Check out the new design

قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى * - تەرجىمىلەر مۇندەرىجىسى


مەنالار تەرجىمىسى سۈرە: تەۋبە   ئايەت:
یٰۤاَیُّهَا النَّبِیُّ جَاهِدِ الْكُفَّارَ وَالْمُنٰفِقِیْنَ وَاغْلُظْ عَلَیْهِمْ ؕ— وَمَاْوٰىهُمْ جَهَنَّمُ ؕ— وَبِئْسَ الْمَصِیْرُ ۟
ಓ ಪೈಗಂಬರರೇ, ಸತ್ಯನಿಷೇಧಿ ಹಾಗೂ ಕಪಟವಿಶ್ವಾಸಿಗಳೊಂದಿಗೂ ಸತ್ಯಕ್ಕಾಗಿ ಯುದ್ಧ ಮಾಡಿರಿ ಮತ್ತು ಅವರೊಂದಿಗೆ ಕಟುವಾಗಿ ವರ್ತಿಸಿರಿ (ಮೃದುತ್ವ ತೋರದಿರಿ). ಅವರ ವಾಸಸ್ಥಳವು ನರಕವಾಗಿದೆ. ಅದು ಅತ್ಯಂತ ನಿಕೃಷ್ಟ ಸ್ಥಳವಾಗಿದೆ.
ئەرەپچە تەپسىرلەر:
یَحْلِفُوْنَ بِاللّٰهِ مَا قَالُوْا ؕ— وَلَقَدْ قَالُوْا كَلِمَةَ الْكُفْرِ وَكَفَرُوْا بَعْدَ اِسْلَامِهِمْ وَهَمُّوْا بِمَا لَمْ یَنَالُوْا ۚ— وَمَا نَقَمُوْۤا اِلَّاۤ اَنْ اَغْنٰىهُمُ اللّٰهُ وَرَسُوْلُهٗ مِنْ فَضْلِهٖ ۚ— فَاِنْ یَّتُوْبُوْا یَكُ خَیْرًا لَّهُمْ ۚ— وَاِنْ یَّتَوَلَّوْا یُعَذِّبْهُمُ اللّٰهُ عَذَابًا اَلِیْمًا فِی الدُّنْیَا وَالْاٰخِرَةِ ۚ— وَمَا لَهُمْ فِی الْاَرْضِ مِنْ وَّلِیٍّ وَّلَا نَصِیْرٍ ۟
(ಕಪಟವಿಶ್ವಾಸಿಗಳು) ನಾವು ಏನು ಹೇಳಿಲ್ಲವೆಂದು ಅವರು ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ವಸ್ತುತಃ ಸತ್ಯನಿಷೇಧದ ಮಾತನ್ನು ಅವರು ಆಡಿದ್ದಾರೆ. ಮತ್ತು ತಮ್ಮ ಇಸ್ಲಾಮ್ ಸ್ವೀಕಾರದ ನಂತರ ಅವರು ಸತ್ಯನಿಷೇಧಿಗಳಾಗಿ ಬಿಟ್ಟರು. ಮತ್ತು ಅವರು ತಮಗೆ ಮಾಡಲು ಸಾಧ್ಯವಾಗದ ಸಂಗತಿಯನ್ನೂ (ಪೈಗಂಬರವರನ್ನು ವಧಿಸಲು) ನಿರ್ಧರಿಸಿದ್ದರು. ಅಲ್ಲಾಹನು ತನ್ನ ಅನುಗ್ರಹದಿಂದ ಮತ್ತು ಅವನ ಸಂದೇಶವಾಹಕರು ಅವರಿಗೆ (ಮದೀನಾ ವಾಸಿಗಳಿಗೆ) ಸಂಪತ್ತÀನ್ನು ನೀಡಿದರು ಎಂಬ ವಿಚಾರವೇ ಅವರ ಪ್ರತೀಕಾರಕ್ಕೆ ಕಾರಣವಾಗಿದೆ. ಇನ್ನು ಅವರು ಪಶ್ಚಾತ್ತಾಪ ಪಡುವುದಾದರೆ ಅದು ಅವರ ಪಾಲಿಗೆ ಅತ್ಯುತ್ತಮವಾಗಿದೆ. ಮತ್ತು ಅವರೇನಾದರೂ ವಿಮುಖರಾಗುವುದಾದರೆ ಅಲ್ಲಾಹನು ಅವರಿಗೆ ಇಹಲೋಕದಲ್ಲೂ, ಪರಲೋಕದಲ್ಲೂ ವೇದನಾಜನಕವಾದ ಶಿಕ್ಷೆಯನ್ನು ನೀಡುವನು ಮತ್ತು ಇಡೀ ಭೂಮಿಯಲ್ಲಿ ಅವರಿಗೆ ಯಾವೊಬ್ಬ ಬೆಂಬಲಿಗನಾಗಲೀ, ಸಹಾಯಕನಾಗಲೀ ಇರಲಾರನು.
ئەرەپچە تەپسىرلەر:
وَمِنْهُمْ مَّنْ عٰهَدَ اللّٰهَ لَىِٕنْ اٰتٰىنَا مِنْ فَضْلِهٖ لَنَصَّدَّقَنَّ وَلَنَكُوْنَنَّ مِنَ الصّٰلِحِیْنَ ۟
ಅಲ್ಲಾಹನು ತನ್ನ ಅನುಗ್ರಹದಿಂದ ನಮಗೆ ಏನಾದರೂ ನೀಡುವುದಾದರೆ ಖಂಡಿತವಾಗಿಯು ನಾವು ದಾನ ಧರ್ಮ ಮಾಡುವೆವು ಮತ್ತು ಸಜ್ಜನರ ಪೈಕಿ ಸೇರುವೆವು ಎಂದು ಅಲ್ಲಾಹನೊಂದಿಗೆ ಕರಾರು ಮಾಡಿದವರು ಅವರ ಪೈಕಿ ಇದ್ದಾರೆ.
ئەرەپچە تەپسىرلەر:
فَلَمَّاۤ اٰتٰىهُمْ مِّنْ فَضْلِهٖ بَخِلُوْا بِهٖ وَتَوَلَّوْا وَّهُمْ مُّعْرِضُوْنَ ۟
ಆದರೆ ಅಲ್ಲಾಹನು ತನ್ನ ಅನುಗ್ರಹವನ್ನು ಅವರಿಗೆ ನೀಡಿದಾಗ ಅವರದರಲ್ಲಿ ಜಿಪುಣತೆಯನ್ನು ತೋರಿದರು ಮತ್ತು ನೆಪಗಳನ್ನೊಡ್ಡುತ್ತಾ ವಿಮುಖರಾಗಿ ಬಿಟ್ಟರು.
ئەرەپچە تەپسىرلەر:
فَاَعْقَبَهُمْ نِفَاقًا فِیْ قُلُوْبِهِمْ اِلٰی یَوْمِ یَلْقَوْنَهٗ بِمَاۤ اَخْلَفُوا اللّٰهَ مَا وَعَدُوْهُ وَبِمَا كَانُوْا یَكْذِبُوْنَ ۟
ಅವರು ಅಲ್ಲಾಹನೊಂದಿಗೆ ಮಾಡಿದ ವಾಗ್ದಾನವನ್ನು ಉಲ್ಲಂಘಿಸಿದುದಕ್ಕಾಗಿ ಮತ್ತು ಸುಳ್ಳು ಹೇಳಿದುದಕ್ಕಾಗಿ ಅವರು ಅಲ್ಲಾಹನನ್ನು ಭೇಟಿಯಾಗುವ ದಿನದವರೆಗೆ ಶಿಕ್ಷಾರ್ಹವಾಗಿ ಅವರ ಹೃದಯಗಳಲ್ಲಿ ಕಾಪಟ್ಯವನ್ನು ಹಾಕಿಬಿಟ್ಟನು.
ئەرەپچە تەپسىرلەر:
اَلَمْ یَعْلَمُوْۤا اَنَّ اللّٰهَ یَعْلَمُ سِرَّهُمْ وَنَجْوٰىهُمْ وَاَنَّ اللّٰهَ عَلَّامُ الْغُیُوْبِ ۟ۚ
ನಿಶ್ಚಯವಾಗಿಯು ಅಲ್ಲಾಹನು ಅವರ ರಹಸ್ಯಗಳನ್ನು ಮತ್ತು ಗೂಢಾಲೋಚನೆಗಳನ್ನು ಅರಿಯುವವನೆಂದೂ ಮತ್ತು ಖಂಡಿತವಾಗಿ ಅಲ್ಲಾಹನು ಅಗೋಚರ ವಿಷಯಗಳನ್ನು ಅರಿಯುವವನೆಂದೂ ಅವರಿಗೆ ತಿಳಿದಿಲ್ಲವೇ?
ئەرەپچە تەپسىرلەر:
اَلَّذِیْنَ یَلْمِزُوْنَ الْمُطَّوِّعِیْنَ مِنَ الْمُؤْمِنِیْنَ فِی الصَّدَقٰتِ وَالَّذِیْنَ لَا یَجِدُوْنَ اِلَّا جُهْدَهُمْ فَیَسْخَرُوْنَ مِنْهُمْ ؕ— سَخِرَ اللّٰهُ مِنْهُمْ ؗ— وَلَهُمْ عَذَابٌ اَلِیْمٌ ۟
ವಿಶ್ವಾಸಿಗಳ ಪೈಕಿ ಸ್ವ-ಇಚ್ಛೆಯಿಂದ ದಾನಧರ್ಮ ಮಾಡುವವರನ್ನು ಮತ್ತು ತಮ್ಮ ಪರಿಶ್ರಮ ಫಲದ ಹೊರತು ಬೇರೇನೂ ಪಡೆಯದಂತಹವರನ್ನು ಕಪಟಿಗಳು ದೋಷಿಸುತ್ತಾರೆ. ಇವರು ಅವರ ಅಪಹಾಸ್ಯ ಮಾಡುತ್ತಾರೆ. ಹಾಗೆಯೇ ಅಲ್ಲಾಹನು ಸಹ ಅವರನ್ನು ಅಪಹಾಸ್ಯ ಮಾಡುತ್ತಾನೆ. ಅವರಿಗೆ ವೇದನಾಜನಕವಾದ ಶಿಕ್ಷೆಯಿದೆ.
ئەرەپچە تەپسىرلەر:
 
مەنالار تەرجىمىسى سۈرە: تەۋبە
سۈرە مۇندەرىجىسى بەت نومۇرى
 
قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى - تەرجىمىلەر مۇندەرىجىسى

بۇ تەرجىمىنى شەيخ بەشىر مەيسۇرى تەرجىمە قىلغان. رۇۋاد تەرجىمە مەركىزىنىڭ رىياسەتچىلىكىدە تەرەققىي قىلدۇرۇلغان.

تاقاش