Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ * - অনুবাদসমূহৰ সূচীপত্ৰ

PDF XML CSV Excel API
Please review the Terms and Policies

অৰ্থানুবাদ ছুৰা: ইউনুছ   আয়াত:
وَمِنْهُمْ مَّنْ یَّنْظُرُ اِلَیْكَ ؕ— اَفَاَنْتَ تَهْدِی الْعُمْیَ وَلَوْ كَانُوْا لَا یُبْصِرُوْنَ ۟
ಅವರಲ್ಲಿ ಕೆಲವರು ನಿಮ್ಮನ್ನು ನೋಡುತ್ತಾರೆ. ಆದರೆ ಆ ಕುರುಡರಿಗೆ ದಾರಿ ತೋರಿಸಲು ನಿಮಗೆ ಸಾಧ್ಯವೇ? ಅವರು ನೋಡುವ ಪ್ರಯತ್ನ ಮಾಡದಿದ್ದರೂ ಸಹ?[1]
[1] ಅವರು ಕುರ್‌ಆನ್ ಪಠಣಕ್ಕೆ ಕಿವಿಗೊಡುತ್ತಾರೆ. ಅದೇ ರೀತಿ ನೀವು ಪಠಿಸುವಾಗ ಅವರು ನಿಮ್ಮನ್ನು ಗಮನದಿಂದ ನೋಡುತ್ತಾರೆ. ಆದರೆ ಅವರ ಉದ್ದೇಶವು ಬೇರೆಯೇ ಆಗಿರುತ್ತದೆ. ಕುರ್‌ಆನ್ ಕಲಿಯುವುದು ಅಥವಾ ಅರ್ಥಮಾಡಿಕೊಳ್ಳುವುದು ಅವರ ಉದ್ದೇಶವಲ್ಲ. ಇಂತಹ ಜನರು ಕಿವುಡರು ಮತ್ತು ಕುರುಡರಂತೆ.
আৰবী তাফছীৰসমূহ:
اِنَّ اللّٰهَ لَا یَظْلِمُ النَّاسَ شَیْـًٔا وَّلٰكِنَّ النَّاسَ اَنْفُسَهُمْ یَظْلِمُوْنَ ۟
ನಿಶ್ಚಯವಾಗಿಯೂ ಅಲ್ಲಾಹು ಮನುಷ್ಯರಿಗೆ ಸ್ವಲ್ಪವೂ ಅನ್ಯಾಯ ಮಾಡುವುದಿಲ್ಲ. ಆದರೆ ಮನುಷ್ಯರು ಸ್ವಯಂ ಅವರಿಗೇ ಅನ್ಯಾಯ ಮಾಡುತ್ತಿದ್ದಾರೆ.
আৰবী তাফছীৰসমূহ:
وَیَوْمَ یَحْشُرُهُمْ كَاَنْ لَّمْ یَلْبَثُوْۤا اِلَّا سَاعَةً مِّنَ النَّهَارِ یَتَعَارَفُوْنَ بَیْنَهُمْ ؕ— قَدْ خَسِرَ الَّذِیْنَ كَذَّبُوْا بِلِقَآءِ اللّٰهِ وَمَا كَانُوْا مُهْتَدِیْنَ ۟
ಅವನು ಅವರನ್ನು ಒಟ್ಟುಗೂಡಿಸುವ ದಿನ ಹಗಲಿನ ಕೆಲವು ತಾಸುಗಳು ಮಾತ್ರ (ಭೂಲೋಕದಲ್ಲಿ) ವಾಸವಾಗಿದ್ದೆವೋ ಎಂಬಂತೆ ಅವರಿಗೆ ಭಾಸವಾಗುವುದು. ಅವರು ಪರಸ್ಪರ ಗುರುತಿಸುವರು. ಅಲ್ಲಾಹನ ಭೇಟಿಯನ್ನು ನಿಷೇಧಿಸಿದವರು ನಷ್ಟಹೊಂದಿದರು. ಅವರು ಸನ್ಮಾರ್ಗ ಪಡೆದವರಾಗಲಿಲ್ಲ.
আৰবী তাফছীৰসমূহ:
وَاِمَّا نُرِیَنَّكَ بَعْضَ الَّذِیْ نَعِدُهُمْ اَوْ نَتَوَفَّیَنَّكَ فَاِلَیْنَا مَرْجِعُهُمْ ثُمَّ اللّٰهُ شَهِیْدٌ عَلٰی مَا یَفْعَلُوْنَ ۟
ನಾವು ಅವರಿಗೆ ವಾಗ್ದಾನ ಮಾಡುವ ಶಿಕ್ಷೆಗಳಲ್ಲಿ ಕೆಲವನ್ನು ನಾವು ನಿಮಗೆ ತೋರಿಸಿಕೊಟ್ಟರೂ ಅಥವಾ (ಅದಕ್ಕಿಂತ ಮೊದಲೇ) ನಾವು ನಿಮ್ಮನ್ನು ಮೃತಪಡಿಸಿದರೂ ಅವರು ಮರಳುವುದು ನಮ್ಮ ಬಳಿಗೇ ಆಗಿದೆ. ನಂತರ, ಅವರು ಮಾಡುವ ಎಲ್ಲಾ ಕರ್ಮಗಳಿಗೂ ಅಲ್ಲಾಹು ಸಾಕ್ಷಿಯಾಗಿದ್ದಾನೆ.
আৰবী তাফছীৰসমূহ:
وَلِكُلِّ اُمَّةٍ رَّسُوْلٌ ۚ— فَاِذَا جَآءَ رَسُوْلُهُمْ قُضِیَ بَیْنَهُمْ بِالْقِسْطِ وَهُمْ لَا یُظْلَمُوْنَ ۟
ಎಲ್ಲಾ ಸಮುದಾಯಗಳಿಗೂ ಒಬ್ಬ ಸಂದೇಶವಾಹಕರಿದ್ದಾರೆ. ಅವರ ಸಂದೇಶವಾಹಕರ ಆಗಮನವಾದರೆ, ಅವರ ಮಧ್ಯೆ ನ್ಯಾಯಯುತವಾಗಿ ತೀರ್ಪು ನೀಡಲಾಗುವುದು. ಅವರಿಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ.[1]
[1] ಇದಕ್ಕೆ ಎರಡು ರೀತಿಯ ವ್ಯಾಖ್ಯಾನಗಳಿವೆ. 1. ಅಲ್ಲಾಹು ಎಲ್ಲಾ ಸಮುದಾಯಗಳಿಗೆ ಪ್ರವಾದಿಗಳನ್ನು ಕಳುಹಿಸುತ್ತಾನೆ. ಒಂದು ಸಮುದಾಯಕ್ಕೆ ಪ್ರವಾದಿಯ ಆಗಮನವಾಗಿ ಅವರು ತಮ್ಮ ಕರ್ತವ್ಯವನ್ನು ಪೂರೈಸಿದ ನಂತರ ಅಲ್ಲಾಹು ಆ ಸಮುದಾಯದ ವಿಷಯದಲ್ಲಿ ನ್ಯಾಯಯುತವಾಗಿ ತೀರ್ಮಾನ ಕೈಗೊಳ್ಳುತ್ತಾನೆ. ಅಂದರೆ ಪ್ರವಾದಿಯನ್ನು ಮತ್ತು ಸತ್ಯವಿಶ್ವಾಸಿಗಳನ್ನು ರಕ್ಷಿಸುತ್ತಾನೆ ಹಾಗೂ ಸತ್ಯನಿಷೇಧಿಗಳನ್ನು ಶಿಕ್ಷಿಸುತ್ತಾನೆ. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. 2. ಪುನರುತ್ಥಾನ ದಿನದಂದು ಎಲ್ಲಾ ಸಮುದಾಯಗಳು ತಮ್ಮ ತಮ್ಮ ಪ್ರವಾದಿಗಳೊಡನೆ ಬರುತ್ತಾರೆ. ಅಲ್ಲಿ ಕರ್ಮಪುಸ್ತಕಗಳನ್ನು ಇಡಲಾಗುತ್ತದೆ ಮತ್ತು ಸಾಕ್ಷಿ ಹೇಳಲು ದೇವದೂತರುಗಳು ಬರುತ್ತಾರೆ. ಅಲ್ಲಾಹು ಆ ಸಮುದಾಯದ ವಿಷಯದಲ್ಲಿ ನ್ಯಾಯಯುತವಾಗಿ ತೀರ್ಪು ನೀಡುತ್ತಾನೆ. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.
আৰবী তাফছীৰসমূহ:
وَیَقُوْلُوْنَ مَتٰی هٰذَا الْوَعْدُ اِنْ كُنْتُمْ صٰدِقِیْنَ ۟
ಅವರು ಕೇಳುತ್ತಾರೆ: “ಈ ವಾಗ್ದಾನವು ಸತ್ಯವಾಗುವುದು ಯಾವಾಗ? ನೀವು ಸತ್ಯವಂತರಾಗಿದ್ದರೆ ಹೇಳಿರಿ.”
আৰবী তাফছীৰসমূহ:
قُلْ لَّاۤ اَمْلِكُ لِنَفْسِیْ ضَرًّا وَّلَا نَفْعًا اِلَّا مَا شَآءَ اللّٰهُ ؕ— لِكُلِّ اُمَّةٍ اَجَلٌ ؕ— اِذَا جَآءَ اَجَلُهُمْ فَلَا یَسْتَاْخِرُوْنَ سَاعَةً وَّلَا یَسْتَقْدِمُوْنَ ۟
ಹೇಳಿರಿ: “ನಾನು ಸ್ವಯಂ ನನಗೆ ಯಾವುದೇ ಪ್ರಯೋಜನ ಅಥವಾ ತೊಂದರೆ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಅಲ್ಲಾಹು ಏನು ಇಚ್ಛಿಸುತ್ತಾನೋ ಅದರ ಹೊರತು. ಎಲ್ಲಾ ಸಮುದಾಯಗಳಿಗೂ ಒಂದು ಅವಧಿಯಿದೆ. ಅವರ ಅವಧಿಯು ಬಂದರೆ, ಒಂದು ಕ್ಷಣ ಹಿಂದೂಡಲು ಅಥವಾ ಮುಂದೂಡಲು ಅವರಿಂದ ಸಾಧ್ಯವಿಲ್ಲ.”
আৰবী তাফছীৰসমূহ:
قُلْ اَرَءَیْتُمْ اِنْ اَتٰىكُمْ عَذَابُهٗ بَیَاتًا اَوْ نَهَارًا مَّاذَا یَسْتَعْجِلُ مِنْهُ الْمُجْرِمُوْنَ ۟
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹನ ಶಿಕ್ಷೆಯು ನಿಮ್ಮ ಬಳಿಗೆ ರಾತ್ರಿಯಲ್ಲಿ ಅಥವಾ ಹಗಲಿನಲ್ಲಿ ಬಂದರೆ, ಅದರಲ್ಲಿ ಯಾವುದಕ್ಕಾಗಿ ಅಪರಾಧಿಗಳು ತ್ವರೆ ಮಾಡುತ್ತಿದ್ದಾರೆ?”
আৰবী তাফছীৰসমূহ:
اَثُمَّ اِذَا مَا وَقَعَ اٰمَنْتُمْ بِهٖ ؕ— آٰلْـٰٔنَ وَقَدْ كُنْتُمْ بِهٖ تَسْتَعْجِلُوْنَ ۟
ನಂತರ ಅದು ಬಂದ ಬಳಿಕ ನೀವು ಅದನ್ನು ನಂಬುವಿರಾ? (ಆಗ ನಿಮ್ಮೊಡನೆ ಹೇಳಲಾಗುವುದು): “ಈಗ ನೀವು ನಂಬುತ್ತೀರಾ? ನೀವು ಇದಕ್ಕಾಗಿ ತ್ವರೆ ಮಾಡುತ್ತಿದ್ದಿರಲ್ಲವೇ?”
আৰবী তাফছীৰসমূহ:
ثُمَّ قِیْلَ لِلَّذِیْنَ ظَلَمُوْا ذُوْقُوْا عَذَابَ الْخُلْدِ ۚ— هَلْ تُجْزَوْنَ اِلَّا بِمَا كُنْتُمْ تَكْسِبُوْنَ ۟
ನಂತರ ಅಕ್ರಮಿಗಳೊಡನೆ ಹೇಳಲಾಗುವುದು: “ಶಾಶ್ವತ ಶಿಕ್ಷೆಯ ರುಚಿಯನ್ನು ನೋಡಿರಿ. ನೀವು ಮಾಡಿದ ಕರ್ಮಗಳಿಗಲ್ಲದೆ ಬೇರೇನಾದರೂ ನಿಮಗೆ ಪ್ರತಿಫಲ ನೀಡಲಾಗುವುದೇ?”
আৰবী তাফছীৰসমূহ:
وَیَسْتَنْۢبِـُٔوْنَكَ اَحَقٌّ هُوَ ؔؕ— قُلْ اِیْ وَرَبِّیْۤ اِنَّهٗ لَحَقٌّ ؔؕ— وَمَاۤ اَنْتُمْ بِمُعْجِزِیْنَ ۟۠
“ಅದು ನಿಜವೇ?” ಎಂದು ಅವರು ನಿಮ್ಮೊಡನೆ ವಿಚಾರಿಸುತ್ತಾರೆ. ಹೇಳಿರಿ: “ಹೌದು! ನನ್ನ ಪರಿಪಾಲಕನ (ಅಲ್ಲಾಹನ) ಆಣೆ! ನಿಶ್ಚಯವಾಗಿಯೂ ಅದು ಸತ್ಯವಾಗಿದೆ. ನಿಮಗೆ ಅಲ್ಲಾಹನನ್ನು ಸೋಲಿಸಲು ಸಾಧ್ಯವಿಲ್ಲ.”
আৰবী তাফছীৰসমূহ:
 
অৰ্থানুবাদ ছুৰা: ইউনুছ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ - অনুবাদসমূহৰ সূচীপত্ৰ

মহম্মদ হামজাৰ দ্বাৰা অনুবাদ কৰা হৈছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ