Check out the new design

Firo maanaaji Alqur'aana Teddunde nden - Eggo Kannada ngol - Bashiir Maisoori * - Loowdi firooji ɗi


Firo maanaaji Simoore.: Simoore Gaafir   Aaya.:

ಗಾಫಿರ್

حٰمٓ ۟ۚ
ಹಾ-ಮೀಮ್
Tafsiraaɗe Aarabu ɗen:
تَنْزِیْلُ الْكِتٰبِ مِنَ اللّٰهِ الْعَزِیْزِ الْعَلِیْمِ ۟ۙ
ಈ ಗ್ರಂಥವು ಪ್ರಚಂಡನೂ, ಸರ್ವಜ್ಞಾನಿಯೂ ಆದ ಅಲ್ಲಾಹನ ಕಡೆಯಿಂದ ಅವತೀರ್ಣಗೊಂಡಿದೆ.
Tafsiraaɗe Aarabu ɗen:
غَافِرِ الذَّنْۢبِ وَقَابِلِ التَّوْبِ شَدِیْدِ الْعِقَابِ ذِی الطَّوْلِ ؕ— لَاۤ اِلٰهَ اِلَّا هُوَ ؕ— اِلَیْهِ الْمَصِیْرُ ۟
ಅವನು ಪಾಪವನ್ನು ಕ್ಷಮಿಸುವವನೂ, ಪಶ್ಚಾತ್ತಾಪವನ್ನು ಸ್ವೀಕರಿಸುವವನೂ, ಅತ್ಯುಗ್ರ ಯಾತನೆಯನ್ನು ನೀಡುವವನೂ ಅನುಗ್ರಹದಾತನೂ ಆಗಿರುವವನು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಸರ್ವರಿಗೂ ಅವನೆಡೆಗೇ ಮರಳಬೇಕಾಗಿದೆ.
Tafsiraaɗe Aarabu ɗen:
مَا یُجَادِلُ فِیْۤ اٰیٰتِ اللّٰهِ اِلَّا الَّذِیْنَ كَفَرُوْا فَلَا یَغْرُرْكَ تَقَلُّبُهُمْ فِی الْبِلَادِ ۟
ಸತ್ಯನಿಷೇಧಿಗಳ ಹೊರತು ಬೇರಾರೂ ಅಲ್ಲಾಹನ ದೃಷ್ಟಾಂತಗಳಲ್ಲಿ ತರ್ಕಿಸುವುದಿಲ್ಲ. ಆದುದರಿಂದ ನಾಡುಗಳಲ್ಲಿನ ಅವರ ಮೆರೆದಾಟವು ನಿಮ್ಮನ್ನು ವಂಚಿಸದಿರಲಿ.
Tafsiraaɗe Aarabu ɗen:
كَذَّبَتْ قَبْلَهُمْ قَوْمُ نُوْحٍ وَّالْاَحْزَابُ مِنْ بَعْدِهِمْ ۪— وَهَمَّتْ كُلُّ اُمَّةٍ بِرَسُوْلِهِمْ لِیَاْخُذُوْهُ وَجٰدَلُوْا بِالْبَاطِلِ لِیُدْحِضُوْا بِهِ الْحَقَّ فَاَخَذْتُهُمْ ۫— فَكَیْفَ كَانَ عِقَابِ ۟
ಇದಕ್ಕೆ ಮೊದಲು ನೂಹರ ಜನಾಂಗ ಮತ್ತು ಅವರ ನಂತರದ ಹಲವು ಪಂಗಡಗಳು ಸಹ ಸುಳ್ಳಾಗಿಸಿದ್ದವು ಮತ್ತು ಪ್ರತಿಯೊಂದು ಸಮುದಾಯವೂ ತಮ್ಮ ಸಂದೇಶವಾಹಕನನ್ನು ಸೆರೆಹಿಡಿಯಲು ಮತ್ತು ಮಿಥ್ಯದ ಮೂಲಕ ಸತ್ಯವನ್ನು ಕೀಳಾಗಿಸಲು ಉದ್ದೇಶಿಸಿತು. ಆಗ ನಾನು ಅವರನ್ನು ಹಿಡಿದುಬಿಟ್ಟೆನು. ಆದ್ದರಿಂದ ನನ್ನ ಶಿಕ್ಷೆಯು ಹೇಗಿತ್ತೆಂಬುದನ್ನು ನೋಡಿರಿ
Tafsiraaɗe Aarabu ɗen:
وَكَذٰلِكَ حَقَّتْ كَلِمَتُ رَبِّكَ عَلَی الَّذِیْنَ كَفَرُوْۤا اَنَّهُمْ اَصْحٰبُ النَّارِ ۟
ಹೀಗೆ ಸತ್ಯನಿಷೇಧಿಗಳು ನರಕವಾಸಿಗಳೆಂದು ನಿಮ್ಮ ಪ್ರಭುವಿನ ವಚನವು ಸಾಬೀತಾಯಿತು.
Tafsiraaɗe Aarabu ɗen:
اَلَّذِیْنَ یَحْمِلُوْنَ الْعَرْشَ وَمَنْ حَوْلَهٗ یُسَبِّحُوْنَ بِحَمْدِ رَبِّهِمْ وَیُؤْمِنُوْنَ بِهٖ وَیَسْتَغْفِرُوْنَ لِلَّذِیْنَ اٰمَنُوْا ۚ— رَبَّنَا وَسِعْتَ كُلَّ شَیْءٍ رَّحْمَةً وَّعِلْمًا فَاغْفِرْ لِلَّذِیْنَ تَابُوْا وَاتَّبَعُوْا سَبِیْلَكَ وَقِهِمْ عَذَابَ الْجَحِیْمِ ۟
‘ಅರ್ಶ್'(ಸಿಂಹಾಸನ)ಅನ್ನು ಹೊತ್ತ ಮಲಕ್‌ಗಳು ಮತ್ತು ಅದರ ಸುತ್ತಲಿರುವವರು ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡುತ್ತಾ ಅವನಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಸತ್ಯವಿಶ್ವಾಸಿಗಳಿಗಾಗಿ ಹೀಗೆ ಕ್ಷಮೆಯನ್ನು ಬೇಡುತ್ತಾರೆ. ಓ ನಮ್ಮ ಪ್ರಭು, ನಿನ್ನ ಕೃಪೆ ಮತ್ತು ಜ್ಞಾನವು ಸಕಲ ವಸ್ತುಗಳನ್ನು ಆವರಿಸಿಕೊಂಡಿದೆ. ಆದ್ದರಿಂದ ಪಶ್ಚಾತ್ತಾಪಪಟ್ಟು ಮರಳುವವರಿಗೆ, ಮತ್ತು ನಿನ್ನ ಮಾರ್ಗವನ್ನು ಅನುಸರಿಸುವವರಿಗೆ ನೀನು ಕ್ಷಮಿಸಿಬಿಡು ಮತ್ತು ಅವರನ್ನು ನರಕದಿಂದ ಪಾರು ಮಾಡು.
Tafsiraaɗe Aarabu ɗen:
رَبَّنَا وَاَدْخِلْهُمْ جَنّٰتِ عَدْنِ ١لَّتِیْ وَعَدْتَّهُمْ وَمَنْ صَلَحَ مِنْ اٰبَآىِٕهِمْ وَاَزْوَاجِهِمْ وَذُرِّیّٰتِهِمْ ؕ— اِنَّكَ اَنْتَ الْعَزِیْزُ الْحَكِیْمُ ۟ۙ
ಓ ನಮ್ಮ ಪ್ರಭು, ಅವರನ್ನು ಮತ್ತು ಸಜ್ಜನರಾದ ಅವರ ಮಾತಾ ಪಿತರನ್ನು ಪತ್ನಿಯರನ್ನು, ಸಂತಾನಗಳನ್ನು, ಅವರಿಗೆ ವಾಗ್ದಾನ ಮಾಡಿರುವಂತಹ ಶಾಶ್ವತವಾಸದ ಸ್ವರ್ಗೊದ್ಯಾನಗಳಲ್ಲಿ ಪ್ರವೇಶಿಸು. ನಿಜವಾಗಿಯು ನೀನು ಪ್ರಚಂಡನೂ, ಸುಜ್ಞಾನಿಯೂ ಆಗಿರುವೆ.
Tafsiraaɗe Aarabu ɗen:
وَقِهِمُ السَّیِّاٰتِ ؕ— وَمَنْ تَقِ السَّیِّاٰتِ یَوْمَىِٕذٍ فَقَدْ رَحِمْتَهٗ ؕ— وَذٰلِكَ هُوَ الْفَوْزُ الْعَظِیْمُ ۟۠
ಅವರನ್ನು ಕೆಡುಕುಗಳಿಂದ ರಕ್ಷಿಸು. ಆ ದಿನ ನೀನು ಯಾರನ್ನು ಕೆಡುಕುಗಳಿಂದ ರಕ್ಷಿಸಿದೆಯೋ ಅವರ ಮೇಲೆ ನೀನು ಕರುಣೆ ತೋರಿಸಿರುವೆ ಮತ್ತು ಇದುವೇ ಮಹಾ ಯಶಸ್ಸಾಗಿದೆ.
Tafsiraaɗe Aarabu ɗen:
اِنَّ الَّذِیْنَ كَفَرُوْا یُنَادَوْنَ لَمَقْتُ اللّٰهِ اَكْبَرُ مِنْ مَّقْتِكُمْ اَنْفُسَكُمْ اِذْ تُدْعَوْنَ اِلَی الْاِیْمَانِ فَتَكْفُرُوْنَ ۟
ನಿಸ್ಸಂಶಯವಾಗಿಯು ಸತ್ಯನಿಷೇಧಿಗಳಿಗೆ ಹೀಗೆ ಹೇಳಲಾಗುವುದು. ನಿಮ್ಮನ್ನು ಸತ್ಯವಿಶ್ವಾಸದೆಡೆಗೆ ಕರೆಯಲಾದಾಗ ನೀವು ನಿಷೇಧಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಾಹನಿಗೆ ನಿಮ್ಮ ಮೇಲೆ ಉಂಟಾದ ಕೋಪವು ಸ್ವತಃ ನಿಮಗೆ ನಿಮ್ಮ ಮೇಲೆ ಉಂಟಾದ ಕೋಪಕ್ಕಿಂತಲೂ ಮಿಗಿಲಾಗಿತ್ತು.
Tafsiraaɗe Aarabu ɗen:
قَالُوْا رَبَّنَاۤ اَمَتَّنَا اثْنَتَیْنِ وَاَحْیَیْتَنَا اثْنَتَیْنِ فَاعْتَرَفْنَا بِذُنُوْبِنَا فَهَلْ اِلٰی خُرُوْجٍ مِّنْ سَبِیْلٍ ۟
ಅವರು ಹೇಳುವರು: ನಮ್ಮ ಪ್ರಭು, ನೀನು ನಮಗೆ ಎರಡು ಬಾರಿ ಮರಣ ನೀಡಿರುವೆ ಹಾಗೂ ಎರಡು ಬಾರಿ ಜೀವಂತಗೊಳಿಸಿರುವೆ. ನಾವೀಗ ನಮ್ಮ ಪಾಪಗಳನ್ನು ಒಪ್ಪಿಕೊಂಡೆವು. ಇನ್ನು ಇಲ್ಲಿಂದ ಹೊರಹೋಗಲಿಕ್ಕೆ ಯಾವುದಾದರು ಮಾರ್ಗವಿದೆಯೇ ?
Tafsiraaɗe Aarabu ɗen:
ذٰلِكُمْ بِاَنَّهٗۤ اِذَا دُعِیَ اللّٰهُ وَحْدَهٗ كَفَرْتُمْ ۚ— وَاِنْ یُّشْرَكْ بِهٖ تُؤْمِنُوْا ؕ— فَالْحُكْمُ لِلّٰهِ الْعَلِیِّ الْكَبِیْرِ ۟
ಇದೇಕೆಂದರೆ ನಿಮ್ಮನ್ನು ಏಕÉÊಕ ಅಲ್ಲಾಹನೆಡೆಗೆ ಕರೆಯಲಾದಾಗ ನೀವು ನಿಷೇಧಿಸುತ್ತಿದ್ದಿರಿ ಮತ್ತು ಅವನೊಂದಿಗೆ ಸಹಭಾಗಿಗಳನ್ನು ಕಲ್ಪಿಸಲಾದಾಗ ನೀವು ನಂಬುತ್ತಿದ್ದಿರಿ. ಇನ್ನು ತೀರ್ಪಿನ ಅಧಿಕಾರವು ಮಹಾನನೂ ಉನ್ನತನೂ ಆದ ಅಲ್ಲಾಹನದ್ದೇ ಆಗಿದೆ.
Tafsiraaɗe Aarabu ɗen:
هُوَ الَّذِیْ یُرِیْكُمْ اٰیٰتِهٖ وَیُنَزِّلُ لَكُمْ مِّنَ السَّمَآءِ رِزْقًا ؕ— وَمَا یَتَذَكَّرُ اِلَّا مَنْ یُّنِیْبُ ۟
ಅವನೇ ನಿಮಗೆ ತನ್ನ ದೃಷ್ಟಾಂತಗಳನ್ನು ತೋರಿಸುತ್ತಾನೆ ಮತ್ತು ಆಕಾಶದಿಂದ ನಿಮಗೆ ಜೀವನಾಧಾರವನ್ನು ಇಳಿಸಿಕೊಡುತ್ತಾನೆ. ಆದರೆ (ಆಲ್ಲಾಹನೆಡೆಗೆ) ಮರಳುವವನೇ ಉಪದೇಶವನ್ನು ಸ್ವೀಕರಿಸುತ್ತಾನೆ.
Tafsiraaɗe Aarabu ɗen:
فَادْعُوا اللّٰهَ مُخْلِصِیْنَ لَهُ الدِّیْنَ وَلَوْ كَرِهَ الْكٰفِرُوْنَ ۟
ಇನ್ನು ನೀವು ಧರ್ಮವನ್ನು ಅಲ್ಲಾಹನಿಗೇ ಮೀಸಲಿಟ್ಟು ಅವನನ್ನೇ ಕರೆದು ಪ್ರಾರ್ಥಿಸಿರಿ. ಸತ್ಯನಿಷೇಧಿಗಳು ಇಷ್ಟಪಡದಿದ್ದರೂ ಸರಿಯೇ?
Tafsiraaɗe Aarabu ɗen:
رَفِیْعُ الدَّرَجٰتِ ذُو الْعَرْشِ ۚ— یُلْقِی الرُّوْحَ مِنْ اَمْرِهٖ عَلٰی مَنْ یَّشَآءُ مِنْ عِبَادِهٖ لِیُنْذِرَ یَوْمَ التَّلَاقِ ۟ۙ
ಅವನು ಅತ್ಯುನ್ನತ ಪದವಿಯುಳ್ಳವನೂ, ಸಿಂಹಾಸನದ ಒಡೆಯನೂ ಅವನು ತನ್ನ ಆದೇಶದ ಮೂಲಕ ತನ್ನ ದಾಸರ ಪÉÊಕಿ ತಾನಿಚ್ಛಿಸಿದವರ ಮೇಲೆ ದಿವ್ಯವಾಣಿಯನ್ನು ಅವತೀರ್ಣಗೊಳಿಸುತ್ತಾನೆ. ಇದು ಅವರು ಭೇಟಿಯಾಗುವ ದಿನದ ಕುರಿತು ಎಚ್ಚರಿಸಲೆಂದಾಗಿದೆ.
Tafsiraaɗe Aarabu ɗen:
یَوْمَ هُمْ بَارِزُوْنَ ۚ۬— لَا یَخْفٰی عَلَی اللّٰهِ مِنْهُمْ شَیْءٌ ؕ— لِمَنِ الْمُلْكُ الْیَوْمَ ؕ— لِلّٰهِ الْوَاحِدِ الْقَهَّارِ ۟
ಅವರು ತಮ್ಮ ಸಮಾಧಿಗಳಿಂದ ಹೊರಬರುವ ದಿನ ಅವರ ಯಾವ ವಿಷಯವೂ ಅಲ್ಲಾಹನಿಂದ ಅಡಗಿರುವುದಿಲ್ಲ. ಇಂದು ಅಧಿಪತ್ಯವು ಯಾರದು ? ಎಂದು ಅಲ್ಲಾಹನು ಕೇಳುವನು. ಏಕÉÊಕನೂ, ಪ್ರಚಂಡನೂ ಆದ ಅಲ್ಲಾಹನದ್ದು ಎಂದು ಸ್ವತಃ ಅವನೇ ಉತ್ತರಿಸುವನು.
Tafsiraaɗe Aarabu ɗen:
اَلْیَوْمَ تُجْزٰی كُلُّ نَفْسٍ بِمَا كَسَبَتْ ؕ— لَا ظُلْمَ الْیَوْمَ ؕ— اِنَّ اللّٰهَ سَرِیْعُ الْحِسَابِ ۟
ಇಂದು ಪ್ರತಿಯೊಬ್ಬ ವ್ಯಕ್ತಿಗೂ ಅವನು ಗಳಿಸಿರುವುದರ ಪ್ರತಿಫಲ ನೀಡಲಾಗುವುದು. ಇಂದು ಯಾರ ಮೇಲೂ ಅನ್ಯಾಯ ಮಾಡಲಾಗದು. ನಿಶ್ಚಯವಾಗಿಯು ಅಲ್ಲಾಹನು ಅತೀ ಶೀಘ್ರವಾಗಿ ಲೆಕ್ಕ ವಿಚಾರಣೆಯನ್ನು ನಡೆಸುವವನಾಗಿದ್ದಾನೆ.
Tafsiraaɗe Aarabu ɗen:
وَاَنْذِرْهُمْ یَوْمَ الْاٰزِفَةِ اِذِ الْقُلُوْبُ لَدَی الْحَنَاجِرِ كٰظِمِیْنَ ؕ۬— مَا لِلظّٰلِمِیْنَ مِنْ حَمِیْمٍ وَّلَا شَفِیْعٍ یُّطَاعُ ۟ؕ
ಸನ್ನಿಹಿತವಾಗಲಿರುವ (ಪುನರುತ್ಧಾನ) ದಿನದ ಬಗ್ಗೆ ನೀವು ಅವರನ್ನು ಎಚ್ಚರಿಸಿರಿ. ಹೃದಯಗಳು ಗಂಟಲುಗಳಿಗೆ ಏರಿ ಅವರು ಉಸಿರುಗಟ್ಟಿರುವ ಸಂದರ್ಭ ಮತ್ತು ಅಕ್ರಮಿಗಳಿಗೆ ಯಾವೊಬ್ಬ ಆಪ್ತಮಿತ್ರನಾಗಲಿ, ಅನುಸರಿಸಲಾಗುವ ಯಾವ ಶಿಫಾರಸ್ಸುಗಾರನಾಗಲಿ ಇರುವುದಿಲ್ಲ.
Tafsiraaɗe Aarabu ɗen:
یَعْلَمُ خَآىِٕنَةَ الْاَعْیُنِ وَمَا تُخْفِی الصُّدُوْرُ ۟
ಅಲ್ಲಾಹನು ದೃಷ್ಟಿಗಳ ವಂಚನೆಯನ್ನೂ, ಹೃದಯಗಳು ಬಚ್ಚಿಡುವುದನ್ನೂ ಚೆನ್ನಾಗಿ ಬಲ್ಲನು.
Tafsiraaɗe Aarabu ɗen:
وَاللّٰهُ یَقْضِیْ بِالْحَقِّ ؕ— وَالَّذِیْنَ یَدْعُوْنَ مِنْ دُوْنِهٖ لَا یَقْضُوْنَ بِشَیْءٍ ؕ— اِنَّ اللّٰهَ هُوَ السَّمِیْعُ الْبَصِیْرُ ۟۠
ಅಲ್ಲಾಹನು ಸತ್ಯದೊಂದಿಗೆ ತೀರ್ಮಾನ ಮಾಡುತ್ತಾನೆ. ಮತ್ತು ಅವನನ್ನು ಬಿಟ್ಟು ಅವರು ಕರೆದು ಬೇಡುತ್ತಿರುವವರು ಯಾವ ಸಂಗತಿಯನ್ನೂ ತೀರ್ಮಾನಿಸಲಾರರು ಖಂಡಿತವಾಗಿಯೂ ಅಲ್ಲಾಹನು ಸರ್ವವನ್ನಾಲಿಸುವವನು, ಸೂಕ್ಷö್ಮ ದೃಷ್ಟಿಯುಳ್ಳವನು ಆಗಿದ್ದಾನೆ.
Tafsiraaɗe Aarabu ɗen:
اَوَلَمْ یَسِیْرُوْا فِی الْاَرْضِ فَیَنْظُرُوْا كَیْفَ كَانَ عَاقِبَةُ الَّذِیْنَ كَانُوْا مِنْ قَبْلِهِمْ ؕ— كَانُوْا هُمْ اَشَدَّ مِنْهُمْ قُوَّةً وَّاٰثَارًا فِی الْاَرْضِ فَاَخَذَهُمُ اللّٰهُ بِذُنُوْبِهِمْ ؕ— وَمَا كَانَ لَهُمْ مِّنَ اللّٰهِ مِنْ وَّاقٍ ۟
ಇವರು ಭೂಮಿಯಲ್ಲಿ ಸಂಚರಿಸಿ ಇವರಿಗಿಂತ ಮುಂಚಿನವರ ಪರಿಣಾಮವೇನಾಯಿತೆಂಬುದನ್ನು ನೋಡಲಿಲ್ಲವೇ? ಅವರು ಇವರಿಗಿಂತ ಹೆಚ್ಚು ಬಲಶಾಲಿಗಳಾಗಿದ್ದರು ಮತ್ತು ಇವರಿಗಿಂತ ಹೆಚ್ಚು ಸ್ಮಾರಕಗಳನ್ನು ಭೂಮಿಯಲ್ಲಿ ಬಿಟ್ಟು ಹೋಗಿದ್ದರು. ಆದರೆ ಅಲ್ಲಾಹನು ಅವರ ಪಾಪಗಳ ನಿಮಿತ್ತ ಹಿಡಿದು ಬಿಟ್ಟನು ಮತ್ತು ಅವರಿಗೆ ಅಲ್ಲಾಹನ ಶಿಕ್ಷೆಯಿಂದ ಕಾಪಾಡುವ ಯಾವೊಬ್ಬನೂ ಇರಲಿಲ್ಲ.
Tafsiraaɗe Aarabu ɗen:
ذٰلِكَ بِاَنَّهُمْ كَانَتْ تَّاْتِیْهِمْ رُسُلُهُمْ بِالْبَیِّنٰتِ فَكَفَرُوْا فَاَخَذَهُمُ اللّٰهُ ؕ— اِنَّهٗ قَوِیٌّ شَدِیْدُ الْعِقَابِ ۟
ಇದೇಕೆಂದರೆ ಅವರ ಬಳಿಗೆ ಅವರ ಸಂದೇಶವಾಹಕರು ಸುಸ್ಪಷ್ಟ ದೃಷ್ಟಾಂತಗ ಳೊಂದಿಗೆ ಬಂದಿದ್ದರು. ಆಗ ಅವರು ನಿಷೇಧಿಸಿದ್ದರು. ಕೊನೆಗೆ ಅಲ್ಲಾಹನು ಅವರನ್ನು ಹಿಡಿದುಬಿಟ್ಟನು. ಖಂಡಿತವಾಗಿಯು ಅವನು ಸರ್ವಶಕ್ತನೂ, ಅತ್ಯುಗ್ರಯಾತನೆಯನ್ನು ನೀಡುವವನೂ ಆಗಿದ್ದಾನೆ.
Tafsiraaɗe Aarabu ɗen:
وَلَقَدْ اَرْسَلْنَا مُوْسٰی بِاٰیٰتِنَا وَسُلْطٰنٍ مُّبِیْنٍ ۟ۙ
23&24
Tafsiraaɗe Aarabu ɗen:
اِلٰی فِرْعَوْنَ وَهَامٰنَ وَقَارُوْنَ فَقَالُوْا سٰحِرٌ كَذَّابٌ ۟
ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊAದಿಗೆ ಮತ್ತು ಸುಸ್ಪಷ್ಟ ಪ್ರಮಾಣಗಳೊಂದಿಗೆ ಫಿರ್‌ಔನ್, ಹಾಮಾನ್ ಹಾಗೂ ಕಾರೂನನೆಡೆಗೆ ಕಳುಹಿಸಿದೆವು. ಆದರೆ ಅವನು ಇವನೊಬ್ಬ ಮಾಂತ್ರಿಕ ಮತ್ತು ಸುಳ್ಳುಗಾರನಾಗಿದ್ದಾನೆಂದು ಹೇಳಿದರು.
Tafsiraaɗe Aarabu ɗen:
فَلَمَّا جَآءَهُمْ بِالْحَقِّ مِنْ عِنْدِنَا قَالُوا اقْتُلُوْۤا اَبْنَآءَ الَّذِیْنَ اٰمَنُوْا مَعَهٗ وَاسْتَحْیُوْا نِسَآءَهُمْ ؕ— وَمَا كَیْدُ الْكٰفِرِیْنَ اِلَّا فِیْ ضَلٰلٍ ۟
ಅವರ ಬಳಿಗೆ ಮೂಸಾ ನಮ್ಮ ಕಡೆಯಿಂದ ಸತ್ಯವನ್ನು ತಂದಾಗ ಅವರು ಹೇಳಿದರು: ಅವನಲ್ಲಿ ವಿಶ್ವಾಸವಿರಿಸಿದವರ ಗಂಡುಮಕ್ಕಳನ್ನು ಕೊಂದುಬಿಡಿರಿ ಹಾಗೂ ಹೆಣ್ಣು ಸಂತತಿಗಳನ್ನು ಜೀವಂತವಾಗಿಡಿರಿ ಸತ್ಯನಿಷೇಧಿಗಳ ಕುತಂತ್ರವು ಪಥಭ್ರಷ್ಟತೆಯಲ್ಲೇ ಇದೆ.
Tafsiraaɗe Aarabu ɗen:
وَقَالَ فِرْعَوْنُ ذَرُوْنِیْۤ اَقْتُلْ مُوْسٰی وَلْیَدْعُ رَبَّهٗ ۚؕ— اِنِّیْۤ اَخَافُ اَنْ یُّبَدِّلَ دِیْنَكُمْ اَوْ اَنْ یُّظْهِرَ فِی الْاَرْضِ الْفَسَادَ ۟
ಫಿರ್‌ಔನ್ ಹೇಳಿದನು: ನನ್ನನ್ನು ಬಿಡಿರಿ. ನಾನು ಮೂಸಾರವರನ್ನು ಕೊಂದುಬಿಡುವೆನು. ಅವನು ತನ್ನ ಪ್ರಭುವನ್ನು ಕರೆದು ಬೇಡಲಿ, ಅವನು ನಿಮ್ಮ ಧರ್ಮವನ್ನು ಬದಲಾಯಿಸಿ ಬಿಡುವನು ಅಥವಾ ಭೂಮಿಯಲ್ಲಿ ಕ್ಷೆÆÃಭೆ ಹರಡುವನೆಂದು ನಾನು ಭಯಪಡುತ್ತಿರುವೆನು.
Tafsiraaɗe Aarabu ɗen:
وَقَالَ مُوْسٰۤی اِنِّیْ عُذْتُ بِرَبِّیْ وَرَبِّكُمْ مِّنْ كُلِّ مُتَكَبِّرٍ لَّا یُؤْمِنُ بِیَوْمِ الْحِسَابِ ۟۠
ಮೂಸಾ ಹೇಳಿದರು: ನಿಸ್ಸಂದೇಹವಾಗಿಯು ವಿಚಾರಣೆಯ ದಿನವನ್ನು ನಂಬದ ಪ್ರತಿಯೊಬ್ಬ ದುರಹಂಕಾರಿಯ ವಿರುದ್ಧ ನನ್ನ ಮತ್ತು ನಿಮ್ಮ ಪ್ರಭುವಾದ ಅಲ್ಲಾಹನಲ್ಲಿ ಅಭಯ ಯಾಚಿಸಿದ್ದೇನೆ.
Tafsiraaɗe Aarabu ɗen:
وَقَالَ رَجُلٌ مُّؤْمِنٌ ۖۗ— مِّنْ اٰلِ فِرْعَوْنَ یَكْتُمُ اِیْمَانَهٗۤ اَتَقْتُلُوْنَ رَجُلًا اَنْ یَّقُوْلَ رَبِّیَ اللّٰهُ وَقَدْ جَآءَكُمْ بِالْبَیِّنٰتِ مِنْ رَّبِّكُمْ ؕ— وَاِنْ یَّكُ كَاذِبًا فَعَلَیْهِ كَذِبُهٗ ۚ— وَاِنْ یَّكُ صَادِقًا یُّصِبْكُمْ بَعْضُ الَّذِیْ یَعِدُكُمْ ؕ— اِنَّ اللّٰهَ لَا یَهْدِیْ مَنْ هُوَ مُسْرِفٌ كَذَّابٌ ۟
ಆಗ ತನ್ನ ವಿಶ್ವಾಸವನ್ನು ಅಡಗಿಸಿಟ್ಟಿದ್ದ ಫಿರ್‌ಔನ್ ವಂಶದ ಒಬ್ಬ ಸತ್ಯವಿಶ್ವಾಸಿ ವ್ಯಕ್ತಿಯು ಹೇಳಿದನು; ತನ್ನ ಪ್ರಭುವು ಅಲ್ಲಾಹನಾಗಿದ್ದಾನೆ ಎಂದು ಹೇಳಿದ ಮಾತ್ರಕ್ಕಾಗಿ ವ್ಯಕ್ತಿಯೊಬ್ಬನನ್ನು ನೀವು ವಧಿಸುವಿರಾ? ಮತ್ತÄ ಅವನು ನಿಮ್ಮ ಬಳಿಗೆ ನಿವi್ಮ ಪ್ರಭುವಿನಿಂದ ಸುಸ್ಪಷ್ಟ ಪುರಾವೆಗಳನ್ನು ತಂದಿದ್ದಾನೆ ಮತ್ತು ಅವನೇನಾದರೂ ಸುಳ್ಳುಗಾರನಾಗಿದ್ದರೆ ಅವನ ಸುಳ್ಳು ಅವನ ವಿರುದ್ಧವೇ ಇರುವುದು ಇನ್ನು ಅವನು ಸತ್ಯವಂತನಾಗಿದ್ದರೆ ನಿಮಗೆ ಅವನು ಎಚ್ಚರಿಕೆ ನೀಡುತ್ತಿರುವ ಕೆಲವು ಶಿಕ್ಷೆಗಳು ನಿಮ್ಮ ಮೇಲೆರಗುವುವು. ಮಿತಿಮೀರಿದವನನ್ನು ಮತ್ತು ಸುಳ್ಳುಗಾರನನ್ನು ಅಲ್ಲಾಹನು ಸನ್ಮಾರ್ಗದಲ್ಲಿ ಮುನ್ನಡೆಸಲಾರನು.
Tafsiraaɗe Aarabu ɗen:
یٰقَوْمِ لَكُمُ الْمُلْكُ الْیَوْمَ ظٰهِرِیْنَ فِی الْاَرْضِ ؗ— فَمَنْ یَّنْصُرُنَا مِنْ بَاْسِ اللّٰهِ اِنْ جَآءَنَا ؕ— قَالَ فِرْعَوْنُ مَاۤ اُرِیْكُمْ اِلَّا مَاۤ اَرٰی وَمَاۤ اَهْدِیْكُمْ اِلَّا سَبِیْلَ الرَّشَادِ ۟
ಓ ನನ್ನ ಜನಾಂಗದವರೇ, ಇಂದು ಅಧಿಪತ್ಯವು ನಿಮ್ಮದಾಗಿದೆ ನೀವು ಭೂಮಿಯಲ್ಲಿ ಮೇಲುಗೈ ಸಾಧಿಸುತ್ತೀರಿ. ಆದರೆ ಅಲ್ಲಾಹನ ಶಿಕ್ಷೆಯು ನಮ್ಮಲ್ಲಿಗೆ ಬಂದು ಬಿಟ್ಟರೆ ಅದರಿಂದ ರಕ್ಷಿಸಿ ನಮಗೆ ಸಹಾಯ ಮಾಡುವವರು ಯಾರು? ಫಿರ್‌ಔನ್ ಹೇಳಿದನು: ನಾನು ಯುಕ್ತ ಕಂಡ ಸಲಹೆಯನ್ನೇ ನಿಮಗೆ ಕೊಡುತ್ತಿದ್ದೇನೆ ಹಾಗೂ ನಾನು ನಿಮಗೆ ಸರಿಯಾದ ಮಾರ್ಗವನ್ನೇ ತೋರಿಸಿಕೊಡುತ್ತಿದ್ದೇನೆ.
Tafsiraaɗe Aarabu ɗen:
وَقَالَ الَّذِیْۤ اٰمَنَ یٰقَوْمِ اِنِّیْۤ اَخَافُ عَلَیْكُمْ مِّثْلَ یَوْمِ الْاَحْزَابِ ۟ۙ
ಆ ಸತ್ಯವಿಶ್ವಾಸಿಯು ಹೇಳಿದನು: ಓ ನನ್ನ ಜನಾಂಗದವರೇ ನಿಶ್ಚಯವಾಗಿಯೂ, (ಸಂದೇಶವಾಹಕರನ್ನು ವಿರೋಧಿಸಿದ) ಸಮುದಾಯಗಳ ಮೇಲೆ ಎರಗಿದಂತಹ ದಿನವು ನಿಮ್ಮ ಮೇಲೂ ಎರಗಬಹುದೆಂದು ನಾನು ಭಯಪಡುತ್ತೇನೆ.
Tafsiraaɗe Aarabu ɗen:
مِثْلَ دَاْبِ قَوْمِ نُوْحٍ وَّعَادٍ وَّثَمُوْدَ وَالَّذِیْنَ مِنْ بَعْدِهِمْ ؕ— وَمَا اللّٰهُ یُرِیْدُ ظُلْمًا لِّلْعِبَادِ ۟
ನೂಹರ ಜನಾಂಗ ಆದ್, ಸಮೂದ್ ಹಾಗೂ ಅವರ ನಂತರದವರ ಸ್ಥಿತಿಯಾದಂತೆ, ಅಲ್ಲಾಹನು ತನ್ನ ದಾಸರ ಮೇಲೆ ಅಕ್ರಮವೆಸಗಲು ಬಯಸುವುದಿಲ್ಲ.
Tafsiraaɗe Aarabu ɗen:
وَیٰقَوْمِ اِنِّیْۤ اَخَافُ عَلَیْكُمْ یَوْمَ التَّنَادِ ۟ۙ
ಮತ್ತು ಓ ನಮ್ಮ ಜನಾಂಗದವರೇ ನಾನು ಪರಸ್ಪರ ಗೋಳಾಡುವ ದಿನದ ಕುರಿತು ನಿಮ್ಮ ಮೇಲೆ ಭಯಪಡುತ್ತೇನೆ.
Tafsiraaɗe Aarabu ɗen:
یَوْمَ تُوَلُّوْنَ مُدْبِرِیْنَ ۚ— مَا لَكُمْ مِّنَ اللّٰهِ مِنْ عَاصِمٍ ۚ— وَمَنْ یُّضْلِلِ اللّٰهُ فَمَا لَهٗ مِنْ هَادٍ ۟
ನೀವು ಬೆನ್ನು ತಿರುಗಿಸಿ ಓಡುವ ದಿನ ಅಲ್ಲಾಹನಿಂದ ನಿಮ್ಮನ್ನು ರಕ್ಷಿಸುವನಾರೂ ಇರಲಾರರು ಮತ್ತು ಅಲ್ಲಾಹನು ದಾರಿತಪ್ಪಿಸುವವನಿಗೆ ಮಾರ್ಗದರ್ಶಕನಾರೂ ಇಲ್ಲ.
Tafsiraaɗe Aarabu ɗen:
وَلَقَدْ جَآءَكُمْ یُوْسُفُ مِنْ قَبْلُ بِالْبَیِّنٰتِ فَمَا زِلْتُمْ فِیْ شَكٍّ مِّمَّا جَآءَكُمْ بِهٖ ؕ— حَتّٰۤی اِذَا هَلَكَ قُلْتُمْ لَنْ یَّبْعَثَ اللّٰهُ مِنْ بَعْدِهٖ رَسُوْلًا ؕ— كَذٰلِكَ یُضِلُّ اللّٰهُ مَنْ هُوَ مُسْرِفٌ مُّرْتَابُ ۟ۚۖ
ಇದಕ್ಕೆ ಮೊದಲು ಪ್ರವಾದಿ ಯೂಸುಫ್ ಸುಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಆದರೆ ನೀವು ಅವರು ತಂದಿರುವುದರಲ್ಲಿ ಸಂದೇಹದಲ್ಲೇ ಬಿದ್ದಿದ್ದಿರಿ. ಕೊನೆಗೆ ಅವರು ಮರಣಗೊಂಡಾಗ ನೀವು ಅವರ ನಂತರ ಅಲ್ಲಾಹನು ಯಾವೊಬ್ಬ ಸಂದೇಶವಾಹಕನನ್ನು ನಿಯೋಗಿಸುವುದಿಲ್ಲವೆಂದು ಹೇಳಿದಿರಿ. ಇದೇ ಪ್ರಕಾರ ಅಲ್ಲಾಹನು ಮಿತಿಮೀರಿದವರನ್ನು ಸಂಶಯಗ್ರಸ್ತರನ್ನು ದಾರಿ ತಪ್ಪಿಸಿಬಿಡುತ್ತಾನೆ.
Tafsiraaɗe Aarabu ɗen:
١لَّذِیْنَ یُجَادِلُوْنَ فِیْۤ اٰیٰتِ اللّٰهِ بِغَیْرِ سُلْطٰنٍ اَتٰىهُمْ ؕ— كَبُرَ مَقْتًا عِنْدَ اللّٰهِ وَعِنْدَ الَّذِیْنَ اٰمَنُوْا ؕ— كَذٰلِكَ یَطْبَعُ اللّٰهُ عَلٰی كُلِّ قَلْبِ مُتَكَبِّرٍ جَبَّارٍ ۟
ತಮ್ಮ ಬಳಿ ಬಂದAತಹ ಯಾವುದೇ ಪುರಾವೆಯಿಲ್ಲದೆ ಅಲ್ಲಾಹನ ದೃಷ್ಟಾಂತಗಳಲ್ಲಿ ತರ್ಕಿಸುತ್ತಾರೋ ಅಲ್ಲಾಹನ ಬಳಿ ಹಾಗೂ ಸತ್ಯವಿಶ್ವಾಸಿಗಳ ಬಳಿ ಇದು ಮಹಾ ಅಸಂತುಷ್ಟ ಸಂಗತಿಯಾಗಿದೆ. ಅಲ್ಲಾಹನು ಇದೇ ಪ್ರಕಾರ ಪ್ರತಿಯೊಬ್ಬ ದುರಹಂಕಾರಿ ಮತ್ತು ದುಷ್ಟನ ಹೃದಯದ ಮೇಲೆ ಮುದ್ರೆಯೊತ್ತುತ್ತಾನೆ.
Tafsiraaɗe Aarabu ɗen:
وَقَالَ فِرْعَوْنُ یٰهَامٰنُ ابْنِ لِیْ صَرْحًا لَّعَلِّیْۤ اَبْلُغُ الْاَسْبَابَ ۟ۙ
ಮತ್ತು ಫಿರ್‌ಔನನೆಂದನು: ಓ ಹಾಮಾನ್, ನನಗೊಂದು ಉನ್ನತ ಕಟ್ಟಡವನ್ನು ನಿರ್ಮಿಸು. ನಾನು ಮಾರ್ಗಗಳನ್ನು ತಲುಪಬಹುದು.
Tafsiraaɗe Aarabu ɗen:
اَسْبَابَ السَّمٰوٰتِ فَاَطَّلِعَ اِلٰۤی اِلٰهِ مُوْسٰی وَاِنِّیْ لَاَظُنُّهٗ كَاذِبًا ؕ— وَكَذٰلِكَ زُیِّنَ لِفِرْعَوْنَ سُوْٓءُ عَمَلِهٖ وَصُدَّ عَنِ السَّبِیْلِ ؕ— وَمَا كَیْدُ فِرْعَوْنَ اِلَّا فِیْ تَبَابٍ ۟۠
ಆ ಆಕಾಶ ಮಾರ್ಗಗಳನ್ನು ತಲುಪಿ ನಾನು ಮೂಸಾನ ಆರಾಧ್ಯನೆಡೆಗೆ ಇಣುಕಿ ನೋಡುವೆನು ಮತ್ತು ಖಂಡಿತವಾಗಿಯು ಅವನನ್ನು ನಾನು ಸುಳ್ಳುಗಾರನೆಂದು ಭಾವಿಸುತ್ತಿರುವೆನು ಮತ್ತು ಹೀಗೆ ಫಿರ್‌ಔನನಿಗೆ ಅವನ ದುಷ್ಕರ್ಮಗಳನ್ನು ಮನಮೋಹಕಗೊಳಿಸಲಾಯಿತು. ಹಾಗೂ ಸರಿದಾರಿಯಿಂದ ಅವನನ್ನು ತಡೆಯಲಾಯಿತು ಮತ್ತು ಫಿರ್‌ಔನನ ಕುತಂತ್ರವು ನಾಶ ಹೊಂದಿತು.
Tafsiraaɗe Aarabu ɗen:
وَقَالَ الَّذِیْۤ اٰمَنَ یٰقَوْمِ اتَّبِعُوْنِ اَهْدِكُمْ سَبِیْلَ الرَّشَادِ ۟ۚ
ಮತ್ತು ಆ ಸತ್ಯವಿಶ್ವಾಸಿಯು ಹೇಳಿದನು: ಓ ನನ್ನ ಜನಾಂಗದವರೇ, ನೀವು ನನ್ನನ್ನು ಅನುಸರಿಸಿರಿ. ನಾನು ನಿಮ್ಮನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವೆನು.
Tafsiraaɗe Aarabu ɗen:
یٰقَوْمِ اِنَّمَا هٰذِهِ الْحَیٰوةُ الدُّنْیَا مَتَاعٌ ؗ— وَّاِنَّ الْاٰخِرَةَ هِیَ دَارُ الْقَرَارِ ۟
ಓ ನನ್ನ ಜನಾಂಗದವರೇ, ಈ ಲೌಕಿಕ ಜೀವನವು ತಾತ್ಕಾಲಿಕ ಸುಖಭೋಗವಾಗಿದೆ. ಮತ್ತು ಖಂಡಿತವಾಗಿಯು ಶಾಶ್ವತ ಭವನವು ಪರಲೋಕವೇ ಆಗಿದೆ.
Tafsiraaɗe Aarabu ɗen:
مَنْ عَمِلَ سَیِّئَةً فَلَا یُجْزٰۤی اِلَّا مِثْلَهَا ۚ— وَمَنْ عَمِلَ صَالِحًا مِّنْ ذَكَرٍ اَوْ اُنۡثٰى وَهُوَ مُؤْمِنٌ فَاُولٰٓىِٕكَ یَدْخُلُوْنَ الْجَنَّةَ یُرْزَقُوْنَ فِیْهَا بِغَیْرِ حِسَابٍ ۟
ಮತ್ತು ಯಾರು ಪಾಪ ಮಾಡುತ್ತಾನೋ ಅವನಿಗೆ ಅದರಷ್ಟೇ ಪ್ರತಿಫಲ ನೀಡಲಾಗುವುದು. ಮತ್ತು ಪುರುಷನಿರಲಿ ಸ್ತಿçÃಯಿರಲಿ ಯಾರು ಸತ್ಯವಿಶ್ವಾಸಿಯಾಗಿದ್ದುಕೊಂಡು ಸತ್ಕರ್ಮವೆಸಗುವರೋ ಸ್ವರ್ಗವನ್ನು ಪ್ರವೇಶಿಸುವರು ಅಲ್ಲಿ ಅವರಿಗೆ ಲೆಕ್ಕಾತೀತವಾಗಿ ಜೀವನಾಧಾರವನ್ನು ನೀಡಲಾಗುವುದು.
Tafsiraaɗe Aarabu ɗen:
وَیٰقَوْمِ مَا لِیْۤ اَدْعُوْكُمْ اِلَی النَّجٰوةِ وَتَدْعُوْنَنِیْۤ اِلَی النَّارِ ۟ؕ
ಓ ನನ್ನ ಜನಾಂಗದವರೇ, ಇದೇನಿದು? ನಾನು ನಿಮ್ಮನ್ನು ರಕ್ಷೆಯೆಡೆಗೆ ಕರೆಯುತ್ತಿದ್ದರೆ ನೀವು ನನ್ನನ್ನು ನರಕಾಗ್ನಿಯೆಡೆಗೆ ಕರೆಯುತ್ತಿರುವಿರಿ!
Tafsiraaɗe Aarabu ɗen:
تَدْعُوْنَنِیْ لِاَكْفُرَ بِاللّٰهِ وَاُشْرِكَ بِهٖ مَا لَیْسَ لِیْ بِهٖ عِلْمٌ ؗ— وَّاَنَا اَدْعُوْكُمْ اِلَی الْعَزِیْزِ الْغَفَّارِ ۟
ನಾನು ಅಲ್ಲಾಹನನ್ನು ಧಿಕ್ಕರಿಸಬೇಕೆಂದು ಮತ್ತು ನನಗೆ ತಿಳಿಯದಿರುವುದನ್ನು ಅವನೊಂದಿಗೆ ಸಹಭಾಗಿಯಾಗಿ ನಿಶ್ಚಯಿಸಬೇಕೆಂದೂ ನೀವು ನನ್ನನ್ನು ಕರೆಯುತ್ತಿರುವಿರಿ. ಆದರೆ ನಾನು ನಿಮ್ಮನ್ನು ಪ್ರಚಂಡನೂ, ಕ್ಷಮಾಶೀಲನೂ ಆದ ಅಲ್ಲಾಹನೆಡೆಗೆ ಕರೆಯುತ್ತಿರುವೆನು.
Tafsiraaɗe Aarabu ɗen:
لَا جَرَمَ اَنَّمَا تَدْعُوْنَنِیْۤ اِلَیْهِ لَیْسَ لَهٗ دَعْوَةٌ فِی الدُّنْیَا وَلَا فِی الْاٰخِرَةِ وَاَنَّ مَرَدَّنَاۤ اِلَی اللّٰهِ وَاَنَّ الْمُسْرِفِیْنَ هُمْ اَصْحٰبُ النَّارِ ۟
ನೀವು ನನ್ನನ್ನು ಯಾರೆಡೆಗೆ ಕರೆಯುತ್ತಿರುವಿರೋ ಖಂಡಿತ ಅವರು ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಕರೆದು ಬೇಡಿಕೊಳ್ಳುವಂತಹ ಯೋಗ್ಯತೆಯನ್ನು ಹೊಂದಿಲ್ಲ ಹಾಗೂ ಖಂಡಿತ ನವÉÄ್ಮಲ್ಲರ ಮರಳುವಿಕೆಯು ಅಲ್ಲಾಹನೆಡೆಗೇ ಆಗಿದೆ. ಮತ್ತು ನಿಶ್ಚಯವಾಗಿಯೂ ಮಿತಿಮೀರುವವರೇ ನರಕವಾಸಿಗಳಾಗಿದ್ದಾರೆ.
Tafsiraaɗe Aarabu ɗen:
فَسَتَذْكُرُوْنَ مَاۤ اَقُوْلُ لَكُمْ ؕ— وَاُفَوِّضُ اَمْرِیْۤ اِلَی اللّٰهِ ؕ— اِنَّ اللّٰهَ بَصِیْرٌ بِالْعِبَادِ ۟
ನಾನು ನಿಮಗೆ ಹೇಳಿದ ಮಾತುಗಳನ್ನು ನೀವು ಸಧ್ಯದಲ್ಲೇ ಜ್ಞಾಪಿಸಿಕೊಳ್ಳುವಿರಿ. ನನ್ನ ವಿಚಾರವನ್ನು ನಾನು ಅಲ್ಲಾಹನಿಗೆ ವಹಿಸಿಬಿಡುತ್ತೇನೆ. ನಿಶ್ಚಯವಾಗಿಯು ಅಲ್ಲಾಹನು ತನ್ನ ದಾಸರ ಮೇಲ್ವಿಚಾರಕನಾಗಿದ್ದಾನೆ.
Tafsiraaɗe Aarabu ɗen:
فَوَقٰىهُ اللّٰهُ سَیِّاٰتِ مَا مَكَرُوْا وَحَاقَ بِاٰلِ فِرْعَوْنَ سُوْٓءُ الْعَذَابِ ۟ۚ
ಆಗ ಅಲ್ಲಾಹನು ಅವರು ಹೂಡಿದ್ದ ಸಕಲ ಕುತಂತ್ರಗಳಿAದ ಆ ಸತ್ಯವಿಶ್ವಾಸಿಯನ್ನು ರಕ್ಷಿಸಿದನು. ಮತ್ತು ಫಿರ್‌ಔನನ ಜನರನ್ನು ಅತ್ಯಂತ ಕೆಟ್ಟ ಯಾತನೆಯು ಆವರಿಸಿಬಿಟ್ಟಿತು.
Tafsiraaɗe Aarabu ɗen:
اَلنَّارُ یُعْرَضُوْنَ عَلَیْهَا غُدُوًّا وَّعَشِیًّا ۚ— وَیَوْمَ تَقُوْمُ السَّاعَةُ ۫— اَدْخِلُوْۤا اٰلَ فِرْعَوْنَ اَشَدَّ الْعَذَابِ ۟
ಅವರು ನರಕಾಗ್ನಿಯ ಮುಂದೆ ಸಂಜೆ ಮುಂಜಾನೆಯಲ್ಲಿ ಒಡ್ಡಲ್ಪಡುತ್ತಾರೆ ಮತ್ತು ಪುನರುತ್ಧಾನದ ದಿನ ಫಿರ್‌ಔನನ ಪರಿವಾರವನ್ನು ಅತ್ಯುಗ್ರ ಶಿಕ್ಷೆಗೆ ಪ್ರವೇಶಗೊಳಿಸಿರಿ. ಎಂದು (ಹೇಳಲಾಗುವುದು)
Tafsiraaɗe Aarabu ɗen:
وَاِذْ یَتَحَآجُّوْنَ فِی النَّارِ فَیَقُوْلُ الضُّعَفٰٓؤُا لِلَّذِیْنَ اسْتَكْبَرُوْۤا اِنَّا كُنَّا لَكُمْ تَبَعًا فَهَلْ اَنْتُمْ مُّغْنُوْنَ عَنَّا نَصِیْبًا مِّنَ النَّارِ ۟
ಅವರು ನರಕಾಗ್ನಿಯಲ್ಲಿ ಪರಸ್ಪರ ತರ್ಕಿಸುತ್ತಿರುವ ಸಂದರ್ಭ: ಆಗ ದುರ್ಬಲರು ಅಹಂಕಾರಿಗಳೊAದಿಗೆ ನಾವು ನಿಮ್ಮ ಆಜ್ಞಾಪಾಲಕರಾಗಿದ್ದೆವು. ಆದುದರಿಂದ ನೀವು ನಮ್ಮಿಂದ ನರಕಾಗ್ನಿಯ ಯಾವುದಾದರೂ ಒಂದAಶವನ್ನು ಸರಿಸಬಲ್ಲಿರಾ? ಎಂದು ಕೇಳುವರು.
Tafsiraaɗe Aarabu ɗen:
قَالَ الَّذِیْنَ اسْتَكْبَرُوْۤا اِنَّا كُلٌّ فِیْهَاۤ اِنَّ اللّٰهَ قَدْ حَكَمَ بَیْنَ الْعِبَادِ ۟
ಆಗ ಅಹಂಕಾರಿಗಳು ಉತ್ತರಿಸುವರು: ನಿಶ್ಚಯವಾಗಿಯು ನಾವೆಲ್ಲರೂ ನರಕದಲ್ಲಿದ್ದೇವೆ. ಖಂಡಿತವಾಗಿಯು ಅಲ್ಲಾಹನು ತನ್ನ ದಾಸರ ನಡುವೆ ತೀರ್ಮಾನ ಮಾಡಿ ಬಿಟ್ಟಿದ್ದಾನೆ.
Tafsiraaɗe Aarabu ɗen:
وَقَالَ الَّذِیْنَ فِی النَّارِ لِخَزَنَةِ جَهَنَّمَ ادْعُوْا رَبَّكُمْ یُخَفِّفْ عَنَّا یَوْمًا مِّنَ الْعَذَابِ ۟
ಮತ್ತು ನರಕಾಗ್ನಿಯಲ್ಲಿರವವರು ನರಕದ ಕಾವಲುಗಾರರೊಡನೆ: ನೀವು ನಿಮ್ಮ ಪ್ರಭುವಿನಲ್ಲಿ ಪ್ರಾರ್ಥಿಸಿರಿ. ಅವನು ನಮ್ಮಿಂದ ಒಂದು ದಿನವನ್ನಾದರೂ ಯಾತನೆಯನ್ನು ಕಡಿಮೆಗೊಳಿಸಲಿ ಎನ್ನುವರು.
Tafsiraaɗe Aarabu ɗen:
قَالُوْۤا اَوَلَمْ تَكُ تَاْتِیْكُمْ رُسُلُكُمْ بِالْبَیِّنٰتِ ؕ— قَالُوْا بَلٰی ؕ— قَالُوْا فَادْعُوْا ۚ— وَمَا دُعٰٓؤُا الْكٰفِرِیْنَ اِلَّا فِیْ ضَلٰلٍ ۟۠
ಆಗ ಕಾವಲುಗಾರರು ನಿಮ್ಮ ಬಳಿ ನಿಮ್ಮ ಸಂದೇಶವಾಹಕರು ಸುಸ್ಪಷ್ಟ ದೃಷ್ಟಾಂತಗಳೊAದಿಗೆ ಬಂದಿರಲಿಲ್ಲವೇ?ಎAದು ಕೇಳುವರು.ಆಗ ಅವರು ಏಕಿಲ್ಲ ಎಂದು ಹೇಳುವರು. ಹಾಗಿದ್ದರೆ ನೀವೇ ಬೇಡಿಕೊಳ್ಳಿರಿ ಎಂದು ಅವರು ಹೇಳುವರು. ಮತ್ತು ಸತ್ಯನಿಷೇಧಿಗಳ ಮೊರೆಯು ವ್ಯರ್ಥವಾಗಿದೆ.
Tafsiraaɗe Aarabu ɗen:
اِنَّا لَنَنْصُرُ رُسُلَنَا وَالَّذِیْنَ اٰمَنُوْا فِی الْحَیٰوةِ الدُّنْیَا وَیَوْمَ یَقُوْمُ الْاَشْهَادُ ۟ۙ
ಖಂಡಿತವಾಗಿಯು ನಾವು ನಮ್ಮ ಸಂದೇಹವಾಹಕರಿಗೆ ಮತ್ತು ಸತ್ಯವಿಶ್ವಾಸವಿರಿಸಿದವರಿಗೆ ಇಹಲೋಕ ಜೀವನದಲ್ಲೂ ಮತ್ತು ಸಾಕ್ಷಿಗಳು ನಿಲ್ಲುವ ದಿನದಲ್ಲೂ ಸಹಾಯ ಮಾಡುವೆವು.
Tafsiraaɗe Aarabu ɗen:
یَوْمَ لَا یَنْفَعُ الظّٰلِمِیْنَ مَعْذِرَتُهُمْ وَلَهُمُ اللَّعْنَةُ وَلَهُمْ سُوْٓءُ الدَّارِ ۟
ಅಕ್ರಮಿಗಳಿಗೆ ತಮ್ಮನೆಪಗಳು ಯಾವ ಪ್ರಯೋಜನವÀನ್ನೂ ಸಹ ನೀಡದ ದಿನದಂದು ಅವರಿಗೆ ಶಾಪವಿದೆ ಮತ್ತು ಅವರಿಗೆ ಕೆಟ್ಟ ವಾಸಸ್ಥಳವಿದೆ.
Tafsiraaɗe Aarabu ɗen:
وَلَقَدْ اٰتَیْنَا مُوْسَی الْهُدٰی وَاَوْرَثْنَا بَنِیْۤ اِسْرَآءِیْلَ الْكِتٰبَ ۟ۙ
ನಾವು ಮೂಸಾರವರಿಗೆ ಸನ್ಮಾರ್ಗ ಗ್ರಂಥವನ್ನು ದಯಪಾಲಿಸಿದೆವು ಮತ್ತು ಇಸ್ರಾಯೀಲ್ ಸಂತತಿಗಳನ್ನು ಆ ಗ್ರಂಥದ ವಾರೀಸುದಾರರನ್ನಾಗಿ ಮಾಡಿದೆವು
Tafsiraaɗe Aarabu ɗen:
هُدًی وَّذِكْرٰی لِاُولِی الْاَلْبَابِ ۟
ಅದು ಬುದ್ದಿಜೀವಿಗಳಿಗೆ ಸನ್ಮಾರ್ಗವೂ ಹಾಗೂ ಉದ್ಬೋದೆಯು ಆಗಿತ್ತು.
Tafsiraaɗe Aarabu ɗen:
فَاصْبِرْ اِنَّ وَعْدَ اللّٰهِ حَقٌّ وَّاسْتَغْفِرْ لِذَنْۢبِكَ وَسَبِّحْ بِحَمْدِ رَبِّكَ بِالْعَشِیِّ وَالْاِبْكَارِ ۟
ಆದ್ದರಿಂದ ಓ ಸಂದೇಶವಾಹಕರೇ, ತಾಳ್ಮೆವಹಿಸಿರಿ. ಅಲ್ಲಾಹನ ವಾಗ್ದಾನವು ಖಂಡಿತ ಸತ್ಯವಾಗಿದೆ. ನೀವು ನಿಮ್ಮ ಪಾಪಕ್ಕೆ ಕ್ಷಮೆ ಬೇಡಿರಿ ಹಾಗೂ ಸಂಜೆ ಮುಂಜಾನೆಯಲ್ಲಿ ನಿಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡಿರಿ.
Tafsiraaɗe Aarabu ɗen:
اِنَّ الَّذِیْنَ یُجَادِلُوْنَ فِیْۤ اٰیٰتِ اللّٰهِ بِغَیْرِ سُلْطٰنٍ اَتٰىهُمْ ۙ— اِنْ فِیْ صُدُوْرِهِمْ اِلَّا كِبْرٌ مَّا هُمْ بِبَالِغِیْهِ ۚ— فَاسْتَعِذْ بِاللّٰهِ ؕ— اِنَّهٗ هُوَ السَّمِیْعُ الْبَصِیْرُ ۟
ಯಾರು ತಮ್ಮ ಬಳಿಗೆ ಬಂದ ಆಲ್ಲಾಹನ ದೃಷ್ಟಾಂತಗಳಲ್ಲಿ ಯಾವುದೇ ಆಧಾರವಿಲ್ಲದೆಯೇ ತರ್ಕಿಸುತ್ತಾರೋ ಅವರ ಹೃದಯಗಳಲ್ಲಿ ಅಹಂಕಾರವಿದೆ. ಅವರು ಅದರವರೆಗೆ ತಲುಪುವವರೇ ಅಲ್ಲ. ಆದ್ದರಿಂದ ನೀವು ಅಲ್ಲಾಹನಲ್ಲಿ ಅಭಯ ಯಾಚಿಸಿರಿ. ಖಂಡಿತವಾಗಿಯು ಅವನು ಸರ್ವವನ್ನಾಲಿಸುವವನು, ಎಲ್ಲವನ್ನೂ ನೋಡುವವನು ಆಗಿದ್ದಾನೆ.
Tafsiraaɗe Aarabu ɗen:
لَخَلْقُ السَّمٰوٰتِ وَالْاَرْضِ اَكْبَرُ مِنْ خَلْقِ النَّاسِ وَلٰكِنَّ اَكْثَرَ النَّاسِ لَا یَعْلَمُوْنَ ۟
ಆಕಾಶಗಳ ಹಾಗು ಭೂಮಿಯ ಸೃಷ್ಟಿಯು ಮನುಷ್ಯರ ಸೃಷ್ಟಿಗಿಂತಲೂ ದೊಡ್ಡ ಕಾರ್ಯವಾಗಿದೆ, ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.
Tafsiraaɗe Aarabu ɗen:
وَمَا یَسْتَوِی الْاَعْمٰی وَالْبَصِیْرُ ۙ۬— وَالَّذِیْنَ اٰمَنُوْا وَعَمِلُوا الصّٰلِحٰتِ وَلَا الْمُسِیْٓءُ ؕ— قَلِیْلًا مَّا تَتَذَكَّرُوْنَ ۟
ಅಂಧನು ಮತ್ತು ದೃಷ್ಟಿಯುಳ್ಳವನು ಸಮಾನರಾಗಲಾರರು. ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡವನೂ ಹಾಗೂ ದುಷ್ಕರ್ಮಗಳನ್ನೆಸಗುವವನೂ ಸಮಾನರಾಗಲಾರರು. ನೀವು ಅತ್ಯಲ್ಪವೇ ಉಪದೇಶ ಸ್ವೀಕರಿಸುತ್ತೀರಿ.
Tafsiraaɗe Aarabu ɗen:
اِنَّ السَّاعَةَ لَاٰتِیَةٌ لَّا رَیْبَ فِیْهَا ؗ— وَلٰكِنَّ اَكْثَرَ النَّاسِ لَا یُؤْمِنُوْنَ ۟
ಖಂಡಿತವಾಗಿಯೂ, ಅಂತ್ಯಗಳಿಗೆಯು ಬರಲಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಹೆಚ್ಚಿನ ಜನರು ವಿಶ್ವಾಸವಿರಿಸುವುದಿಲ್ಲ.
Tafsiraaɗe Aarabu ɗen:
وَقَالَ رَبُّكُمُ ادْعُوْنِیْۤ اَسْتَجِبْ لَكُمْ ؕ— اِنَّ الَّذِیْنَ یَسْتَكْبِرُوْنَ عَنْ عِبَادَتِیْ سَیَدْخُلُوْنَ جَهَنَّمَ دٰخِرِیْنَ ۟۠
ನಿಮ್ಮ ಪ್ರಭು ಹೇಳುತ್ತಾನೆ: ನನ್ನೊಂದಿಗೆ ಪ್ರಾರ್ಥಿಸಿರಿ ನಾನು ನಿಮ್ಮ ಪ್ರಾರ್ಥನೆಗೆ ಓಗೊಡುತ್ತೇನೆ. ಖಂಡಿತವಾಗಿಯು ಯಾರು ನನ್ನ ಆರಾಧನೆಯಿಂದ ಅಹಂಕಾರ ತೋರಿಸುವರೋ ಅವರು ಶೀಘ್ರವೇ ಅಪಮಾನಿತರಾಗಿ ನರಕವನ್ನು ಪ್ರವೇಶಿಸಲಿರುವರು.
Tafsiraaɗe Aarabu ɗen:
اَللّٰهُ الَّذِیْ جَعَلَ لَكُمُ الَّیْلَ لِتَسْكُنُوْا فِیْهِ وَالنَّهَارَ مُبْصِرًا ؕ— اِنَّ اللّٰهَ لَذُوْ فَضْلٍ عَلَی النَّاسِ وَلٰكِنَّ اَكْثَرَ النَّاسِ لَا یَشْكُرُوْنَ ۟
ನೀವು ವಿಶ್ರಾಂತಿ ಪಡೆಯಲೆಂದು ನಿಮಗಾಗಿ ರಾತ್ರಿಯನ್ನುಂಟು ಮಾಡಿದವನು. ಹಾಗು ಹಗಲನ್ನು ಪ್ರಕಾಶಮಾನವನ್ನಾಗಿ ಮಾಡಿದವನು ಅಲ್ಲಾಹನಾಗಿರುವನು. ಖಂಡಿತವಾಗಿಯು ಅಲ್ಲಾಹನು ಜನರ ಮೇಲೆ ಅನುಗ್ರಹವುಳ್ಳವನಾಗಿದ್ದಾನೆ. ಆದರೆ ಜನರಲ್ಲಿ ಹೆಚ್ಚಿನವರು ಕೃತಜ್ಞತೆ ತೋರುವುದಿಲ್ಲ.
Tafsiraaɗe Aarabu ɗen:
ذٰلِكُمُ اللّٰهُ رَبُّكُمْ خَالِقُ كُلِّ شَیْءٍ ۘ— لَاۤ اِلٰهَ اِلَّا هُوَ ؗ— فَاَنّٰی تُؤْفَكُوْنَ ۟
ಅವನೇ ನಿಮ್ಮ ಪ್ರಭು ಅಲ್ಲಾಹನು; ಪ್ರತಿಯೊಂದು ವಸ್ತುವಿನ ಸೃಪ್ಟಿಕರ್ತನಾಗಿರುವನು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಹೀಗಿರುವಾಗ ನೀವೆತ್ತ ಅಲೆದಾಡಿಸಲ್ಪಡುತ್ತಿರುವಿರಿ.
Tafsiraaɗe Aarabu ɗen:
كَذٰلِكَ یُؤْفَكُ الَّذِیْنَ كَانُوْا بِاٰیٰتِ اللّٰهِ یَجْحَدُوْنَ ۟
ಇದೇ ರೀತಿ ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದವರೂ ದಾರಿತಪ್ಪಿಸಲಾಗುತ್ತಿದ್ದರು.
Tafsiraaɗe Aarabu ɗen:
اَللّٰهُ الَّذِیْ جَعَلَ لَكُمُ الْاَرْضَ قَرَارًا وَّالسَّمَآءَ بِنَآءً وَّصَوَّرَكُمْ فَاَحْسَنَ صُوَرَكُمْ وَرَزَقَكُمْ مِّنَ الطَّیِّبٰتِ ؕ— ذٰلِكُمُ اللّٰهُ رَبُّكُمْ ۖۚ— فَتَبٰرَكَ اللّٰهُ رَبُّ الْعٰلَمِیْنَ ۟
ಅಲ್ಲಾಹನೆಂದರೇ ನಿಮಗೆ ಭೂಮಿಯನ್ನು ತಾಣವನ್ನಾಗಿ, ಆಕಾಶವನ್ನು ಮೇಲ್ಛಾವಣÉಯನ್ನಾಗಿ ಮಾಡಿದವನು ಮತ್ತು ನಿಮಗೆ ರೂಪವನ್ನು ಕೊಟ್ಟು ನಿಮ್ಮ ರೂಪವನ್ನು ಸುಂದರಗೊಳಿಸಿದನು. ಮತ್ತು ಪರಿಶುದ್ಧ ವಸ್ತುಗಳಿಂದ ನಿಮಗೆ ಆಹಾರ ನೀಡಿದವನು. ಅವನೇ ನಿಮ್ಮ ಪ್ರಭು ಅಲ್ಲಾಹನಾಗಿದ್ದಾನೆ. ಹಾಗೆಯೇ ಸರ್ವಲೋಕಗಳ ಪ್ರಭುವಾದ ಅಲ್ಲಾಹನು ಮಹಾ ಮಂಗಲಮಯನಾಗಿರುವನು.
Tafsiraaɗe Aarabu ɗen:
هُوَ الْحَیُّ لَاۤ اِلٰهَ اِلَّا هُوَ فَادْعُوْهُ مُخْلِصِیْنَ لَهُ الدِّیْنَ ؕ— اَلْحَمْدُ لِلّٰهِ رَبِّ الْعٰلَمِیْنَ ۟
ಅವನು ಚಿರಂತನನು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಆದ್ದರಿಂದ ನೀವು ಧರ್ಮವನ್ನು ಅವನಿಗೆ ಮೀಸಲಿಟ್ಟು ಅವನನ್ನೇ ಕರೆದು ಬೇಡಿರಿ. ಸರ್ವಸ್ತುತಿಯು ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೇ ಮೀಸಲು.
Tafsiraaɗe Aarabu ɗen:
قُلْ اِنِّیْ نُهِیْتُ اَنْ اَعْبُدَ الَّذِیْنَ تَدْعُوْنَ مِنْ دُوْنِ اللّٰهِ لَمَّا جَآءَنِیَ الْبَیِّنٰتُ مِنْ رَّبِّیْ ؗ— وَاُمِرْتُ اَنْ اُسْلِمَ لِرَبِّ الْعٰلَمِیْنَ ۟
ಓ ಪ್ರವಾದಿಯವರೇ ಹೇಳಿರಿ: ಅಲ್ಲಾಹನ ಹೊರತು ನೀವು ಕರೆದು ಬೇಡುತ್ತಿರುವವರನ್ನು ಆರಾಧಿಸುವುದರಿಂದ ನನ್ನನ್ನು ತಡೆಯಲಾಗಿದೆ. ನನ್ನ ಬಳಿ ಪ್ರಭುವಿನ ಸುಸ್ಪಷ್ಟ ಪುರಾವೆಗಳು ಬಂದಿರುವುದರಿAದ ನಾನು ಸರ್ವಲೋಕಗಳ ಪ್ರಭುವಿಗೆ ಶರಣಾಗಲು ನನಗೆ ಆಜ್ಞಾಪಿಸಲಾಗಿದೆ.
Tafsiraaɗe Aarabu ɗen:
هُوَ الَّذِیْ خَلَقَكُمْ مِّنْ تُرَابٍ ثُمَّ مِنْ نُّطْفَةٍ ثُمَّ مِنْ عَلَقَةٍ ثُمَّ یُخْرِجُكُمْ طِفْلًا ثُمَّ لِتَبْلُغُوْۤا اَشُدَّكُمْ ثُمَّ لِتَكُوْنُوْا شُیُوْخًا ۚ— وَمِنْكُمْ مَّنْ یُّتَوَفّٰی مِنْ قَبْلُ وَلِتَبْلُغُوْۤا اَجَلًا مُّسَمًّی وَّلَعَلَّكُمْ تَعْقِلُوْنَ ۟
ನಿಮ್ಮನ್ನು ಮಣ್ಣಿನಿಂದ ತರುವಾಯ ವೀರ್ಯದಿಂದ, ನಂತರ ರಕ್ತಪಿಂಡದಿAದ ಸೃಷ್ಟಿಸಿದವನು ಅವನೇ. ಅನಂತರ ಅವನು ನಿಮ್ಮನ್ನು ಒಂದು ಶಿಶುವಿನ ರೂಪದಲ್ಲಿ ಹೊರತರುತ್ತಾನೆ. ಆ ಬಳಿಕ ನೀವು ನಿಮ್ಮ ಪರಿಪೂರ್ಣ ಯೌವ್ವನಕ್ಕೆ ತಲುಪಲೆಂದೂ, ತರುವಾಯ ನೀವು ವೃದ್ಧರಾಗಲೆಂದೂ (ನಿಮ್ಮನ್ನು ಬೆಳೆಸುತ್ತಾನೆ). ನಿಮ್ಮ ಪೈಕಿ ಕೆಲವರು ಇದಕ್ಕೆ ಮೊದಲೇ ಮರಣ ಹೊಂದುತ್ತಾರೆ (ಇನ್ನು ಕೆಲವರನ್ನು ಉಳಿಸುತ್ತಾನೆ) ನಿಶ್ಚಿತಾವಧಿಯನ್ನು ತಲುಪಲೆಂದು ಬಹುಷಃ ನೀವು ಚಿಂತಿಸಿ ಗ್ರಹಿಸಲುಬಹುದು.
Tafsiraaɗe Aarabu ɗen:
هُوَ الَّذِیْ یُحْیٖ وَیُمِیْتُ ۚ— فَاِذَا قَضٰۤی اَمْرًا فَاِنَّمَا یَقُوْلُ لَهٗ كُنْ فَیَكُوْنُ ۟۠
ಅವನೇ ಜೀವಂತಗೊಳಿಸುವನು ಹಾಗೂ ಮರಣ ಕೊಡುವವನು. ಅವನು ಏನನ್ನಾದರೂ ತೀರ್ಮಾನಿಸಿದರೆ ಅದಕ್ಕೆ ಆಗು ಎಂದು ಮಾತ್ರ ಹೇಳುತ್ತಾನೆ. ಆಗಲೇ ಆದಾಗಿ ಬಿಡುತ್ತದೆ.
Tafsiraaɗe Aarabu ɗen:
اَلَمْ تَرَ اِلَی الَّذِیْنَ یُجَادِلُوْنَ فِیْۤ اٰیٰتِ اللّٰهِ ؕ— اَنّٰی یُصْرَفُوْنَ ۟ۙۛ
ಅಲ್ಲಾಹನ ದೃಷ್ಟಾಂತಗಳಲ್ಲಿ ತರ್ಕಿಸುತ್ತಿರುವವರೆಡೆಗೆ ನೀವು ನೋಡಲಿಲ್ಲವೇ? ಅವರೆತ್ತ ತಿರುಗಿಸಲಾಗುತ್ತಿದ್ದಾರೆ?
Tafsiraaɗe Aarabu ɗen:
الَّذِیْنَ كَذَّبُوْا بِالْكِتٰبِ وَبِمَاۤ اَرْسَلْنَا بِهٖ رُسُلَنَا ۛ۫— فَسَوْفَ یَعْلَمُوْنَ ۟ۙ
ಅವರು ಕುರ್‌ಆನನ್ನು ಮತ್ತು ನಾವು ನಮ್ಮ ಸಂದೇಶವಾಹಕರೊAದಿಗೆ ಕಳುಹಿಸಿರುವ ಎಲ್ಲಾ ಗ್ರಂಥಗಳನ್ನು ಸುಳ್ಳಾಗಿಸುತ್ತಾರೆ. ಸದ್ಯವೇ ಇವರು ಅರಿಯಲಿದ್ದಾರೆ.
Tafsiraaɗe Aarabu ɗen:
اِذِ الْاَغْلٰلُ فِیْۤ اَعْنَاقِهِمْ وَالسَّلٰسِلُ ؕ— یُسْحَبُوْنَ ۟ۙ
ಅವರ ಕೊರಳುಗಳಲ್ಲಿ ಕಂಠಕಡಗಗಳು ಮತ್ತು ಸಂಕೋಲೆಗಳು ಇದ್ದು.
Tafsiraaɗe Aarabu ɗen:
فِی الْحَمِیْمِ ۙ۬— ثُمَّ فِی النَّارِ یُسْجَرُوْنَ ۟ۚ
ಅವರು ಕುದಿಯುವ ನೀರಿನಲ್ಲಿ ಎಳೆದೊಯ್ಯಲಾಗುವರು ಬಳಿಕ ಅವರು ನರಕಾಗ್ನಿಯಲ್ಲಿ ಸುಡಲಾಗುವರು.
Tafsiraaɗe Aarabu ɗen:
ثُمَّ قِیْلَ لَهُمْ اَیْنَ مَا كُنْتُمْ تُشْرِكُوْنَ ۟ۙ
ನಂತರ ಅವರೊಡನೆ: ನೀವು ಅಲ್ಲಾಹನ ಹೊರತು ಸಹಭಾಗಿಗಳನ್ನಾಗಿ ನಿಶ್ಚಯಿಸುತ್ತಿದ್ದವರೆಲ್ಲಾ ಎಲ್ಲಿದ್ದಾರೆ? ಎಂದು ಕೇಳಲಾಗುವುದು.
Tafsiraaɗe Aarabu ɗen:
مِنْ دُوْنِ اللّٰهِ ؕ— قَالُوْا ضَلُّوْا عَنَّا بَلْ لَّمْ نَكُنْ نَّدْعُوْا مِنْ قَبْلُ شَیْـًٔا ؕ— كَذٰلِكَ یُضِلُّ اللّٰهُ الْكٰفِرِیْنَ ۟
ಅವರು ಹೇಳುವರು: ಅವರು ನಮ್ಮಿಂದ ಕಣ್ಮರೆಯಾಗಿದ್ದಾರೆ. ಮಾತ್ರವಲ್ಲ. ಇದಕ್ಕೆ ಮೊದಲು ನಾವು ಯಾರನ್ನೂ ಕರೆದು ಬೇಡುತ್ತಿರಲಿಲ್ಲ. ಇದೇ ರೀತಿ ಅಲ್ಲಾಹನು ಸತ್ಯನಿಷೇಧಿಗಳನ್ನು ದಾರಿಗೆಡಿಸುತ್ತಾನೆ.
Tafsiraaɗe Aarabu ɗen:
ذٰلِكُمْ بِمَا كُنْتُمْ تَفْرَحُوْنَ فِی الْاَرْضِ بِغَیْرِ الْحَقِّ وَبِمَا كُنْتُمْ تَمْرَحُوْنَ ۟ۚ
ಇದು ನೀವು ಭೂಮಿಯಲ್ಲಿ ಅನ್ಯಾಯವಾಗಿ ಹಿಗ್ಗುತ್ತಿದ್ದುದರ ಹಾಗೂ ದರ್ಪತೋರುತ್ತಿದ್ದುದ್ದರ ಪ್ರತಿಫಲವಾಗಿದೆ.
Tafsiraaɗe Aarabu ɗen:
اُدْخُلُوْۤا اَبْوَابَ جَهَنَّمَ خٰلِدِیْنَ فِیْهَا ۚ— فَبِئْسَ مَثْوَی الْمُتَكَبِّرِیْنَ ۟
ನೀವು ನರಕದ ದ್ವಾರಗಳಲ್ಲಿ ಶಾಶ್ವತವಾಗಿ ನೆಲೆಸಲೆಂದು ಪ್ರವೇಶಿಸಿರಿ. ಅಹಂಕಾರಿಗಳ ನೆಲೆಯು ಅದೆಷ್ಟು ಕೆಟ್ಟದು!
Tafsiraaɗe Aarabu ɗen:
فَاصْبِرْ اِنَّ وَعْدَ اللّٰهِ حَقٌّ ۚ— فَاِمَّا نُرِیَنَّكَ بَعْضَ الَّذِیْ نَعِدُهُمْ اَوْ نَتَوَفَّیَنَّكَ فَاِلَیْنَا یُرْجَعُوْنَ ۟
ಆದುದರಿಂದ ನೀವು ತಾಳ್ಮೆವಹಿಸಿರಿ: ಅಲ್ಲಾಹನ ವಾಗ್ದಾನವು ಖಂಡಿತ ಸತ್ಯವಾಗಿದೆ. ನಾವು ಅವರಿಗೆ ಎಚ್ಚರಿಕೆ ನೀಡುತ್ತಿರುವಂತಹ ಶಿಕ್ಷೆಗಳಲ್ಲಿ ಕೆಲವನ್ನು ನಿಮಗೆ ತೋರಿಸಿಕೊಡಬಹುದು ಇಲ್ಲವೇ ನಿಮ್ಮನ್ನು ಮರಣಗೊಳಿಸಲೂ ಬಹುದು. ಅವರು ನಮ್ಮೆಡೆಗೇ ಮರಳಿಸಲಾಗುವರು.
Tafsiraaɗe Aarabu ɗen:
وَلَقَدْ اَرْسَلْنَا رُسُلًا مِّنْ قَبْلِكَ مِنْهُمْ مَّنْ قَصَصْنَا عَلَیْكَ وَمِنْهُمْ مَّنْ لَّمْ نَقْصُصْ عَلَیْكَ ؕ— وَمَا كَانَ لِرَسُوْلٍ اَنْ یَّاْتِیَ بِاٰیَةٍ اِلَّا بِاِذْنِ اللّٰهِ ۚ— فَاِذَا جَآءَ اَمْرُ اللّٰهِ قُضِیَ بِالْحَقِّ وَخَسِرَ هُنَالِكَ الْمُبْطِلُوْنَ ۟۠
ನಿಶ್ಚಯವಾಗಿಯೂ ನಾವು ನಿಮಗಿಂತ ಮೊದಲು ಅನೇಕ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಅವರ ಪೈಕಿ ಕೆಲವರ ವೃತ್ತಾಂತಗಳನ್ನು ನಿಮಗೆ ವಿವರಿಸಿಕೊಟ್ಟಿರು ತ್ತೇವೆ ಇನ್ನು ಕೆಲವರ ವೃತ್ತಾಂತಗಳನ್ನು ನಿಮಗೆ ನಾವು ವಿವರಿಸಿಲ್ಲ. ಅಲ್ಲಾಹನ ಅಪ್ಪಣೆ ಇಲ್ಲದೆ ಯಾವೊಬ್ಬ ಸಂದೇಶವಾಹಕನು ಯಾವ ದೃಷ್ಟಾಂತವನ್ನು ತರಲಾರನು. ಅನಂತರ ಅಲ್ಲಾಹನ ಆದೇಶ ಬಂದರೆ ಸತ್ಯದೊಂದಿಗೆ ತೀರ್ಮಾನ ಮಾಡಲಾಗುವುದು. ಅಲ್ಲಿ ಮಿಥ್ಯವಾದಿಗಳು ನಷ್ಟದಲ್ಲಿರುವರು.
Tafsiraaɗe Aarabu ɗen:
اَللّٰهُ الَّذِیْ جَعَلَ لَكُمُ الْاَنْعَامَ لِتَرْكَبُوْا مِنْهَا وَمِنْهَا تَاْكُلُوْنَ ۟ؗ
ನಿಮಗಾಗಿ ಜಾನುವಾರುಗಳನ್ನು ಉಂಟು ಮಾಡಿದವನು ಅಲ್ಲಾಹನಾಗಿರುವನು. ಅವುಗಳಲ್ಲಿ ಕೆಲವೊಂದರ ಮೇಲೆ ನೀವು ಸವಾರಿ ಮಾಡುತ್ತೀರಿ ಮತ್ತು ಅವುಗಳಿಂದ ಕೆಲವೊಂದನ್ನು ನೀವು ತಿನ್ನುತ್ತೀರಿ.
Tafsiraaɗe Aarabu ɗen:
وَلَكُمْ فِیْهَا مَنَافِعُ وَلِتَبْلُغُوْا عَلَیْهَا حَاجَةً فِیْ صُدُوْرِكُمْ وَعَلَیْهَا وَعَلَی الْفُلْكِ تُحْمَلُوْنَ ۟ؕ
ಮತ್ತು ಅವುಗಳಲ್ಲಿ ನಿಮಗೆ ಇನ್ನೂ ಅನೇಕ ಪ್ರಯೋಜನಗಳಿವೆ ಇದು ನೀವು ನಿಮ್ಮ ಮನಗಳಲ್ಲಿರುವ ಅಗತ್ಯಗಳನ್ನು ಅವುಗಳ ಮೇಲೆ ಸಂಚರಿಸಿ ಪೂರೈಸಲೆಂದಾಗಿದೆ. ಆ ಜಾನುವಾರುಗಳ ಮೇಲೂ ಮತ್ತು ಹಡಗಿನ ಮೇಲೂ ನಿಮ್ಮನ್ನು ಒಯ್ಯಲಾಗುತ್ತದೆ.
Tafsiraaɗe Aarabu ɗen:
وَیُرِیْكُمْ اٰیٰتِهٖ ۖۗ— فَاَیَّ اٰیٰتِ اللّٰهِ تُنْكِرُوْنَ ۟
ಅಲ್ಲಾಹನು ನಿಮಗೆ ತನ್ನ ದೃಷ್ಟಾಂತಗಳನ್ನು ತೋರಿಸುತ್ತಾನೆ. ಇನ್ನು ನೀವು ಅಲ್ಲಾಹನ ಯಾವೆಲ್ಲ ದೃಷ್ಟಾಂತಗಳನ್ನು ನಿರಾಕರಿಸುವಿರಿ?
Tafsiraaɗe Aarabu ɗen:
اَفَلَمْ یَسِیْرُوْا فِی الْاَرْضِ فَیَنْظُرُوْا كَیْفَ كَانَ عَاقِبَةُ الَّذِیْنَ مِنْ قَبْلِهِمْ ؕ— كَانُوْۤا اَكْثَرَ مِنْهُمْ وَاَشَدَّ قُوَّةً وَّاٰثَارًا فِی الْاَرْضِ فَمَاۤ اَغْنٰی عَنْهُمْ مَّا كَانُوْا یَكْسِبُوْنَ ۟
ಅವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚಿನವರ ಪರಿಣಾಮವು ಹೇಗಾಯಿತೆಂಬುದನ್ನು ನೋಡಲಿಲ್ಲವೇ? ಅವರು ಇವರಿಗಿಂತ ಹೆಚ್ಚು ಸಂಖ್ಯೆಯುಳ್ಳವರು. ಶಕ್ತಿ ಸಾಮರ್ಥ್ಯದಲ್ಲಿ ಬಲಿಷ್ಠರು ಮತ್ತು ಭೂಮಿಯಲ್ಲಿ ಅನೇಕ ಸ್ಮಾರಕಗಳನ್ನು ಬಿಟ್ಟು ಹೋದವರಾಗಿದ್ದರು. ಅವರು ಮಾಡಿದ ಕಾರ್ಯಗಳು ಅವರಿಗೆ ಯಾವ ಪ್ರಯೋಜನವನ್ನೂ ನೀಡಲಿಲ್ಲ.
Tafsiraaɗe Aarabu ɗen:
فَلَمَّا جَآءَتْهُمْ رُسُلُهُمْ بِالْبَیِّنٰتِ فَرِحُوْا بِمَا عِنْدَهُمْ مِّنَ الْعِلْمِ وَحَاقَ بِهِمْ مَّا كَانُوْا بِهٖ یَسْتَهْزِءُوْنَ ۟
ಕೊನೆಗೆ ಅವರ ಬಳಿಗೆ ಅವರ ಸಂದೇಶವಾಹಕರು ಸುಸ್ಪಷ್ಟ ಪುರಾವೆಗಳೊಂದಿಗೆ ಬಂದಾಗ ತಮ್ಮ ಬಳಿಯಿದ್ದ ಜ್ಞಾನದಲ್ಲೇ ಅವರು ಹೆಮ್ಮೆ ಪಡುತ್ತಿದ್ದರು ಮತ್ತು ಅವರು ಯಾವುದನ್ನು ಪರಿಹಾಸ್ಯ ಮಾಡುತ್ತಿದ್ದರೋ ಅದುವೇ ಅವರನ್ನು ಸುತ್ತುವರಿದು ಬಿಟ್ಟಿತು.
Tafsiraaɗe Aarabu ɗen:
فَلَمَّا رَاَوْا بَاْسَنَا قَالُوْۤا اٰمَنَّا بِاللّٰهِ وَحْدَهٗ وَكَفَرْنَا بِمَا كُنَّا بِهٖ مُشْرِكِیْنَ ۟
ಅವರು ನಮ್ಮ ಶಿಕ್ಷೆಯನ್ನು ಕಂಡಾಗ ನಾವು ಏಕೈಕ ಅಲ್ಲಾಹನಲ್ಲಿ ವಿಶ್ವಾಸವಿರಿಸಿದೆವು. ಮತ್ತು ಅವನಿಗೆ ಸಹಭಾಗಿಗಳನ್ನಾಗಿ ನಿಶ್ಚಯಿಸುತ್ತಿದ್ದ ದೇವರುಗಳನ್ನು ನಿರಾಕರಿಸಿಬಿಟ್ಟೆವು ಎಂದು ಹೇಳತೊಡಗಿದರು.
Tafsiraaɗe Aarabu ɗen:
فَلَمْ یَكُ یَنْفَعُهُمْ اِیْمَانُهُمْ لَمَّا رَاَوْا بَاْسَنَا ؕ— سُنَّتَ اللّٰهِ الَّتِیْ قَدْ خَلَتْ فِیْ عِبَادِهٖ ۚ— وَخَسِرَ هُنَالِكَ الْكٰفِرُوْنَ ۟۠
ಆದರೆ ಅವರು ನಮ್ಮ ಶಿಕ್ಷೆಯನ್ನು ಕಂಡ ಬಳಿಕ ಅವರ ವಿಶ್ವಾಸವು ಅವರಿಗೆ ಯಾವ ಪ್ರಯೋಜನವನ್ನೂ ನೀಡಲಿಲ್ಲ. ಇದು ಅಲ್ಲಾಹನು ತನ್ನ ದಾಸರ ವಿಚಾರದಲ್ಲಿ ಮೊದಲಿನಿಂದಲೇ ಜಾರಿಯಲ್ಲಿರಿಸಿದ್ದ. ಒಂದು ನಿಶ್ಚಿತ ಸಂಪ್ರದಾಯವಾಗಿತ್ತು ಮತ್ತು ಅಲ್ಲಿ ಸತ್ಯನಿಷೇಧಿಗಳು ನಷ್ಟ ಹೊಂದಿದವರಾದರು.
Tafsiraaɗe Aarabu ɗen:
 
Firo maanaaji Simoore.: Simoore Gaafir
Loowdi cimooje ɗe Tonngoode hello ngon
 
Firo maanaaji Alqur'aana Teddunde nden - Eggo Kannada ngol - Bashiir Maisoori - Loowdi firooji ɗi

Eggo (lapito) mum ko Seyko Bashir Misuri. Nde woni ko e ñiiɓirde Ruwwad ngam eggude.

Uddu