸಿದಾಗ ಅವನೇ ಇದಕ್ಕೆ ನಾನು ಅರ್ಹನಾಗಿದ್ದೆನು. ಪುನರುತ್ಥಾನವು ಸಂಭವಿಸುವುದೆAದು ನಾನು ಭಾವಿಸುವುದಿಲ್ಲ ಒಂದು ವೇಳೆ ನಾನು ನನ್ನ ಪ್ರಭುವಿನೆಡೆಗೆ ಮರಳಿಸಲಾದರೂ ಖಂಡಿತ ನನಗೆ ಅವನ ಬಳಿಯೂ ಅತ್ಯುತ್ತಮವಾದುದೇ ಇರುವುದು ಎಂದು ಹೇಳುತ್ತಾನೆ. ಖಂಡಿತವಾಗಿಯು ನಾವು ಆ ಸತ್ಯನಿಷೇಧಿಗಳಿಗೆ ಅವರ ಕರ್ಮಗಳ ಬಗ್ಗೆ ತಿಳಿಸಲಿದ್ದೇವೆ ಹಾಗೂ ಅವರಿಗೆ ಕಠಿಣಯಾತನೆಯ ಸವಿಯುನ್ನುಣಿಸಲಿದ್ದೇವೆ.
Tafsiraaɗe Aarabu ɗen:
وَاِذَاۤ اَنْعَمْنَا عَلَی الْاِنْسَانِ اَعْرَضَ وَنَاٰ بِجَانِبِهٖ ۚ— وَاِذَا مَسَّهُ الشَّرُّ فَذُوْ دُعَآءٍ عَرِیْضٍ ۟
ಮತ್ತು ನಾವು ಮನುಷ್ಯನಿಗೆ ಯಾವುದಾದರು ಅನುಗ್ರಹವನ್ನು ನೀಡಿದರೆ ಅವನು ವಿಮುಖನಾಗುತ್ತಾನೆ ಮತ್ತು ದೂರ ಸರಿದು ಬಿಡುತ್ತಾನೆ ಒಂದು ವೇಳೆ ಅವನಿಗೆನಾದರೂ ಸಂಕಷ್ಟವು ಬಾಧಿಸಿದರೆ ಅವನು ಉದ್ದುದ್ದ ಪ್ರಾರ್ಥನೆಯನ್ನು ಸಲ್ಲಿಸುತ್ತಾನೆ.
Tafsiraaɗe Aarabu ɗen:
قُلْ اَرَءَیْتُمْ اِنْ كَانَ مِنْ عِنْدِ اللّٰهِ ثُمَّ كَفَرْتُمْ بِهٖ مَنْ اَضَلُّ مِمَّنْ هُوَ فِیْ شِقَاقٍ بَعِیْدٍ ۟
ಓ ಪೈಗಂಬರರೇ ಹೇಳಿರಿ: ಈ ಖುರ್‌ಆನ್ ಅಲ್ಲಾಹನ ಕಡೆಯಿಂದ ಬಂದಿದ್ದು, ನಂತರ ನೀವು ಅದನ್ನು ನಿರಾಕರಿಸಿದ್ದರೆ ಇದರ ವಿರೋಧದಲ್ಲಿ ದೂರ ಸಾಗಿ ಬಿಟ್ಟವನಿಗಿಂತ ದೊಡ್ಡ ಮಾರ್ಗಭ್ರಷ್ಟನು ಇನ್ನಾರಿದ್ದಾನೆಂದು ನೀವು ಆಲೋಚಿಸಿದ್ದೀರಾ?
Tafsiraaɗe Aarabu ɗen:
سَنُرِیْهِمْ اٰیٰتِنَا فِی الْاٰفَاقِ وَفِیْۤ اَنْفُسِهِمْ حَتّٰی یَتَبَیَّنَ لَهُمْ اَنَّهُ الْحَقُّ ؕ— اَوَلَمْ یَكْفِ بِرَبِّكَ اَنَّهٗ عَلٰی كُلِّ شَیْءٍ شَهِیْدٌ ۟
ಶೀಘ್ರವೇ ನಾವು ಇವರಿಗೆ ಬಾಹ್ಯಾಕಾಶಗಳಲ್ಲೂ ಸ್ವತಃ ಅವರೊಳಗೂ ಈ ಖುರ್‌ಆನ್ ಸತ್ಯವೆಂದು ಅವರಿಗೆ ಮನದಟ್ಟಾಗುವತನಕ ನಮ್ಮ ದೃಷ್ಟಾಂತಗಳನ್ನು ತೋರಿಸಿಕೊಡಲಿದ್ದೇವೆ. ನಿಮ್ಮ ಪ್ರಭುವು ಪ್ರತಿಯೊಂದು ವಸ್ತುವಿನ ಮೇಲೆ ಸಾಕ್ಷಿಯಾಗಿದ್ದಾನೆಂದು ಸಾಲದೇ?
Tafsiraaɗe Aarabu ɗen:
اَلَاۤ اِنَّهُمْ فِیْ مِرْیَةٍ مِّنْ لِّقَآءِ رَبِّهِمْ ؕ— اَلَاۤ اِنَّهٗ بِكُلِّ شَیْءٍ مُّحِیْطٌ ۟۠
ತಿಳಿಯಿರಿ ಖಂಡಿತವಾಗಿಯೂ ಇವರು ತಮ್ಮ ಪ್ರಭುವಿನ ಭೇಟಿಯ ಕುರಿತು ಸಂದೇಹದಲ್ಲಿದ್ದಾರೆ, ತಿಳಿಯಿರಿ. ಖಂಡಿತ ಅಲ್ಲಾಹನು ಸಕಲ ವಸ್ತುಗಳನ್ನೂ ಆವರಿಸಿರುತ್ತಾನೆ.
Tafsiraaɗe Aarabu ɗen:
 
Firo maanaaji Simoore.: Simoore laɓɓinaama
Loowdi cimooje ɗe Tonngoode hello ngon
 
Firo maanaaji Alqur'aana Teddunde nden - Eggo Kannada ngol - Bashiir Maisoori - Loowdi firooji ɗi

Eggo (lapito) mum ko Seyko Bashir Misuri. Nde woni ko e ñiiɓirde Ruwwad ngam eggude.

Uddu