Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಯೂಸುಫ್   ಶ್ಲೋಕ:
وَاتَّبَعْتُ مِلَّةَ اٰبَآءِیْۤ اِبْرٰهِیْمَ وَاِسْحٰقَ وَیَعْقُوْبَ ؕ— مَا كَانَ لَنَاۤ اَنْ نُّشْرِكَ بِاللّٰهِ مِنْ شَیْءٍ ؕ— ذٰلِكَ مِنْ فَضْلِ اللّٰهِ عَلَیْنَا وَعَلَی النَّاسِ وَلٰكِنَّ اَكْثَرَ النَّاسِ لَا یَشْكُرُوْنَ ۟
ನನ್ನ ಪೂರ್ವಜರಾದ ಇಬ್ರಾಹೀಮ್, ಇಸ್‌ಹಾಕ್, ಯಾಕೂಬ್ ರವರ ಮಾರ್ಗವನ್ನು ನಾನು ಅವಲಂಬಿಸಿದ್ದೇನೆ. ಅಲ್ಲಾಹನೊಂದಿಗೆ ಇತರರಲ್ಲೂ ಸಹಭಾಗಿಯನ್ನಾಗಿ ನಿಶ್ಚಯಿಸುವುದು ನಮಗೆ ಭೂಷÀಣವಲ್ಲ. ಇದು (ಏಕದೇವ ವಿಶ್ವಾಸ) ನಮ್ಮ ಮೇಲೆ ಮತ್ತು ಸಕಲ ಜನರ ಮೇಲೆ ಅಲ್ಲಾಹನ ಅನುಗ್ರಹವಾಗಿದೆ. ಆದರೆ ಹೆಚ್ಚಿನ ಜನರು ಕೃತಜ್ಞತೆ ತೋರುವುದಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
یٰصَاحِبَیِ السِّجْنِ ءَاَرْبَابٌ مُّتَفَرِّقُوْنَ خَیْرٌ اَمِ اللّٰهُ الْوَاحِدُ الْقَهَّارُ ۟ؕ
ಓ ನನ್ನ ಸೆರೆಮನೆಯ ಸಂಗಾತಿಗಳೇ ಅನೇಕ ವಿಭಿನ್ನ ದೇವರುಗಳು ಉತ್ತಮರೋ ಅಥವಾ ಸರ್ವ ಸಮರ್ಥನಾದ ಏಕೈಕ ಅಲ್ಲಾಹನೋ ?
ಅರಬ್ಬಿ ವ್ಯಾಖ್ಯಾನಗಳು:
مَا تَعْبُدُوْنَ مِنْ دُوْنِهٖۤ اِلَّاۤ اَسْمَآءً سَمَّیْتُمُوْهَاۤ اَنْتُمْ وَاٰبَآؤُكُمْ مَّاۤ اَنْزَلَ اللّٰهُ بِهَا مِنْ سُلْطٰنٍ ؕ— اِنِ الْحُكْمُ اِلَّا لِلّٰهِ ؕ— اَمَرَ اَلَّا تَعْبُدُوْۤا اِلَّاۤ اِیَّاهُ ؕ— ذٰلِكَ الدِّیْنُ الْقَیِّمُ وَلٰكِنَّ اَكْثَرَ النَّاسِ لَا یَعْلَمُوْنَ ۟
ಅವನ ಹೊರತು ನೀವು ಆರಾಧಿಸುತ್ತಿರುವವುಗಳೆಲ್ಲವೂ ನೀವು ನಿಮ್ಮ ಪೂರ್ವಿಕರು ಸ್ವತಃ ಇರಿಸಿಕೊಂಡಿರುವAತಹಾ ಕೆಲವು ಹೆಸರುಗಳಾಗಿವೆ. ಅಲ್ಲಾಹನು ಅವುಗಳ ಬಗ್ಗೆ ಯಾವ ಆಧಾರವನ್ನು ಇಳಿಸಿಲ್ಲ, ಆಜ್ಞಾಧಿಕಾರವು ಕೇವಲ ಅಲ್ಲಾಹನದೇ ಆಗಿದೆ. ಅವನ ಹೊರತು ಇನ್ನಾರ ಆರಾಧನೆ ಮಾಡಬಾರದೆಂದು ಅವನು ಆಜ್ಞಾಪಿಸಿದ್ದಾನೆ ಇದುವೇ ನಿಜವಾದ ಧರ್ಮವಾಗಿದೆ, ಆದರೆ ಹೆಚ್ಚಿನ ಜನರು ತಿಳಿಯುವುದಿಲ್ಲ.
ಅರಬ್ಬಿ ವ್ಯಾಖ್ಯಾನಗಳು:
یٰصَاحِبَیِ السِّجْنِ اَمَّاۤ اَحَدُكُمَا فَیَسْقِیْ رَبَّهٗ خَمْرًا ۚ— وَاَمَّا الْاٰخَرُ فَیُصْلَبُ فَتَاْكُلُ الطَّیْرُ مِنْ رَّاْسِهٖ ؕ— قُضِیَ الْاَمْرُ الَّذِیْ فِیْهِ تَسْتَفْتِیٰنِ ۟ؕ
ಓ ಸೆರೆಮನೆಯ ನನ್ನ ಸಂಗಾತಿಗಳೇ ನಿಮ್ಮಿಬ್ಬರಲ್ಲಿ ಒಬ್ಬನಂತೂ ತನ್ನ ರಾಜನಿಗೆ ಮದ್ಯ ಕುಡಿಸಲು ನೇಮಕವಾಗಲಿದ್ದಾನೆ. ಆದರೆ ಇನ್ನೊಬ್ಬನು ಗಲ್ಲಿಗೇರಿಸಲ್ಪಡುವನು ಮತ್ತು ಪಕ್ಷಿಗಳು ಅವನ ತಲೆಯನ್ನು ಕುಕ್ಕಿಕುಕ್ಕಿ ತಿನ್ನಲಿವೆ, ನೀವಿಬ್ಬರೂ ವಿಚಾರಿಸಿದಂತಹಾ ಸಂಗತಿಯ ತೀರ್ಮಾನವು ಆಗಿಬಿಟ್ಟಿದೆ.
ಅರಬ್ಬಿ ವ್ಯಾಖ್ಯಾನಗಳು:
وَقَالَ لِلَّذِیْ ظَنَّ اَنَّهٗ نَاجٍ مِّنْهُمَا اذْكُرْنِیْ عِنْدَ رَبِّكَ ؗ— فَاَنْسٰىهُ الشَّیْطٰنُ ذِكْرَ رَبِّهٖ فَلَبِثَ فِی السِّجْنِ بِضْعَ سِنِیْنَ ۟۠
ಅವರಿಬ್ಬರಲ್ಲಿ ಬಿಡುಗಡೆಹೊಂದುವನೆAದು ತಾನು ಭಾವಿಸಿಕೊಂಡ ವ್ಯಕ್ತಿಯೊಡನೆ ಯೂಸುಫ್‌ರವರು ಹೇಳಿದರು, ನಿನ್ನ ರಾಜನ ಬಳಿ ನನ್ನ ಪ್ರಸ್ತಾಪವನ್ನು ಮಾಡು. ಆದರೆ ಶೈತಾನನೂ ಅವನಿಗೆ ತನ್ನ ರಾಜನ ಬಳಿ ಹೇಳುವುದನ್ನು ಮರೆಯುವಂತೆ ಮಾಡಿದನು ಮತ್ತು ಯೂಸುಫ್ ಹಲವು ವರ್ಷಗಳವರೆಗೆ ಸೆರೆಮನೆಯಲ್ಲೇ ಕಳೆದರು.
ಅರಬ್ಬಿ ವ್ಯಾಖ್ಯಾನಗಳು:
وَقَالَ الْمَلِكُ اِنِّیْۤ اَرٰی سَبْعَ بَقَرٰتٍ سِمَانٍ یَّاْكُلُهُنَّ سَبْعٌ عِجَافٌ وَّسَبْعَ سُنْۢبُلٰتٍ خُضْرٍ وَّاُخَرَ یٰبِسٰتٍ ؕ— یٰۤاَیُّهَا الْمَلَاُ اَفْتُوْنِیْ فِیْ رُءْیَایَ اِنْ كُنْتُمْ لِلرُّءْیَا تَعْبُرُوْنَ ۟
ರಾಜನು ಹೇಳಿದನು; ನಾನು ಕನಸಿನಲ್ಲಿ ಏಳು ಕೊಬ್ಬಿದ ಹಸುಗಳನ್ನು ಏಳು ಸಣಕಲು ಹಸುಗಳು ತಿನ್ನುತ್ತಿರುವುದಾಗಿ ಮತ್ತು ಧಾನ್ಯದ ಏಳು ತೆನೆಗಳು ಹಸಿರಾಗಿದ್ದು ಇತರ ಏಳು ಒಣಗಿದವುಗಳಾಗಿ ಕಂಡಿರುವೆನು. ಓ ಆಸ್ಥಾನದ ಪ್ರಮುಖರೇ, ನೀವು ಕನಸುಗಳ ವ್ಯಾಖ್ಯಾನ ಬಲ್ಲವರಾಗಿದ್ದರೆ ನನ್ನ ಈ ಕನಸಿನ ವ್ಯಾಖ್ಯಾನವನ್ನು ತಿಳಿಸಿರಿ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಯೂಸುಫ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ