Check out the new design

আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী * - অনুবাদসমূহৰ সূচীপত্ৰ


অৰ্থানুবাদ ছুৰা: আত-তাওবাহ   আয়াত:
اَلتَّآىِٕبُوْنَ الْعٰبِدُوْنَ الْحٰمِدُوْنَ السَّآىِٕحُوْنَ الرّٰكِعُوْنَ السّٰجِدُوْنَ الْاٰمِرُوْنَ بِالْمَعْرُوْفِ وَالنَّاهُوْنَ عَنِ الْمُنْكَرِ وَالْحٰفِظُوْنَ لِحُدُوْدِ اللّٰهِ ؕ— وَبَشِّرِ الْمُؤْمِنِیْنَ ۟
ಅವರು ಅಲ್ಲಾಹನೆಡೆಗೆ ಪಶ್ಚಾತ್ತಾಪ ಪಟ್ಟು ಮರಳುವವರು, ಆರಾಧನೆ ಮಾಡುವವರು, ಸ್ತುತಿಸುವವರು, ಉಪವಾಸವನ್ನಾಚರಿಸುವವರು, ತಲೆಬಾಗಿಸುವವರು ಸಾಷ್ಟಾಂಗ ಮಾಡುವವರು, ಒಳಿತುಗಳ ಶಿಕ್ಷಣ ನೀಡುವವರು, ಕೆಡಕು ವಿಚಾರಗಳಿಂದ ತಡೆಯುವವರು ಮತ್ತು ಅಲ್ಲಾಹನ ಮೇರೆಗಳ ಎಚ್ಚರ ವಹಿಸುವವರಾಗಿದ್ದಾರೆ. ಮತ್ತು ಇಂತಹ ಸತ್ಯವಿಶ್ವಾಸಿಗಳಿಗೆ ತಾವು ಶುಭವಾರ್ತೆಯನ್ನು ನೀಡಿರಿ.
আৰবী তাফছীৰসমূহ:
مَا كَانَ لِلنَّبِیِّ وَالَّذِیْنَ اٰمَنُوْۤا اَنْ یَّسْتَغْفِرُوْا لِلْمُشْرِكِیْنَ وَلَوْ كَانُوْۤا اُولِیْ قُرْبٰی مِنْ بَعْدِ مَا تَبَیَّنَ لَهُمْ اَنَّهُمْ اَصْحٰبُ الْجَحِیْمِ ۟
ಬಹುದೇವಾರಾಧಕರು ನರಕಕ್ಕೆ ಅರ್ಹರೆಂಬ ವಿಷಯ ಸ್ಪಷ್ಟವಾದ ಬಳಿಕ ಅವರು ಆಪ್ತಬಂಧುಗಳೇ ಆಗಿದ್ದರು. ಅವರ ಕ್ಷಮೆಗಾಗಿ ಪ್ರಾರ್ಥಿಸುವುದು ಪೈಗಂಬರರಿಗೂ, ಸತ್ಯವಿಶ್ವಾಸಿಗಳಿಗೂ ಯುಕ್ತವಲ್ಲ.
আৰবী তাফছীৰসমূহ:
وَمَا كَانَ اسْتِغْفَارُ اِبْرٰهِیْمَ لِاَبِیْهِ اِلَّا عَنْ مَّوْعِدَةٍ وَّعَدَهَاۤ اِیَّاهُ ۚ— فَلَمَّا تَبَیَّنَ لَهٗۤ اَنَّهٗ عَدُوٌّ لِّلّٰهِ تَبَرَّاَ مِنْهُ ؕ— اِنَّ اِبْرٰهِیْمَ لَاَوَّاهٌ حَلِیْمٌ ۟
ಮತ್ತು ಇಬ್ರಾಹೀಮ್‌ರವರು ತನ್ನ ತಂದೆಗಾಗಿ ಕ್ಷಮೆ ಯಾಚಿಸಿದ್ದು ಕೇವಲ ಅವರು ಅವನೊಂದಿಗೆ ಮಾಡಿದ ವಾಗ್ದಾನದಿಂದಾಗಿತ್ತು. ಅನಂತರ ಅವರಿಗೆ ಅವರ ತಂದೆಯು ಅಲ್ಲಾಹನ ಶತ್ರುವೆಂದು ಸ್ಪಷ್ಟವಾದಾಗ ಅವರು ಆತನಿಂದ ಸಂಪೂರ್ಣವಾಗಿ ಬೇಸರದಿಂದ ಸರಿದುಬಿಟ್ಟರು. ಖಂಡಿತವಾಗಿಯೂ ಇಬ್ರಾಹೀಮರು ಅತ್ಯಂತ ಮೃದು ಹೃದಯಿಯೂ, ಸಹನಾಶೀಲರೂ ಆಗಿದ್ದರು.
আৰবী তাফছীৰসমূহ:
وَمَا كَانَ اللّٰهُ لِیُضِلَّ قَوْمًا بَعْدَ اِذْ هَدٰىهُمْ حَتّٰی یُبَیِّنَ لَهُمْ مَّا یَتَّقُوْنَ ؕ— اِنَّ اللّٰهَ بِكُلِّ شَیْءٍ عَلِیْمٌ ۟
ಮತ್ತು ಅಲ್ಲಾಹನು ಯಾವುದೇ ಜನತೆಗೆ ಮಾರ್ಗದರ್ಶನ ನೀಡಿದ ನಂತರ, ಅವರು ತಮ್ಮನ್ನು ಸಂರಕ್ಷಿಸಿಕೊಳ್ಳಲು ವಹಿಸಬೇಕಾದ ಜಾಗರೂಕತೆಗಳನ್ನು ಅವರಿಗೆ ಸ್ಪಷ್ಟಗೊಳಿಸುವ ತನಕ ಅವರನ್ನು ಪಥಭ್ರಷ್ಟಗೊಳಿಸುವುದಿಲ್ಲ. ನಿಸ್ಸಂಶಯವಾಗಿಯೂ ಅಲ್ಲಾಹನು ಸಕಲ ಸಂಗತಿಗಳನ್ನು ಚೆನ್ನಾಗಿ ಅರಿಯುತ್ತಾನೆ.
আৰবী তাফছীৰসমূহ:
اِنَّ اللّٰهَ لَهٗ مُلْكُ السَّمٰوٰتِ وَالْاَرْضِ ؕ— یُحْیٖ وَیُمِیْتُ ؕ— وَمَا لَكُمْ مِّنْ دُوْنِ اللّٰهِ مِنْ وَّلِیٍّ وَّلَا نَصِیْرٍ ۟
ನಿಸ್ಸಂಶಯವಾಗಿಯೂ ಆಕಾಶ ಮತ್ತು ಭೂಮಿಯ ಅಧಿಪತ್ಯವೂ ಅಲ್ಲಾಹನದೇ ಆಗಿದೆ. ಅವನೇ ಜೀವನೀಡುತ್ತಾನೆ ಮತ್ತು ಮರಣಗೊಳಿಸುತ್ತಾನೆ ಮತ್ತು ನಿಮಗೆ ಅಲ್ಲಾಹನ ಹೊರತು ಯಾವ ಮಿತ್ರನಾಗಲೀ, ಸಹಾಯಕನಾಗಲೀ ಇಲ್ಲ.
আৰবী তাফছীৰসমূহ:
لَقَدْ تَّابَ اللّٰهُ عَلَی النَّبِیِّ وَالْمُهٰجِرِیْنَ وَالْاَنْصَارِ الَّذِیْنَ اتَّبَعُوْهُ فِیْ سَاعَةِ الْعُسْرَةِ مِنْ بَعْدِ مَا كَادَ یَزِیْغُ قُلُوْبُ فَرِیْقٍ مِّنْهُمْ ثُمَّ تَابَ عَلَیْهِمْ ؕ— اِنَّهٗ بِهِمْ رَءُوْفٌ رَّحِیْمٌ ۟ۙ
ಅಲ್ಲಾಹನು ಪೈಗಂಬರರನ್ನು ಮತ್ತು ಕಷ್ಟಕಾಲದಲ್ಲಿ ಪೈಗಂಬರರನ್ನು ಅನುಸರಿಸಿದ ಮುಹಾಜಿರ್ ಹಾಗೂ ಅನ್ಸಾರರನ್ನು ಕ್ಷಮಿಸಿಬಿಟ್ಟನು. (ಸಹಿಸಲು ಅಸಾಧ್ಯವಾದ ಶ್ರಮದ ನಿಮಿತ್ತ) ಅವರ ಪೈಕಿಯ ಒಂದು ಗುಂಪಿನವರ ಹೃದಯಗಳಲ್ಲಿ ಸ್ವಲ್ಪ ಮಟ್ಟಿಗೆ ವಿಚಲನೆ ಸಂಭವಿಸಿದ ಬಳಿಕ ಅಲ್ಲ್ಲಾಹನು ಅವರನ್ನು ಕ್ಷಮಿಸಿಬಿಟ್ಟನು. ನಿಸ್ಸಂದೇಹವಾಗಿಯೂ ಅಲ್ಲಾಹನು ಅವರೆಲ್ಲರ ಮೇಲೆ ಮಹಾ ಕೃಪೆಯುಳ್ಳವನೂ, ಕರುಣಾನಿಧಿಯೂ ಆಗಿದ್ದಾನೆ.
আৰবী তাফছীৰসমূহ:
 
অৰ্থানুবাদ ছুৰা: আত-তাওবাহ
ছুৰাৰ তালিকা পৃষ্ঠা নং
 
আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী - অনুবাদসমূহৰ সূচীপত্ৰ

শ্বেইখ বশীৰ মাইছুৰীয়ে অনুবাদ কৰিছে। মৰ্কজ ৰুৱাদুত তাৰ্জামাৰ তত্ত্বাৱধানত ইয়াক উন্নীত কৰা হৈছে।

বন্ধ